ಮಂಗಳೂರು: ತನ್ನ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಆರೋಪಗಳಿಗೆ ಉತ್ತರಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸತ್ಯ ಯಾವಾಗಲೂ ದಾಖಲೆಯಲ್ಲಿ ಇರುತ್ತದೆ. ಆರೋಪ ಮಾಡಿದವರು ಇದುವರೆಗೂ ಲಿಖಿತವಾಗಿ ದೂರು ನೀಡಿಲ್ಲ. ಹಾಗಾಗಿ ಅದು ಚರ್ಚೆಯ ವಿಷಯ ಅಲ್ಲ ಎಂದು ಹೇಳಿದ್ದಾರೆ.
ಸಾಹಿತಿಗಳಿಗೆ 25 ಸಾವಿರ ರು.ಗಳ ಶಾಲು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಸಾಹಿತಿಗಳಿಗೆ ಗೌರವ ನೀಡುವಾಗ ಉತ್ತಮ ರೀತಿಯಲ್ಲಿಯೇ ಸನ್ಮಾನಿಸಬೇಕಾಗುತ್ತದೆ. ಅದು ರೇಷ್ಮೆ ಶಾಲು. ಅದನ್ನು ಕರ್ನಾಟಕ ಸಿಲ್ಕ್ ಬೋರ್ಡ್ನಿಂದ ಅದರ ಬೆಲೆಗೆ ತಕ್ಕುದಾಗಿ ಖರೀದಿಸಲಾಗಿದೆಯೇ ಹೊರತು ಖಾಸಗಿ ಕಂಪೆನಿಯಿಂದ ಅಲ್ಲ. ಇನ್ನು, ಅಧಿವೇಶನ ಸಂದರ್ಭ ಶಾಸಕರಿಗೆ ಮಸಾಜ್ ಚೇರ್ನ್ನು ಅದರ ಕಂಪೆನಿಯೇ ಉಚಿತವಾಗಿ ತಂದು ಕೊಡುವುದು. ಸುಳ್ಳನ್ನು ಹೇಗೂ ಸೃಷ್ಟಿಸಬಹುದು. ರಾಜಕೀಯ ಏನು ಬೇಕಾದರೂ ಮಾತನಾಡಬಹುದು. ಅವರ ರೀತಿ ನಾನು ಮಾತನಾಡಲು ಆಗಲ್ಲ. ಆರೋಪ ಮಾಡುವವರು ಮೊದಲು ಆ ಬಗ್ಗೆ ಅಧ್ಯಯನ ಮಾಡಲಿ ಎಂದು ಖಾದರ್ ಹೇಳಿದರು.
ಬಾಲ್ ಬಂದಾಗ ಬ್ಯಾಟಿಂಗ್: ಸಚಿವ ಸ್ಥಾನ ದೊರೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಪೀಕರ್ ಆಗಿ ಆ ಬಗ್ಗೆ ಮಾತನಾಡಲು ಆಗಲ್ಲ. ಸ್ಪೀಕರ್ ಆದ ಬಳಿಕ ನನ್ನ ರಾಜಕೀಯ ಚಾನೆಲ್ ಬಂದ್ ಆಗಿದೆ. ಈಗ ಸಂವಿಧಾನದ ಚಾನೆಲ್ ಮಾತ್ರ ಇರೋದು. ಮುಂದೆ ಬಾಲ್ ಬಂದಾಗ ಬ್ಯಾಟ್ ಬೀಸೋಣ ಎಂದರು.ಬೆಂಗಳೂರು ವಿಧಾನಸೌಧ ಆವರಣದಲ್ಲಿ 52 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಪ್ರತ್ಯೇಕ ಊಟ- ವಸತಿಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿಯೂ ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಚರ್ಚೆ ನಡೆಸಲಾಗಿದೆ. ಅದಕ್ಕೆ ವ್ಯವಸ್ಥಿತವಾಗಿ ನಿಯಮ ಮಾಡಬೇಕಿದೆ ಎಂದರು.ಡಿ.8ರಿಂದ ಬೆಳಗಾವಿ ಅಧಿವೇಶನ