ಕನ್ನಡಪ್ರಭ ವಾರ್ತೆ ಹೊಸದುರ್ಗ
ನಾಟಕೋತ್ಸವದಲ್ಲಿ ಶಿವಸಂಚಾರದ 3 ನಾಟಕಗಳು ಮತ್ತು ಪರಭಾಷೆಯ ನಾಟಕಗಳು ಪ್ರದರ್ಶನಗೊಳ್ಳುವವು. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ ಎಂದರು.
ಕಾರ್ಯಕ್ರಮ ಅತಿಥಿಗಳು, ಸ್ವಾಮೀಜಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ನಾಟಕಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕು ಸಾಧು ಸದ್ಧರ್ಮ ವೀರಶೈವ ಸಮಾಜದ ಅಧ್ಯಕ್ಷ ಎಸ್. ಸಿದ್ದಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕಾಟೇಹಳ್ಳಿ ಶಿವಕುಮಾರ್, ಬನ್ಸಿಹಳ್ಳಿ ಅಜ್ಜಪ್ಪ, ಬಿ.ಪಿ ಓಂಕಾರಪ್ಪ, ಕೆ. ಬಸವರಾಜ್, ತಿಮ್ಮಜ್ಜ, ಸಿದ್ದಯ್ಯ, ಕೃಷ್ಣಮೂರ್ತಿ, ಸಾನಿ ರವಿಕುಮಾರ, ಎಸ್.ಆರ್ ಮಂಜುನಾಥ್, ವೀರಭದ್ರಪ್ಪ, ಸ್ವಾಮಿ, ಯುವ ಮುಖಂಡರು, ಪ್ರಭುದೇವ, ಷಣ್ಮುಖಯ್ಯ, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಆರಂಭದಲ್ಲಿ ಎಲ್. ಷಣ್ಮುಖಯ್ಯ ಪ್ರಾರ್ಥಿಸಿದರು. ಎಸ್ ಕೆ. ಪರಮೇಶ್ವರಯ್ಯ ಸ್ವಾಗತಿಸಿದರು. ಎಸಿ. ಚಂದ್ರಪ್ಪ ವಂದಿಸಿದರು. ನಾಟಕೋತ್ಸವಕ್ಕೆ ಅಜ್ಜಂಪುರದ ಎಸಿ. ಚಂದ್ರಪ್ಪ 18 ಕ್ವಿಂಟಲ್ ಈರುಳ್ಳಿಯನ್ನು ಶ್ರೀಮಠಕ್ಕೆ ತಂದುಕೊಟ್ಟರು.