ಜಗಳೂರಲ್ಲಿ ಕಚೇರಿ ಲೋಕಾ ದಿಢೀರ್ ದಾಳಿ

KannadaprabhaNewsNetwork |  
Published : Aug 25, 2026, 01:30 AM IST
ಫೊಟೋ 24 ಟಿಟಿಎಚ್ 01: ಮಲೆನಾಡು ಹೋರಾಟ ಕ್ರಿಯಾಸಮಿತಿ ವತಿಯಿಂದ ಕಸ್ತೂರಿರಂಗನ್ ವರದಿ ವಿರೋದಿಸಿ ರೈತರ 600 ಅರ್ಜಿಗಳ ಸಹಿತ ಸೋಮವಾರ ತಹಶೀಲ್ದಾರ್ ಎಸ್.ರಂಜಿತ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯ್ತು. | Kannada Prabha

ಸಾರಾಂಶ

Office workers suddenly attacked in Jagaluru

ಜಗಳೂರು: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಜಿಲ್ಲಾ ಪ್ರವಾಸ ಮತ್ತು ಭೇಟಿಯ ಹಿನ್ನೆಲೆಯಲ್ಲಿ, ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಗಳ ನೇತೃತ್ವದ ೧೫ ಅಧಿಕಾರಿಗಳ ತಂಡ ಸೋಮವಾರ ಜಗಳೂರು ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಏಕಾಏಕಿ ಭೇಟಿ ನೀಡಿ ಕಡತಗಳ ಶೋಧ ನಡೆಸಿತು.ಲೋಕಾ ಅಧಿಕಾರಿಗಳ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೆಲ ಕಾಲ ಬೆಚ್ಚಿಬಿದ್ದು ಗಾಬರಿಗೊಂಡ ಸನ್ನಿವೇಶ ನಿರ್ಮಾಣವಾಯಿತು.ಅಧಿಕಾರಿಗಳ ತಂಡವನ್ನು ೫ ಜನರಂತೆ ಒಟ್ಟು ೩ ತಂಡಗಳಾಗಿ ವಿಂಗಡಿಸಿ, ಪಟ್ಟಣದ ಪ್ರಮುಖ ಇಲಾಖೆಗಳಲ್ಲಿ ಏಕಕಾಲಕ್ಕೆ ದಾಳಿ ಮಾದರಿಯ ಪರಿಶೀಲನೆ ನಡೆಸಲಾಯಿತು. ​ಸಾರ್ವಜನಿಕ ತಾಲೂಕು ಆಸ್ಪತ್ರೆ: ಸಿಬ್ಬಂದಿಯ ಹಾಜರಾತಿ ಪುಸ್ತಕ, ಔಷಧಿ ಶೇಖರಣಾ ಉಗ್ರಾಣ, ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್ ಸೆಂಟರ್ ಹಾಗೂ ಲ್ಯಾಬರೋಟರಿಗೆ ಭೇಟಿ ನೀಡಿ ರೋಗಿಗಳಿಗೆ ದೊರೆಯುತ್ತಿರುವ ಸೌಲಭ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಫುರ ಜಿಲ್ಲೇಲಿ 9,44,623 ಮತದಾರರು
ಕರಾಟೆ ಇನ್ನೊಬ್ಬರ ಮೇಲಿನ ದಾಳಿಗೆ ಉಪಯೋಗಿಸುವಂಥ ಕಲೆಯಲ್ಲ: ಪಿ. ವೈ.ಶಿಹಾನ್ ನಾಸಿರುದ್ದೀನ್