ಚಿಂತಾಮಣಿ: ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಳ್ಳಲಿದೆಯೋ ಅದಕ್ಕೆ ಅವರು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಪೋನ್ ಕದ್ದಾಲಿಕೆ: ಪೋನ್ ಕದ್ದಾಲಿಕೆ ಬಗ್ಗೆ ಪ್ರಶ್ನಿಸಿದಾಗ ವಿರೋಧ ಪಕ್ಷದವರಿಗೆ ಏನಾದರೂ ಒಂದು ವಿಚಾರದ ಅವಶ್ಯಕತೆ ಇದ್ದು ಕಳೆದ ವರ್ಷವೂ ಈ ವಿಚಾರದ ಬಗ್ಗೆ ಸುದ್ದಿಗಳು ಬಿತ್ತರವಾಗಿದೆ. ಆದರೆ ಪೋನ್ ಕದ್ದಾಲಿಕೆ ಬಗ್ಗೆ ಗೃಹಮಂತ್ರಿಗಳು ಸ್ಪಷ್ಟನೆಯನ್ನು ಸಹಾ ನೀಡಿದ್ದರು ಎಂದರು.
ಪ್ರಧಾನಿ ಮೋದಿರ ನಿರ್ಧಾರಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಟಿಪ್ಪಣಿಗೆ ಗುರಿಯಾಗಿದೆ. ಅಮೇರಿಕಾ ದೇಶದ ಜೊತೆಗೆ ಪ್ರಧಾನಮಂತ್ರಿಗಳು ಶಿರಭಾಗಿ ಅವರ ಷರತ್ತುಗಳಿಗೆ ಒಪ್ಪಿಕೊಂಡು ದೇಶದ ಘನತೆ ಗೌರವವನ್ನು ಯಾವ ಮಟ್ಟಕ್ಕೆ ತಂದಿದ್ದಾರೆಂಬುದನ್ನು ಜನತೆಗೆ ತಿಳಿಸಲು, ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ವಿಚಾರವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ನಡೆಯುತ್ತಿವೆ. ಭಾರತವೊಂದು ಜಾತ್ಯಾತೀತ ರಾಷ್ಟ್ರವಾಗಿದ್ದು ಇಲ್ಲಿನ ಜನತೆ ಶಾಂತಿ, ಗೌರವ, ನೆಮ್ಮದಿಯ ಜೀವನ ನಡೆಸಲು ಅಪೇಕ್ಷಿಸುತ್ತಾರೆಂದರು.