ಮೈತ್ರಿಯಿಂದಾಗಿ ಎನ್‌ಡಿಎ ಅಭ್ಯರ್ಥಿ ಗೆಲುವು ಸುಲಭ

KannadaprabhaNewsNetwork | Published : Apr 7, 2024 1:46 AM

ಸಾರಾಂಶ

ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾಜಿ ಪ್ರಧಾನಿ ದೇವೆಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ದೂರದೃಷ್ಟಿ ಮತ್ತು ದೇಶದ ಬಗೆಗಿನ ಕಳಕಳಿಯಿಂದಾಗಿ ದೇಶದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಮೈತ್ರಿಯಿಂದಾಗಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್. ಬಾಲರಾಜು ಅವರ ಗೆಲುವು ಸುಲಭವಾಗಿದೆ ಎಂದು ಶಾಸಕ ಮಂಜುನಾಥ್ ಹೇಳಿದರು. ಉಗನಿಯದ ಹೊಸವಾಡಿ ವೀರಭದ್ರಸ್ವಾಮಿ ದೇಗುಲದ ಸಮೀಪದಲ್ಲಿ ಅಯೋಜಿಸಿದ್ದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ 2 ಬಾರಿ ಪ್ರಧಾನಿಯಾಗಿರುವುದು ನಿಜಕ್ಕೂ ಹೆಮ್ಮೆ, ಅಂತಹ ದೇಶದ ಬಗ್ಗೆ ಚಿಂತನೆಯುಳ್ಳವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಈನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಿದೆ. ಬಾಲರಾಜು ಅವರು ಸರಳ, ಸಜ್ಜನ ವ್ಯಕ್ತಿ ಅವರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಕೈ ಬಲಪಡಿಸೋಣ ಎಂದರು.

ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ನಮ್ಮ ಮೈತ್ರಿ ಕೂಟದ ಅಭ್ಯರ್ಥಿ ಬಾಲರಾಜು ಅವರು ಸಜ್ಜನ ವ್ಯಕ್ತಿ, ಜನರ ಸಮಸ್ಯೆಗಳನ್ನು ಆಲಿಸುವ ಶಕ್ತಿ ಇದೆ. ಅವರು ಸ್ಥಳೀಯರು, ಅವರನ್ನು ಬೆಂಬಲಿಸಿ ಈಬಾರಿ ಸಂಸತ್ ಗೆ ಕಳುಹಿಸಿಕೊಟ್ಟರೆ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸಿ ಅವರ ಕೈ ಬಲಪಡಿ ಸಲು ಸಾಧ್ಯವಿದೆ. ಹಾಗಾಗಿ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದರು. ಬಾಲರಾಜು ಸರಳ ವ್ಯಕ್ತಿ, ಬಾಲರಾಜ್ ನಿಮ್ಮ ಮನೆ ಮಗನಿದ್ದಂತೆ, ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಗಿರುವ ಗ್ಯಾರಂಟಿಗಳಿಗೆ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೆ ಎಸ್ಸಿ, ಎಸ್ಟಿಗೆ ನೀಡಲಾದ ಅನುಧಾನ ಬಳಕೆ ಮಾಡಿಕೊಂಡಿದೆ, ಎಸ್ಸಿ, ಎಸ್ ಟಿ ಜನಾಂಗಕ್ಕೆ ಜಮೀನು ಖರೀದಿ, ಕೊಳವೆಬಾವಿ, ಸ್ಕಾಲರ್ ಶಿಪ್, ರಸ್ತೆ, ಚರಂಡಿಗೆ ಖರ್ಚು ಮಾಡಬೇಕಾದ 25ಸಾವಿರ ಕೋಟಿಯನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ.

ಕಾರಣ ಸರ್ಕಾರದ ಬಳಿ ಹಣವಿಲ್ಲ, ಇದೊಂದು ಅವ್ಯವಸ್ಥೆಯ ಅನ್ಯಾಯಕಾರರ ಸರ್ಕಾರ, ದೇಶದ ರೈತರು, ಬಡವರು, ಮಹಿಳೆಯರ ಹಿತದೃಷ್ಟಿಯಿಂದ ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ತಾಯಂದಿರು ಆಶೀರ್ವಾದ ಮಾಡಬೇಕಿದೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಡಾ.ಪ್ರೀತನ್ ನಾಗಪ್ಪ, ಯುವ ಮುಖಂಡ ನಿಶಾಂತ್, ಡಾ.ದತ್ತೇಶ್ ಕುಮಾರ್, ಜೆಡಿಎಸ್ ಮುಖಂಡರಾದ ಶಿವಮೂರ್ತಿ, ಬಾಬು, ಒಬಿಸಿ ಜಿಲ್ಲಾಧ್ಯಕ್ಷ ನಿಜಧ್ವನಿ ವೆಂಕಟೇಶ್, ಪಾಳ್ಯ ಜಯಸುಂದರ್, ಬೂದಬಾಳು ವೆಂಕಟಸ್ವಾಮಿ, ವೃಷಬೇಂದ್ರ, ಡಾ. ಬಾಬು, ಕೆಂಪರಾಜು, ಸುರೇಶ್, ಬಸವಣ್ಣ, ಉಗನಿಯ ಮೂರ್ತಿ ಮಹದೇವಸ್ವಾಮಿ ರವಿಶಂಕರ್, ಬೖಂಗೇಶ್, ದಿನೇಶ್, ಜಿ ಮಹದೇವಪ್ಪ, ಜಿನಕನಹಳ್ಳಿ ಶ್ರೀನಿವಾಸ್ ಹಾಜರಿದ್ದರು.

