ಜೈನ ಸಮಾಜಕ್ಕೆ ಪ್ರತ್ಯೇಕ ನಿಗಮ ನೀಡದೇ ನಿರ್ಲಕ್ಷ್ಯ

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಮಾಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ಪ್ರಮುಖ ಬೇಡಿಕೆಗಳನ್ನೇ ಈಡೇರಿಸಿಲ್ಲ.

ಹುಬ್ಬ​ಳ್ಳಿ: ಪ್ರ​ತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಯಾ​ವುದೇ ಬೇಡಿಕೆಗಳ ಈ​ಡೇ​ರಿ​ಸದೇ ರಾಜ್ಯ ಸ​ರಕಾರ ಜೈನ ಸ​ಮಾ​ಜಕ್ಕೆ ತೀ​ವ್ರ​ವಾದ ಅ​ನ್ಯಾಯ ಮಾ​ಡಿದೆ. ಸ​ಮಾ​ಜದ ಬೇ​ಡಿ​ಕೆ​ಗ​ಳಿಗೆ ತ​ಕ್ಷ​ಣವೇ ಸ್ಪಂದಿ​ಸ​ದಿ​ದ್ದರೆ ವಿ​ಧಾ​ನ​ಸೌ​ಧ​ದ ಎ​ದುರು ದೇಹ ತ್ಯಾ​ಗದ ಸ​ಲ್ಲೇ​ಖನ ವ್ರತ ಕೈ​ಗೊ​ಳ್ಳು​ತ್ತೇನೆ ಎಂದು ವರೂರು ನವ್ರಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಎ​ಚ್ಚ​ರಿಕೆ ನೀಡಿದ್ದಾರೆ. ಮೊದಲ ಹಂತದ ಹೋರಾಟವಾಗಿ ಮಾ. 19ರಂದು ಬೆಂಗಳೂರು ಚಲೋ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇ​ಲ್ಲಿನ ವ​ರೂರು ನವಗ್ರಹ ತೀರ್ಥ ಕ್ಷೇ​ತ್ರದ ಸ​ಭಾ​ಭ​ವ​ನ​ದಲ್ಲಿ ಸೋ​ಮ​ವಾರ ಸಂಜೆ ಸು​ದ್ದಿ​ಗೋ​ಷ್ಠಿ​ಯಲ್ಲಿ ಈ ಕುರಿತು ಮಾ​ತ​ನಾ​ಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು.

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸ​ಮಾ​ಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ​ಪ್ರ​ಮುಖ ಬೇ​ಡಿ​ಕೆ​ಗ​ಳನ್ನೇ ಈ​ಡೇ​ರಿ​ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಚಲೋ

ಹೋ​ರಾ​ಟದ ಮೊ​ದಲ ಹಂತ​ವಾಗಿ ಸ​​ರ್ಕಾರದ ಜೈನ ವಿ​ರೋಧಿ ನೀ​ತಿ​ಯನ್ನು ಖಂಡಿಸಿ ಮಾ.19ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ನಂತರ ಮ​ಹಾ​ವೀರ ಜ​ಯಂತಿ ಆ​ಚ​ರಣೆ ಮೆ​ರ​ವ​ಣಿ​ಗೆ​ಯನ್ನು ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆಯನ್ನಾಗಿ ನ​ಡೆ​ಸ​ಲಾ​ಗು​ವುದು ಎಂದ​ರು.

ಮಾ. 18ರಂದು ರಾತ್ರಿ ಪ್ರತಿ ತಾ​ಲೂ​ಕಿ​ನ ಹಳ್ಳಿ, ನಗರ ಪ್ರದೇಶದಿಂದ ಜೈನ ಸಮಾಜದ ಬಾಂಧವರು 500ಕ್ಕೂ ಹೆ​ಚ್ಚು ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣಿಸಲಿದ್ದಾರೆ. ಮಾ. 19ರಂದು ಬೆಳಗ್ಗೆ 9ಕ್ಕೆ ಸಚಿವ ಜಮೀರ ಅಹ್ಮದ್‌ ಅವರನ್ನು ಭೇಟಿಯಾಗಿ, ನಿಗಮ ರಚನೆಗೆ ಮನವಿ ನೀಡಿ, ಅವರನ್ನು ಸತ್ಕರಿಸಲಾಗುವುದು. ಜ​ತೆಗೆ ಅ​ಧಿ​ವೇ​ಶ​ನ​ದ​ಲ್ಲಿ ಜೈನ ಸಮಾಜದ ಪರ ಧ್ವನಿ ಎತ್ತಿದ ಮಾಜಿ ಡಿ​ಸಿಎಂ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಸತ್ಕರಿಸಲಾಗುವುದು. ನಂತರ ಎಲ್ಲ ಸಚಿವರನ್ನು ಭೇಟಿಯಾಗಿ ಕೊ​ನೆ​ಯ ಮನವಿ ಸಲ್ಲಿಸಲಾಗುವುದು ಎಂದರು.

