ಕೋಚರಿ ಏತ ನೀರಾವರಿ ಪಂಪ್ ಹೌಸ್‌ಗೆ ನಿಖಿಲ್‌ ಭೇಟಿ

KannadaprabhaNewsNetwork |  
Published : Apr 14, 2024, 01:46 AM IST
13ಎಚ್‌ಯುಕೆ-1 | Kannada Prabha

ಸಾರಾಂಶ

ಹುಕ್ಕೇರಿ: ತಾಲೂಕಿನ ಕೋಚರಿ ಏತ ನೀರಾವರಿ ಯೋಜನೆಯ ನವೀಕರಿಸಿದ ಪಂಪ್ ಹೌಸ್‌ನ ವಿವಿಧ ಘಟಕಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ನಿಖಿಲ್ ಕತ್ತಿ ಅವರು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಕೋಚರಿ ಏತ ನೀರಾವರಿ ಯೋಜನೆಯ ನವೀಕರಿಸಿದ ಪಂಪ್ ಹೌಸ್‌ನ ವಿವಿಧ ಘಟಕಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ನಿಖಿಲ್ ಕತ್ತಿ ಅವರು ಪರಿಶೀಲಿಸಿದರು.

ಯೋಜನೆಯ ಕೊನೆಯ ಹಂತದವರೆಗೂ ನೀರು ತಲುಪಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿ, ಬೇಸಿಗೆ ಜತೆಗೆ ಬರಗಾಲದ ಈ ಸಂದರ್ಭದಲ್ಲಿ ರೈತರ ಹಿತ ಕಾಪಾಡಲು ಯೋಜನೆ ನವೀಕರಣಗೊಳಿಸಲಾಗಿದೆ. ಈ ವ್ಯಾಪ್ತಿಯ ಗ್ರಾಮಗಳ ರೈತರು ನೀರನ್ನು ಹಿತ-ಮಿತವಾಗಿ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಹತ್ವಾಕಾಂಕ್ಷಿ ಈ ಯೋಜನೆಯ ಕೊನೆಯ ಹಂತದವರೆಗೂ ಸರಾಗವಾಗಿ ನೀರು ಸಾಗಲು ಈ ಪಂಪ್‌ಹೌಸ್‌ನಲ್ಲಿ ಹೊಸ ಪಂಪ್ ಮತ್ತು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ₹1.70 ಕೋಟಿಗಳನ್ನು ವೆಚ್ಚ ಮಾಡುವ ಮೂಲಕ ಯೋಜನೆಯನ್ನು ನವೀಕರಣಗೊಳಿಸಲಾಗಿದೆ. ಕೋಚರಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸುಲ್ತಾನಪುರ, ಶಿರಗಾಂವ, ಬೆಣಿವಾಡ, ಮದಿಹಳ್ಳಿ, ಮದಮಕ್ಕನಾಳ, ಬಸ್ತವಾಡ, ಹುಕ್ಕೇರಿ, ಮಸರಗುಪ್ಪಿ ಕಾಲುವೆಗಳಿಗೆ ಕಳೆದ ಎರಡು ದಿನದ ಹಿಂದೆ ನೀರು ಹರಿಬಿಡಲಾಗಿದೆ. ಇದರಿಂದ ಈ ಪ್ರದೇಶಗಳ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ ಎಂದರು.

ಗುತ್ತಿಗೆದಾರ ಬಸವರಾಜ ಗಂಗಣ್ಣವರ, ಮುಖಂಡರಾದ ಶ್ರೀಶೈಲ ಮಠಪತಿ, ಶಿವನಗೌಡ ಮದವಾಲ, ಮಹಾದೇವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