ಪುತ್ರನ ಅಧಿಕಾರಕ್ಕಾಗಿ ಬೇಡುತ್ತಿದ್ದಾರೆ: ಬಾಲರಾಜುಮೈತ್ರಿ ಕೂಟದ ಅಭ್ಯರ್ಥಿ ಎಸ್ ಬಾಲರಾಜು ಮಾತನಾಡಿ, ಇಂದು ಅಧಿಕಾರ ಇರುವವರು ತಮ್ಮ ಪುತ್ರನ ಅಧಿಕಾರಕ್ಕೆ ಬೇಡುತ್ತಿದ್ದಾರೆ, ಅವರು ಅಧಿಕಾರ ಅನುಭವಿಸುತ್ತಿದ್ದಾರೆ, ಅವರ ಮಗನಿಗೂ ಅಧಿಕಾರ ಕೊಡಿಸಲು ಪ್ರಯತ್ನಿಸುತ್ತಾ, ಈಗ ಅಧಿಕಾರಕ್ಕಾಗಿ ಮತದಾರರ ಬಳಿ ಬೇಡುತ್ತಿದ್ದಾರೆ, ಪ್ರಜ್ಞಾವಂತ ಮತದಾರರು ಅವರನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನಾದ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು ನನಗೆ ಇದೊಂದು ಅವಕಾಶ ಸಿಕ್ಕಿದೆ, ಈಬಾರಿ ನನಗೆ ಮೋದಿಯವರು, ದೇವೆಗೌಡರು, ಯಡಿಯೂರಪ್ಪ, ಬಿವೈ ವಿಜಯೇಂದ್ರ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ನನಗೆ ಆಶೀರ್ವಾದ ಮಾಡಿದ್ದಾರೆ, ಮತದಾರರನ್ನು ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ನನಗೆ ಆಶೀರ್ವಾದ ಮಾಡಿ ಎಂದರು.

ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ನಮಗೆ ಶುಭಸೂಚನೆ ಸಿಕ್ಕಿದೆ. ಬಾಲರಾಜು ಗೆಲುವು ಖಂಡಿತ. ಬಾಲರಾಜು ಗೆದ್ದರೆ ನರೇಂದ್ರ ಮೋದಿಯವರು ಗೆದ್ದಂತೆ, ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ ಎಂಬುದಕ್ಕೆ ಇಲ್ಲಿರುವ ಜನರೆ ಸಾಕ್ಷಿ, 10ವರ್ಷ ದೇಶದ ಅಭಿವೃದ್ಧಿಗೆ ದುಡಿದ ಪ್ರಧಾನಿಗಳು ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಒಂದು ಸಣ್ಣ ಭ್ರಷ್ಟಾಚಾರದ ಆರೋಪವಿಲ್ಲ, ಇದನ್ನ ಜನತೆ ಮನಗಾಣಬೇಕು.

ಡಾ.ದತ್ತೇಶ್ ಕುಮಾರ್. ಬಿಜೆಪಿ ಮುಖಂಡರುಬಿಜೆಪಿ ದೇಶದಲ್ಲಿ ಪಡೆಯುವ 400 ಕ್ಷೇತ್ರಗಳ ಪೈಕಿ ಚಾ.ನಗರ ಕ್ಷೇತ್ರವೂ ಸಹಾ ಪ್ರಮುಖ ಸಾಲಿನಲ್ಲಿ ನಿಲ್ಲಬೇಕು, ಡಾ. ಪ್ರೀತನ್ ನಾನೂರು ಸೀಟುಗಳ ಪೈಕಿ ಚಾ.ನಗರ ಅಭ್ಯರ್ಥಿ ಬೆಂಬಲಿಸಿ ಜೆಡಿಎಸ್, ಬಿಜೆಪಿ ಮೈತ್ರಿಯನ್ನು ಕಾರ್ಯಕರ್ತರೆಲ್ಲರೂ ಒಗ್ಗೂಡಿ ಮನದಟ್ಟು ಮಾಡಿ ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಬೇದ ಮರೆತು ಒಗ್ಗೂಡಿ ಶ್ರಮಿಸೋಣ.

ಡಾ. ಪ್ರೀತನ್ ನಾಗಪ್ಪ. ಹನೂರು ವಿಧಾನಸಭಾ ಕ್ಷೇತ್ರ

Share this article