ಡಾ.ದರಕಗೆ ನಾರಾಯಣ ಹೃದಯಾಲಯದ ಗೌರವ ಪ್ರಶಸ್ತಿ

KannadaprabhaNewsNetwork |  
Published : May 28, 2024, 01:12 AM IST
೨೭ ಇಳಕಲ್ಲ 4 | Kannada Prabha

ಸಾರಾಂಶ

ಇಳಕಲ್ಲ ನಗರದ ಚಿಕ್ಕ ಮಕ್ಕಳ ವೈದ್ಯ ಡಾ. ಪವನ ದರಕ ಅವರ ಅಮೋಘ ಸೇವೆ ಕಂಡು ಬೆಂಗಳೂರಿನ ನಾರಾಯಣ ಹೃದಯಾಲಯದವರು ಸಮಾಜ ಸೇವೆಗೆ ಕೋಡುವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.

ಇಳಕಲ್ಲ: ನಗರದ ಚಿಕ್ಕ ಮಕ್ಕಳ ವೈದ್ಯ ಡಾ. ಪವನ ದರಕ ಅವರ ಅಮೋಘ ಸೇವೆ ಕಂಡು ಬೆಂಗಳೂರಿನ ನಾರಾಯಣ ಹೃದಯಾಲಯದವರು ಸಮಾಜ ಸೇವೆಗೆ ಕೋಡುವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.

ಇಳಕಲ್ಲಿನ ಈ ಭಾಗದಲ್ಲಿ ಥೆಲೇಸಿಮಿಯಾ ಎಂಬ ಭಯಂಕರ ರೋಗದಿಂದ ಮಕ್ಕಳು ಸಾವನಪ್ಪುತ್ತಿದ್ದು, ಆ ರೋಗ ಬಂದ ಅನೇಕ ಚಿಕ್ಕಮಕ್ಕಳು ರೋಗ ನಿಯಂತ್ರಣಕ್ಕಾಗಿ ₹ ೨೦ ಲಕ್ಷ ಖರ್ಚು ಮಾಡಲು ಆಗದೆ ಮಕ್ಕಳು ಸಾವನ್ನಪ್ಪುತ್ತಿದ್ದರು. ಇದನ್ನು ಮನಗೊಂಡ ಡಾ.ಪವನ ದರಕ ಅವರು ರಾಮಾನುಜಾಚಾರ್ಯ ಫೌಂಡೇಶನ್ ಎಂಬ ಸಂಸ್ಥೆಯನ್ನು ತಮ್ಮ ಸಮಾಜದ ಗೇಳೆಯರೊಂದಿಗೆ ಸ್ತಾಪಿಸಿ ಆ ಸಂಸ್ಥೆಯ ಸಹಾಯದೊಂದಿಗೆ ಥೇಲೆಸಿಮಿಯಾ ರೋಗ ಬಂದ ಬಡ ಮಕ್ಕಳಿಗೆ ಉಚಿತವಾಗಿ ಆರ್ಥಿಕ ಸಹಾಯ ಮಾಡುವುದಲ್ಲದೆ ಅವರ ಸಂಪೂರ್ಣ ಆರೋಗ್ಯವಾಗುವವರೆಗೂ ಆ ಮಗುವಿನ ಆರೋಗ್ಯ ರಕ್ಷಣೆಯ ಜವಾಬ್ದಾರಿ ಮಾಡುತ್ತಾರೆ. ಹಿಗಾಗಿ ಈ ಭಾಗದ ಅನೇಕ ಬಡ ಕುಟುಂಬಗಳು ಈ ಸಹಾಯಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ಕಂಡ ಬೆಂಗಳೂರಿನ ನಾರಾಯಣ ಹೃದಯಾಲಯ ಇವರು ಡಾ.ಪವನ ದಂಪತಿಗೆ ಪ್ರಶಸ್ತಿ ಕೊಟ್ಟು ಸತ್ಕರಿಸಿದೆ. ಡಾ.ಪವನ ದರಕ ಅವರಿಗೆ ದೊರೆತ ಪ್ರಶಸ್ತಿಗೆ ಇಳಕಲ್ಲ ನಗರದ ಅನೇಕ ಸಂಘ ಸಂಸ್ಥೆಯವರು ಹಾಗೂ ಮಾಹೇಶ್ವರಿ ಸಮಾಜದವರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