)
ಜಗಳೂರು: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಜಿಲ್ಲಾ ಪ್ರವಾಸ ಮತ್ತು ಭೇಟಿಯ ಹಿನ್ನೆಲೆಯಲ್ಲಿ, ಲೋಕಾಯುಕ್ತ ಇನ್ಸ್ಪೆಕ್ಟರ್ ಗಳ ನೇತೃತ್ವದ ೧೫ ಅಧಿಕಾರಿಗಳ ತಂಡ ಸೋಮವಾರ ಜಗಳೂರು ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಏಕಾಏಕಿ ಭೇಟಿ ನೀಡಿ ಕಡತಗಳ ಶೋಧ ನಡೆಸಿತು.ಲೋಕಾ ಅಧಿಕಾರಿಗಳ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೆಲ ಕಾಲ ಬೆಚ್ಚಿಬಿದ್ದು ಗಾಬರಿಗೊಂಡ ಸನ್ನಿವೇಶ ನಿರ್ಮಾಣವಾಯಿತು.ಅಧಿಕಾರಿಗಳ ತಂಡವನ್ನು ೫ ಜನರಂತೆ ಒಟ್ಟು ೩ ತಂಡಗಳಾಗಿ ವಿಂಗಡಿಸಿ, ಪಟ್ಟಣದ ಪ್ರಮುಖ ಇಲಾಖೆಗಳಲ್ಲಿ ಏಕಕಾಲಕ್ಕೆ ದಾಳಿ ಮಾದರಿಯ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕ ತಾಲೂಕು ಆಸ್ಪತ್ರೆ: ಸಿಬ್ಬಂದಿಯ ಹಾಜರಾತಿ ಪುಸ್ತಕ, ಔಷಧಿ ಶೇಖರಣಾ ಉಗ್ರಾಣ, ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್ ಸೆಂಟರ್ ಹಾಗೂ ಲ್ಯಾಬರೋಟರಿಗೆ ಭೇಟಿ ನೀಡಿ ರೋಗಿಗಳಿಗೆ ದೊರೆಯುತ್ತಿರುವ ಸೌಲಭ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಲಾಯಿತು.