ಕನ್ನಡಪ್ರಭ ವಾರ್ತೆ ಮಂಗಳೂರುವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ ೧೭ನೇ ಹಾಗೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಕಾಲೇಜಿನ ೭ ವಿದ್ಯಾರ್ಥಿಗಳು ೬೨೫ಕ್ಕಿಂತ ಅಧಿಕ ಅಂಕವನ್ನು ಪಡೆದರೆ, ೧೯ ವಿದ್ಯಾರ್ಥಿಗಳು ೬೦೦ಕ್ಕಿಂತ ಅಧಿಕ ಅಂಕ, ೫೭ ವಿದ್ಯಾರ್ಥಿಗಳು ೫೭೫ಕ್ಕಿಂತ ಅಧಿಕ ಅಂಕ, ೮೧ ವಿದ್ಯಾರ್ಥಿಗಳು ೫೫೦ಕ್ಕಿಂತ ಅಧಿಕ ಅಂಕ, ೧೪೬ ವಿದ್ಯಾರ್ಥಿಗಳು ೫೨೫ಕ್ಕಿಂತ ಅಧಿಕ ಅಂಕ, ೨೩೩ ವಿದ್ಯಾರ್ಥಿಗಳು ೫೦೦ಕ್ಕಿಂತ ಅಧಿಕ ಅಂಕ, ೩೨೪ ವಿದ್ಯಾರ್ಥಿಗಳು ೪೭೫ಕ್ಕಿಂತ ಅಧಿಕ ಅಂಕ, ೪೪೦ ವಿದ್ಯಾರ್ಥಿಗಳು ೪೫೦ಕ್ಕಿಂತ ಅಧಿಕ ಅಂಕ, ೫೬೭ ವಿದ್ಯಾರ್ಥಿಗಳು ೪೨೫ಕ್ಕಿಂತ ಅಧಿಕ ಅಂಕ, ೬೮೪ ವಿದ್ಯಾರ್ಥಿಗಳು ೪೦೦ಕ್ಕಿಂತ ಅಧಿಕ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.೬೪೮ ಅಂಕ ಪಡೆದ ನಿಧಿ ಕೆ.ಜಿ. ಅಖಿಲ ಭಾರತ ಮಟ್ಟದ ಜನರಲ್ ಮೆರಿಟ್ನಲ್ಲಿ ೮೪ನೇ ರ್ಯಾಂಕ್ ಪಡೆದರೆ, ೬೩೬ ಅಂಕ ಪಡೆದ ಸಾಯಿಶ್ ಶ್ರವಣ ಪಂಡಿತ್ ೧೫೯ನೇ ರ್ಯಾಂಕ್, ೬೩೨ ಅಂಕ ಪಡೆದ ಶ್ರೇಯಸ್ ಮಲ್ಲಪ್ಪ ಮಹಾಲಿಂಗಪುರ ೨೧೪ನೇ ರ್ಯಾಂಕ್, ೬೩೧ ಅಂಕ ಪಡೆದ ಸುಚಿತ್ ಪಿ. ಪ್ರಸಾದ್ ೨೨೬ನೇ ರ್ಯಾಂಕ್, ೬೩೦ ಅಂಕ ಪಡೆದ ವರುಣ್ ಸಿದ್ದಪ್ಪಗೌಡರ್ ೨೪೧ನೇ ರ್ಯಾಂಕ್, ೬೨೬ ಅಂಕ ಪಡೆದ ಸಿದ್ದೇಶ್ ಬಿ. ಡಮ್ಮಳ್ಳಿ ೩೧೭ನೇ ರ್ಯಾಂಕ್, ೬೨೩ ಅಂಕ ಪಡೆದ ಪೂಜಾ ೩೮೬ನೇ ರ್ಯಾಂಕ್, ೬೨೦ ಅಂಕ ಪಡೆದ ವಚನ ಎಲ್.ಎ. ೪೫೫ನೇ ರ್ಯಾಂಕ್, ೬೧೯ ಅಂಕ ಪಡೆದ ಮನೀಶ್ ಎಲ್. ೪೮೬ನೇ ರ್ಯಾಂಕ್, ೬೧೭ ಅಂಕ ಪಡೆದ ಚರಣ್ ಗೌಡ ಎಂ. ೫೪೯ನೇ ರ್ಯಾಂಕ್, ೬೧೭ ಅಂಕ ಪಡೆದ ಕೆ.ಹನನ್ ಅಬ್ದುಲ್ ರೆಹಮಾನ್ ೫೪೩ನೇ ರ್ಯಾಂಕ್, ೬೧೧ ಅಂಕ ಪಡೆದ ಎನ್.ಬಿ. ಸಾನಿಕಾ ೭೭೧ನೇ ರ್ಯಾಂಕ್, ೬೦೭ ಅಂಕ ಪಡೆದ ಮನ್ವಿತ್ ವಿಶಾಲ್ ಎಸ್.ಆರ್. ೯೩೭ನೇ ರ್ಯಾಂಕ್, ೬೦೬ ಅಂಕ ಪಡೆದ ವಚನಾ ಅಲ್ಲಮಪ್ರಭು ಬಾಗೋಡಿ ೯೯೪ನೇ ರ್ಯಾಂಕ್, ೬೦೩ ಅಂಕ ಪಡೆದ ತುಷಾರ್ ಆರ್.ಭಟ್ ೧೧೭೫ನೇ ರ್ಯಾಂಕ್, ೬೦೧ ಅಂಕ ಪಡೆದ ಚೈತನ್ಯ ಟಿ. ಪಾಟೀಲ್ ೧೨೯೮ನೇ ರ್ಯಾಂಕ್, ೬೦೧ ಅಂಕ ಪಡೆದ ಸಾಯಿ ಲಕ್ಷ್ಮೀನಾರಾಯಣ ೧೩೧೬ನೇ ರ್ಯಾಂಕ್, ೬೦೧ ಅಂಕ ಪಡೆದ ಯೋಗಿತ್ ಗೌಡ ಎಚ್.ವಿ. ೧೩೨೦ನೇ ರ್ಯಾಂಕ್, ೫೯೯ ಅಂಕ ಪಡೆದ ಯಶಸ್ ಗೌಡ ಎಚ್.ಪಿ. ೧೪೮೧ನೇ ರ್ಯಾಂಕ್, ೫೯೮ ಅಂಕ ಪಡೆದ ನಿನಾದ ಕೃಷ್ಣ ಲಷ್ಕರಿ ೧೪೯೪ನೇ ರ್ಯಾಂಕ್, ೫೯೭ ಅಂಕ ಪಡೆದ ಲಕ್ಷ್ಯ ಎಲ್. ಪೂಜಾರ್ ೧೫೫೪ನೇ ರ್ಯಾಂಕ್, ೫೯೪ ಅಂಕ ಪಡೆದ ಶಿವನಗೌಡ ಎಸ್. ಪಾಟೀಲ್ ೧೮೦೨ನೇ ರ್ಯಾಂಕ್, ೫೯೩ ಅಂಕ ಪಡೆದ ಪ್ರಜ್ವಲ್ ಎನ್.ಆರ್. ೧೯೨೯ನೇ ರ್ಯಾಂಕ್ ಪಡೆದಿದ್ದಾರೆ.