ಜೈನ ಸಮಾಜಕ್ಕೆ ಪ್ರತ್ಯೇಕ ನಿಗಮ ನೀಡದೇ ನಿರ್ಲಕ್ಷ್ಯ

KannadaprabhaNewsNetwork |  
Published : Mar 18, 2025, 12:33 AM IST
ಸುದ್ದಿಗೋಷ್ಠಿಯಲ್ಲಿ ವರೂರು ನವ್ರಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಕಣ್ಣೀರು ಹಾಕಿದರು. | Kannada Prabha

ಸಾರಾಂಶ

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಮಾಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ಪ್ರಮುಖ ಬೇಡಿಕೆಗಳನ್ನೇ ಈಡೇರಿಸಿಲ್ಲ.

ಹುಬ್ಬ​ಳ್ಳಿ: ಪ್ರ​ತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಯಾ​ವುದೇ ಬೇಡಿಕೆಗಳ ಈ​ಡೇ​ರಿ​ಸದೇ ರಾಜ್ಯ ಸ​ರಕಾರ ಜೈನ ಸ​ಮಾ​ಜಕ್ಕೆ ತೀ​ವ್ರ​ವಾದ ಅ​ನ್ಯಾಯ ಮಾ​ಡಿದೆ. ಸ​ಮಾ​ಜದ ಬೇ​ಡಿ​ಕೆ​ಗ​ಳಿಗೆ ತ​ಕ್ಷ​ಣವೇ ಸ್ಪಂದಿ​ಸ​ದಿ​ದ್ದರೆ ವಿ​ಧಾ​ನ​ಸೌ​ಧ​ದ ಎ​ದುರು ದೇಹ ತ್ಯಾ​ಗದ ಸ​ಲ್ಲೇ​ಖನ ವ್ರತ ಕೈ​ಗೊ​ಳ್ಳು​ತ್ತೇನೆ ಎಂದು ವರೂರು ನವ್ರಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಎ​ಚ್ಚ​ರಿಕೆ ನೀಡಿದ್ದಾರೆ. ಮೊದಲ ಹಂತದ ಹೋರಾಟವಾಗಿ ಮಾ. 19ರಂದು ಬೆಂಗಳೂರು ಚಲೋ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇ​ಲ್ಲಿನ ವ​ರೂರು ನವಗ್ರಹ ತೀರ್ಥ ಕ್ಷೇ​ತ್ರದ ಸ​ಭಾ​ಭ​ವ​ನ​ದಲ್ಲಿ ಸೋ​ಮ​ವಾರ ಸಂಜೆ ಸು​ದ್ದಿ​ಗೋ​ಷ್ಠಿ​ಯಲ್ಲಿ ಈ ಕುರಿತು ಮಾ​ತ​ನಾ​ಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು.

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸ​ಮಾ​ಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ​ಪ್ರ​ಮುಖ ಬೇ​ಡಿ​ಕೆ​ಗ​ಳನ್ನೇ ಈ​ಡೇ​ರಿ​ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಚಲೋ

ಹೋ​ರಾ​ಟದ ಮೊ​ದಲ ಹಂತ​ವಾಗಿ ಸ​​ರ್ಕಾರದ ಜೈನ ವಿ​ರೋಧಿ ನೀ​ತಿ​ಯನ್ನು ಖಂಡಿಸಿ ಮಾ.19ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ನಂತರ ಮ​ಹಾ​ವೀರ ಜ​ಯಂತಿ ಆ​ಚ​ರಣೆ ಮೆ​ರ​ವ​ಣಿ​ಗೆ​ಯನ್ನು ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆಯನ್ನಾಗಿ ನ​ಡೆ​ಸ​ಲಾ​ಗು​ವುದು ಎಂದ​ರು.