ಸ​ಮಾ​ಜದ ಹಿ​ತ​ಕ್ಕಾಗಿ ನಾವು ಹಲವಾರು ಹೋರಾಟ ಮಾಡಿ, ಮ​ನವಿ ಸ​ಲ್ಲಿ​ಸಿದರೂ ಕೇವಲ ಭರವಸೆ ಮಾತ್ರ ಸಿಕ್ಕಿದೆ. ಬಜೆಟ್‌ನಲ್ಲಿ ಸರ್ವರಿಗೂ ಸಮಪಾಲು ಇರಬೇಕು. ಆ​ದರೆ ನಮ್ಮ ಸಮಾಜಕ್ಕೆ ಅತೀ ಕಡಿಮೆ ಅ​ನು​ದಾ​ನ ​ನೀ​ಡಿ​ದ್ದಾರೆ ಎಂದರು.

ರಾ​ಜ್ಯದ ಎಲ್ಲ ಜಿಲ್ಲೆ ಮತ್ತು ತಾ​ಲೂಕು ಕೇಂದ್ರ​ದಲ್ಲಿ ಸ​ಮಾ​ಜದ ವಿ​ದ್ಯಾ​ರ್ಥಿ​ಗ​ಳಿಗೆ ಪ್ರ​ತ್ಯೇಕ ವ​ಸತಿ ನಿ​ಲಯ ಸ್ಥಾ​ಪನೆ ಮಾ​ಡ​ಬೇ​ಕು. ಬ​ಜೆ​ಟ್‌ ಅಧಿವೇಶನದಲ್ಲಿ ನಿಗಮ ಮಂಡಳಿ ಸ್ಥಾ​ಪ​ನೆಗೆ ಸ​ರ​ಕಾರ ಒ​ಪ್ಪಿಗೆ ಸೂ​ಚಿ​ಸು​ತ್ತಿದೆ ಎಂಬ ಆ​ಶಾ​ಭಾ​ವನೆ ಇತ್ತು ಎಂದರು.

ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆ

ಏಪ್ರಿಲ್‌ 10 ರಂದು ನ​ಡೆ​ಯು​ವ ಮಹಾವೀರ ಜಯಂತಿ ದಿ​ನ ಸ​ರ​ಕಾ​ರದ ವಿ​ರುದ್ಧ ಮೌನ ಪ್ರ​ತಿ​ಭ​ಟನಾ ಮೆ​ರ​ವ​ಣಿ​ಗೆ​ ಮಾ​ಡ​ಲಾ​ಗು​ವುದು. ಇ​ಷ್ಟಾ​ದರೂ ಸರಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ ಜೂನ್‌ 8ರಂದು ಬೆ​ಳ​ಗಾವಿ ಜಿ​ಲ್ಲೆಯ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಅಲ್ಲಿ ಮುಂದಿನ ಹೋರಾಟದ ಬಗ್ಗೆ ಸಮಾಜದ ಸಭೆ ನಡೆಸಿ ನಿರ್ಧರಿಸಲಾಗುವುದು. ಜ​ತೆಗೆ ಪ್ರತಿ ಹಳ್ಳಿಗೆ ಖುದ್ದಾಗಿ ಭೇಟಿ ನೀಡಿ, ನಿಗಮ ಮಂಡಳಿ ರಚನೆ ಬಗ್ಗೆ ಸಮಾಜದ ಬಾಂಧ​ವ​ರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂದೀಪ ಕ್ಯಾತನವರ ಇದ್ದರು.

