ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು

KannadaprabhaNewsNetwork |  
Published : Nov 15, 2025, 01:30 AM IST
14ಎಚ್ಎಸ್ಎನ್14 : ಪರಸ್ಪರ ಸಿಹಿ ತಿನ್ನಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. | Kannada Prabha

ಸಾರಾಂಶ

ಬಿಹಾರ ಚುನಾವಣೆ ಬಗ್ಗೆ ವಿರೋಧ ಪಕ್ಷದವರಾದ ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಅವರು ಮತ ಚೋರಿ ಉದ್ದೇಶ ಇಟ್ಟುಕೊಂಡು ಚುನಾವಣೆಗೆ ಧುಮುಕಿದರು. ಆದರೆ ಧರ್ಮಕ್ಕೆ ಗೆಲುವಿದೆ ಎನ್ನುವ ನಿಟ್ಟಿನಲ್ಲಿ ಬಿಹಾರ ಚುನಾವಣೆ ನಡೆದಿದೆ. ವಿಶ್ವ ಕಂಡಂತಹ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಇಡೀ ವಿಶ್ವವೇ ನೋಡುವಂತಹ 243ರಲ್ಲಿ 208 ಸ್ಥಾನವನ್ನು ಪಡೆದು ಪ್ರಚಂಡವಾಗಿ ಎನ್‌ಡಿಎ ಗೆದ್ದಿದೆ. ಮತ ಚೋರರು ಎಂದು ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ನೋಡಿದಾಗ ನಾವು ಮತವನ್ನು ಕಳ್ಳತನ ಮಾಡಿಲ್ಲ, ಮತದಾರರ ಮನಸ್ಸನ್ನು ಕದ್ದಿದ್ದೇವೆ. ಮತದಾರರ ಒಲವು ನಮಗೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಭರ್ಜರಿ ಬಹುಮತದ ಪಡೆದು ಜಯಗಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ನಗರದ ಆರ್‌.ಸಿ. ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಬಿಹಾರದಲ್ಲಿ ನಡೆದಿರುವ ಈ ಚುನಾವಣೆ ಇಡೀ ದೇಶದ ಗಮನ ಸೆಳೆದ ಮಹತ್ವದ ರಾಜಕೀಯ ಘಟನೆ ಎಂದು ಹೇಳಿದರು. ಬಿಹಾರ ಚುನಾವಣೆ ಬಗ್ಗೆ ವಿರೋಧ ಪಕ್ಷದವರಾದ ಕಾಂಗ್ರೆಸ್ ಮತ್ತು ಆರ್.ಜೆ.ಡಿ. ಅವರು ಮತ ಚೋರಿ ಉದ್ದೇಶ ಇಟ್ಟುಕೊಂಡು ಚುನಾವಣೆಗೆ ಧುಮುಕಿದರು. ಆದರೆ ಧರ್ಮಕ್ಕೆ ಗೆಲುವಿದೆ ಎನ್ನುವ ನಿಟ್ಟಿನಲ್ಲಿ ಬಿಹಾರ ಚುನಾವಣೆ ನಡೆದಿದೆ. ವಿಶ್ವ ಕಂಡಂತಹ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಇಡೀ ವಿಶ್ವವೇ ನೋಡುವಂತಹ 243ರಲ್ಲಿ 208 ಸ್ಥಾನವನ್ನು ಪಡೆದು ಪ್ರಚಂಡವಾಗಿ ಎನ್‌ಡಿಎ ಗೆದ್ದಿದೆ. ಮತ ಚೋರರು ಎಂದು ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ನೋಡಿದಾಗ ನಾವು ಮತವನ್ನು ಕಳ್ಳತನ ಮಾಡಿಲ್ಲ, ಮತದಾರರ ಮನಸ್ಸನ್ನು ಕದ್ದಿದ್ದೇವೆ. ಮತದಾರರ ಒಲವು ನಮಗೆ ಇದೆ ಎಂದರು.