ಮಾ. 18ರಂದು ರಾತ್ರಿ ಪ್ರತಿ ತಾ​ಲೂ​ಕಿ​ನ ಹಳ್ಳಿ, ನಗರ ಪ್ರದೇಶದಿಂದ ಜೈನ ಸಮಾಜದ ಬಾಂಧವರು 500ಕ್ಕೂ ಹೆ​ಚ್ಚು ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣಿಸಲಿದ್ದಾರೆ. ಮಾ. 19ರಂದು ಬೆಳಗ್ಗೆ 9ಕ್ಕೆ ಸಚಿವ ಜಮೀರ ಅಹ್ಮದ್‌ ಅವರನ್ನು ಭೇಟಿಯಾಗಿ, ನಿಗಮ ರಚನೆಗೆ ಮನವಿ ನೀಡಿ, ಅವರನ್ನು ಸತ್ಕರಿಸಲಾಗುವುದು. ಜ​ತೆಗೆ ಅ​ಧಿ​ವೇ​ಶ​ನ​ದ​ಲ್ಲಿ ಜೈನ ಸಮಾಜದ ಪರ ಧ್ವನಿ ಎತ್ತಿದ ಮಾಜಿ ಡಿ​ಸಿಎಂ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಸತ್ಕರಿಸಲಾಗುವುದು. ನಂತರ ಎಲ್ಲ ಸಚಿವರನ್ನು ಭೇಟಿಯಾಗಿ ಕೊ​ನೆ​ಯ ಮನವಿ ಸಲ್ಲಿಸಲಾಗುವುದು ಎಂದರು.

ಸ​ಮಾ​ಜದ ಹಿ​ತ​ಕ್ಕಾಗಿ ನಾವು ಹಲವಾರು ಹೋರಾಟ ಮಾಡಿ, ಮ​ನವಿ ಸ​ಲ್ಲಿ​ಸಿದರೂ ಕೇವಲ ಭರವಸೆ ಮಾತ್ರ ಸಿಕ್ಕಿದೆ. ಬಜೆಟ್‌ನಲ್ಲಿ ಸರ್ವರಿಗೂ ಸಮಪಾಲು ಇರಬೇಕು. ಆ​ದರೆ ನಮ್ಮ ಸಮಾಜಕ್ಕೆ ಅತೀ ಕಡಿಮೆ ಅ​ನು​ದಾ​ನ ​ನೀ​ಡಿ​ದ್ದಾರೆ ಎಂದರು.

ರಾ​ಜ್ಯದ ಎಲ್ಲ ಜಿಲ್ಲೆ ಮತ್ತು ತಾ​ಲೂಕು ಕೇಂದ್ರ​ದಲ್ಲಿ ಸ​ಮಾ​ಜದ ವಿ​ದ್ಯಾ​ರ್ಥಿ​ಗ​ಳಿಗೆ ಪ್ರ​ತ್ಯೇಕ ವ​ಸತಿ ನಿ​ಲಯ ಸ್ಥಾ​ಪನೆ ಮಾ​ಡ​ಬೇ​ಕು. ಬ​ಜೆ​ಟ್‌ ಅಧಿವೇಶನದಲ್ಲಿ ನಿಗಮ ಮಂಡಳಿ ಸ್ಥಾ​ಪ​ನೆಗೆ ಸ​ರ​ಕಾರ ಒ​ಪ್ಪಿಗೆ ಸೂ​ಚಿ​ಸು​ತ್ತಿದೆ ಎಂಬ ಆ​ಶಾ​ಭಾ​ವನೆ ಇತ್ತು ಎಂದರು.

ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆ

ಏಪ್ರಿಲ್‌ 10 ರಂದು ನ​ಡೆ​ಯು​ವ ಮಹಾವೀರ ಜಯಂತಿ ದಿ​ನ ಸ​ರ​ಕಾ​ರದ ವಿ​ರುದ್ಧ ಮೌನ ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆ​ ಮಾ​ಡ​ಲಾ​ಗು​ವುದು. ಇ​ಷ್ಟಾ​ದರೂ ಸರಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ ಜೂನ್‌ 8ರಂದು ಬೆ​ಳ​ಗಾವಿ ಜಿ​ಲ್ಲೆಯ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಅಲ್ಲಿ ಮುಂದಿನ ಹೋರಾಟದ ಬಗ್ಗೆ ಸಮಾಜದ ಸಭೆ ನಡೆಸಿ ನಿರ್ಧರಿಸಲಾಗುವುದು. ಜ​ತೆಗೆ ಪ್ರತಿ ಹಳ್ಳಿಗೆ ಖುದ್ದಾಗಿ ಭೇಟಿ ನೀಡಿ, ನಿಗಮ ಮಂಡಳಿ ರಚನೆ ಬಗ್ಗೆ ಸಮಾಜದ ಬಾಂಧ​ವ​ರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂದೀಪ ಕ್ಯಾತನವರ ಇದ್ದರು.