ಕಣ್ಣೀರು ಹಾಕಿದ ಸ್ವಾಮೀಜಿ

ರಾಜ್ಯ ಸ​ರ​ಕಾರ ಜೈನ ಸ​ಮಾ​ಜ ಅ​ಭಿ​ವೃ​ದ್ಧಿಗೆ ಪ್ರ​ತ್ಯೇಕ ನಿ​ಗಮ ಮಂಡಳಿ ಸ್ಥಾ​ಪನೆ ಸೇ​ರಿ​ದಂತೆ ವಿ​ವಿಧ ಬೇ​ಡಿ​ಕೆ​ಗ​ಳನ್ನು ಈ​ಡೇ​ರಿ​ಸಲು ಇದೇ ರೀತಿ ನಿ​ರ್ಲಕ್ಷ್ಯವ​ಹಿ​ಸಿ​ದಲ್ಲಿ ನಾನು ಸ​ಮಾ​ಜ​ಕ್ಕಾಗಿ ವಿ​ಧಾ​ನಸೌ​ಧ ಎ​ದುರು ಸ​ಲ್ಲೇಖ ವ್ರ​ತದ (​ಆ​ಮ​ರಣ ಉ​ಪ​ವಾ​ಸ) ಮೂ​ಲಕ ದೇಹ ತ್ಯಾಗ ಮಾಡು​ತ್ತೇನೆ ಎಂದು ಗು​ಣ​ಧರ ನಂದಿ ಮ​ಹಾ​ರಾಜ ಕ​ಣ್ಣೀರು ಸು​ರಿಸುತ್ತಾ ಎಚ್ಚರಿಕೆ ಸಂದೇಶ ನೀಡಿದರು.

ಬುದ್ಧಿವಂತ ಸಿಎಂ ಸಿದ್ದರಾಮಯ್ಯ ಅವರು, 2 ವರ್ಷದಿಂದ ನಾವು ಮನವಿ ಸ​ಲ್ಲಿ​ಸು​ತ್ತಿ​ದ್ದರೂ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅವರ ಚಿಂತನೆಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆ​ದರೆ, ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದೇಕೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ನಮ್ಮ ಸಮಾಜ ಮಾಡಿದ ಅಪರಾಧ ಏನು? ಎಲ್ಲ ಸಮಯದಲ್ಲಿ ನಾವು ಅ​ವ​ರ ಕೈ ಹಿಡಿದಿದ್ದೇವೆ. ಸಿ​ದ್ದ​ರಾ​ಮಯ್ಯ ಸ​ರ​ಕಾ​ರಕ್ಕೆ ಇದು ನಾನು ಕೊ​ಡುವ ಕೊನೆಯ ಮನವಿ. ಬೇಡಿಕೆ ಈಡೇರಿದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದರು.

ನಿರ್ದಯಿ ಮುಖ್ಯಮಂತ್ರಿ

ಡಿಸಿಎಂ ಡಿ.ಕೆ. ಶಿವಕುಮಾರ ಬಂದಾಗ ಅವರಿಗೆ ಮುಖ್ಯಮಂತ್ರಿಯಾಗಲಿ ಎಂಬ ಆಶೀರ್ವಾದ ಮಾಡಿದ್ದೇನೆ ಹೊರತು, ಅವರನ್ನು ಆ ಹುದ್ದೆಗೇರಿಸಿ, ಸಿದ್ದರಾಮಯ್ಯ ಅವರನ್ನು ಇಳಿಸಿ ಎಂದರ್ಥವಲ್ಲ. ಜೈನ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿರುವ ಸಿದ್ದರಾಮಯ್ಯ ನಿರ್ದಯಿ ಮುಖ್ಯಮಂತ್ರಿ. ಸರ​ಕಾ​ರದ ಆ​ಡ​ಳಿ​ತದಲ್ಲಿ ನಮ್ಮ ಸಮಾಜದವ​ರು ಕಸಗುಡಿಸುವ ಹು​ದ್ದೆ​ಯ​ಲ್ಲೂ ಇಲ್ಲ. ಇದು ನೋವಿನ ಸಂಗತಿ ಎಂದು ಕಣ್ಣೀರು ಸುರಿಸಿದರು.

Share this article