ನರಸಿಂಹರಾಜಪುರ ಪಪಂ ಬಜೆಟ್: ₹7.17 ಕೋಟಿ ಆದಾಯ ನಿರೀಕ್ಷೆ

KannadaprabhaNewsNetwork |  
Published : Mar 28, 2026, 01:30 AM IST
 ನರಸಿಂಹರಾಜಪುರ ಪಟ್ಟಣ ಪಂಚಾಯಿತಿಯ 2026-27 ನೇ ಸಾಲಿನ ಬಜೆಟ್ ನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ  ತಹಶೀಲ್ದಾರ್ ಡಾ.ನೂರಲ್ ಹುದಾ ಮಂಡಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಪಟ್ಟಣ ಪಂಚಾಯಿತಿಯಿಂದ 2026–27ನೇ ಸಾಲಿಗೆ ₹57 ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ನೂರುಲ್ ಹುದಾ ಆಯವ್ಯಯ ಮಂಡಿಸಿದರು.

57 ಲಕ್ಷ ರು. ಉಳಿತಾಯದ ಆಯವ್ಯಯ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಟ್ಟಣ ಪಂಚಾಯಿತಿಯಿಂದ 2026–27ನೇ ಸಾಲಿಗೆ ₹57 ಲಕ್ಷ ಉಳಿತಾಯ ಆಯವ್ಯಯ ಮಂಡಿಸಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ನೂರುಲ್ ಹುದಾ ಆಯವ್ಯಯ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿದಂತೆ ₹7 ಕೋಟಿ17ಲಕ್ಷದ 42,560 ಆದಾಯ ನಿರೀಕ್ಷಿಸಲಾಗಿದೆ. ₹6ಕೋಟಿ 60ಲಕ್ಷದ 42ಸಾವಿರದ 566 ವೆಚ್ಚ ಅಂದಾಜಿಸಲಾಗಿದೆ. ಪಟ್ಟಣ ಪಂಚಾಯಿತಿಗೆ ನೀರಿಕ್ಷಿಸಲಾದ ಆದಾಯ ಬರುವ ಮೂಲ ಗಳೆಂದರೆ ವಾಣಿಜ್ಯ ಮಳಿಗೆಗಳು ಹಾಗೂ ನೆಲಬಾಡಿಗೆಯಿಂದ ₹72.26 ಲಕ್ಷ, ಇತರೆ ಜಮೆ ₹41.03ಲಕ್ಷ, ನೀರಿನ ತೆರಿನ ತೆರಿಗೆ ₹20.20ಲಕ್ಷ, ಸರ್ಕಾರದ ಅನುದಾನಗಳಾದ ಎಸ್ ಎಫ್ ಸಿ ಮುಕ್ತನಿಧಿ ಅನುದಾನ ₹2ಲಕ್ಷ, ಎಸ್ ಎಫ್ ಸಿ ವಿಶೇಷ ಅನುದಾನ ₹10ಲಕ್ಷ, 16ನೇ ಹಣಕಾಸು ಯೋಜನೆ ಅನುದಾನ ₹90ಲಕ್ಷ, ಸಲ್ಮ್ ಯೋಜನೆ ಅನುದಾನ ₹3ಲಕ್ಷ, ಆಶ್ರಯ ಯೋಜನೆ ಅನುದಾನ ₹5ಲಕ್ಷ, ಕುಡಿಯುವ ನೀರಿನ ಅನುದಾನ ₹5ಲಕ್ಷ, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರ ವಿಶೇಷ ಅನುದಾನ ಮತ್ತು ಅತಿವೃಷ್ಠಿ ಪರಿಹಾರ ಅನುದಾನ ₹5ಲಕ್ಷ, ವೇತನ ಅನುದಾನ ₹1.45ಕೋಟಿ, ವಿದ್ಯುತ್ ಶಕ್ತಿ ಅನುದಾನ ₹66ಲಕ್ಷ, ಸ್ವಚ್ ಭಾರತ್ ಯೋಜನೆ ಅನುದಾನ ₹20ಲಕ್ಷ. ಒಟ್ಟು ₹5.29 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಿ ನಿರೀಕ್ಷಿತ ಅಂದಾಜು ವೆಚ್ಚದ ಮೂಲಗಳು ಯಾವುದೆಂದರೆ ಕಚೇರಿ ಆಡಳಿತಾತ್ಮಕ ವೆಚ್ಚಗಳು, ನೌಕರರ ವೇತನ ₹2.47ಕೋಟಿ, ಕಚೇರಿ ಉಪಕರಣ ಹಾಗೂ ಪೀಠೋಪಕರಣಗಳು ₹20ಲಕ್ಷ, ವಂತಿಕೆಗಳು ಮತ್ತು ಸಹಾಯಧನ ₹13ಲಕ್ಷ, ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ ₹22.20ಲಕ್ಷ, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ಮಾಣ ₹60ಲಕ್ಷ, ನೀರು ವಿತರಣಾ ವ್ಯವಸ್ಥೆ ₹25ಲಕ್ಷ, ಬೀದಿ ದೀಪಗಳ ವ್ಯವಸ್ಥೆ ₹10ಲಕ್ಷ, ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಸಮುದಾಯ ಭವನಗಳ ಅಭಿವೃದ್ಧಿ ₹31ಲಕ್ಷ, ಸ್ಮಶಾನ, ಉದ್ಯಾನಗಳ ಅಭಿವೃದ್ಧಿ ಹಾಗೂ ನಾಗರಿಕ ವಿನ್ಯಾಸಗಳಿಗೆ ₹55ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧಿ ₹55ಲಕ್ಷ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಕಲ್ಯಾಣ ಕಾರ್ಯಕ್ರಕ್ಕೆ ₹1.88 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ ₹98 ಸಾವಿರ ವೆಚ್ಚವಾಗಬಹುದೆಂದು ನೀರಿಕ್ಷಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಎಂಜಿನಿಯರ್ ಅಶ್ವಿನಿ, ಲೆಕ್ಕಾಧಿಕಾರಿ ಉಷಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾವಾಭಿವ್ಯಕ್ತಿಯ ಜೊತೆಗೆ ಮನುಷ್ಯ ಸಂವೇದನೆಯೂ ಮುಖ್ಯ
ರಾಮಾಯಣದಿಂದ ಬದುಕಿಗೆ ಸಮಗ್ರ ದೃಷ್ಟಿ