ಕಣ್ಣೀರು ಹಾಕಿದ ಸ್ವಾಮೀಜಿ

ರಾಜ್ಯ ಸ​ರ​ಕಾರ ಜೈನ ಸ​ಮಾ​ಜ ಅ​ಭಿ​ವೃ​ದ್ಧಿಗೆ ಪ್ರ​ತ್ಯೇಕ ನಿ​ಗಮ ಮಂಡಳಿ ಸ್ಥಾ​ಪನೆ ಸೇ​ರಿ​ದಂತೆ ವಿ​ವಿಧ ಬೇ​ಡಿ​ಕೆ​ಗ​ಳನ್ನು ಈ​ಡೇ​ರಿ​ಸಲು ಇದೇ ರೀತಿ ನಿ​ರ್ಲಕ್ಷ್ಯವ​ಹಿ​ಸಿ​ದಲ್ಲಿ ನಾನು ಸ​ಮಾ​ಜ​ಕ್ಕಾಗಿ ವಿ​ಧಾ​ನಸೌ​ಧ ಎ​ದುರು ಸ​ಲ್ಲೇಖ ವ್ರ​ತದ (​ಆ​ಮ​ರಣ ಉ​ಪ​ವಾ​ಸ) ಮೂ​ಲಕ ದೇಹ ತ್ಯಾಗ ಮಾಡು​ತ್ತೇನೆ ಎಂದು ಗು​ಣ​ಧರ ನಂದಿ ಮ​ಹಾ​ರಾಜ ಕ​ಣ್ಣೀರು ಸು​ರಿಸುತ್ತಾ ಎಚ್ಚರಿಕೆ ಸಂದೇಶ ನೀಡಿದರು.

ಬುದ್ಧಿವಂತ ಸಿಎಂ ಸಿದ್ದರಾಮಯ್ಯ ಅವರು, 2 ವರ್ಷದಿಂದ ನಾವು ಮನವಿ ಸ​ಲ್ಲಿ​ಸು​ತ್ತಿ​ದ್ದರೂ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅವರ ಚಿಂತನೆಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆ​ದರೆ, ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದೇಕೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ನಮ್ಮ ಸಮಾಜ ಮಾಡಿದ ಅಪರಾಧ ಏನು? ಎಲ್ಲ ಸಮಯದಲ್ಲಿ ನಾವು ಅ​ವ​ರ ಕೈ ಹಿಡಿದಿದ್ದೇವೆ. ಸಿ​ದ್ದ​ರಾ​ಮಯ್ಯ ಸ​ರ​ಕಾ​ರಕ್ಕೆ ಇದು ನಾನು ಕೊ​ಡುವ ಕೊನೆಯ ಮನವಿ. ಬೇಡಿಕೆ ಈಡೇರಿದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದರು.

ನಿರ್ದಯಿ ಮುಖ್ಯಮಂತ್ರಿ

ಡಿಸಿಎಂ ಡಿ.ಕೆ. ಶಿವಕುಮಾರ ಬಂದಾಗ ಅವರಿಗೆ ಮುಖ್ಯಮಂತ್ರಿಯಾಗಲಿ ಎಂಬ ಆಶೀರ್ವಾದ ಮಾಡಿದ್ದೇನೆ ಹೊರತು, ಅವರನ್ನು ಆ ಹುದ್ದೆಗೇರಿಸಿ, ಸಿದ್ದರಾಮಯ್ಯ ಅವರನ್ನು ಇಳಿಸಿ ಎಂದರ್ಥವಲ್ಲ. ಜೈನ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿರುವ ಸಿದ್ದರಾಮಯ್ಯ ನಿರ್ದಯಿ ಮುಖ್ಯಮಂತ್ರಿ. ಸರ​ಕಾ​ರದ ಆ​ಡ​ಳಿ​ತದಲ್ಲಿ ನಮ್ಮ ಸಮಾಜದವ​ರು ಕಸಗುಡಿಸುವ ಹು​ದ್ದೆ​ಯ​ಲ್ಲೂ ಇಲ್ಲ. ಇದು ನೋವಿನ ಸಂಗತಿ ಎಂದು ಕಣ್ಣೀರು ಸುರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