ಚುನಾವಣೆ ಆಯೋಗವೇ ಸರಿಯಿಲ್ಲ, ಮತದ ಪೆಟ್ಟಿಗೆ ಸರಿಯಿಲ್ಲ ಎಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದರು. ಈ ಸೋಲಿನಿಂದ ಮತದಾರರೆ ಸರಿಯಿಲ್ಲ ಎಂದು ಹತಾಶೆಯಾಗಿ ರಾಹುಲ್ ಗಾಂಧಿ ಹೇಳಬಹುದು ಎಂದು ವ್ಯಂಗ್ಯವಾಡಿದರು. ಚೋರ್ ಚೋರ್ ಎಂದು ರಾಹುಲ್ ಗಾಂಧಿ ಹೇಳಿ ಇಂದು ದೇಶವನ್ನೇ ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ. ಬಿಹಾರದ ಜನತೆ ಸತ್ಯ ಹಾಗೂ ಅಭಿವೃದ್ಧಿಯ ಪರವಾಗಿ ತೀರ್ಪು ನೀಡಿದ್ದಾರೆ. ೨೪೩ ಸ್ಥಾನಗಳಲ್ಲಿ ೨೦೮ ಸ್ಥಾನಗಳನ್ನು ಎನ್.ಡಿ.ಎ. ಪಡೆದು ದೇಶದ ನಾಯಕ ನರೇಂದ್ರ ಮೋದಿಯವರ ಜನಮೆಚ್ಚಿನ ನಾಯಕತ್ವ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಟೀಕೆಗಳನ್ನು ಪ್ರಶ್ನಿಸಿದ ಅವರು, ನಮ್ಮ ಮೇಲೆ ‘ಚೋರ್’ ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಈಗ ಬಿಹಾರದಲ್ಲಿ ಕೇವಲ ಎರಡು ಸೀಟು ಗೆಲ್ಲುವಷ್ಟು ಹೀನಾಯ ಸ್ಥಿತಿಗೆ ಬಂದಿದೆ. ೧೩೫ ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಇಂದು ಒಂದು ಅಂಕಿಗೆ ಸೀಮಿತವಾಗಿದೆ. ಮತ ಯಂತ್ರ ತಪ್ಪು, ಚುನಾವಣಾ ಆಯೋಗ ತಪ್ಪು ಎಂದು ಹೇಳುತ್ತಿದ್ದವರು ಈಗ ಮತದಾರರನ್ನೇ ತಪ್ಪು ಎಂದು ಆರೋಪಿಸುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಇತ್ತೀಚೆಗೆ ದೇಶ ಬಿಟ್ಟು ವಿದೇಶಕ್ಕೆ ತೆರಳಿರುವುದು ಜನರ ನಿರಾಸೆಯನ್ನು ಹೆಚ್ಚಿಸಿದೆ. ದೇಶದಲ್ಲಿ ಮುಂದಿನ ಎಲ್ಲಾ ಚುನಾವಣೆಯಲ್ಲೂ ಗೆಲುವಿನ ಅಲೆ ಮುಂದುವರಿಯಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.ಇತ್ತೀಚಿನ ಬಾಂಬ್ ಸ್ಫೋಟದ ಘಟನೆಯನ್ನು ಉಲ್ಲೇಖಿಸಿ, ಮೊನ್ನೆ ನಡೆದಂತಹ ಬಾಂಬ್ ಬ್ಲಾಸ್ಟ್ ಇಡೀ ದೇಶವೇ ನೋಡುವಂತಹ ಘಟನೆಯಾಗಿದೆ. ಭದ್ರತೆ ವೈಫಲ್ಯ ಇದ್ದಿದ್ದರೆ ದೇಶದ ಹಲವೆಡೆ ಇಂತಹ ಘಟನೆಗಳು ಸಂಭವಿಸಬೇಕಾಗಿತ್ತು. ಆದರೆ ಪ್ರಧಾನಿ ಮೋದಿಯವರ ಸದೃಢ ನಾಯಕತ್ವದಿಂದ ದೇಶ ಸುರಕ್ಷಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.ಸಂಭ್ರಮಾಚರಣೆಯಲ್ಲಿ ನಗರಾಧ್ಯಕ್ಷ ಯೋಗೇಶ್ ಗೌಡ, ಮುಖಂಡರಾದ ಶೋಭನ್ ಬಾಬು, ರಾಜಕುಮಾರ್, ರಾಜೀವ್, ಪ್ರಸನ್ನಕುಮಾರ್, ಚನ್ನಕೇಶವ, ಮೋಹನ್, ವೇದಾವತಿ, ಶೋಭ, ಪ್ರಕಾಶ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV

Recommended Stories

ಪೊನ್ನಾಚಿಯಲ್ಲಿ ಚಿರತೆ ದಾಳಿ ಮೇಕೆ ಬಲಿ
ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು