ಕನ್ನಡಪ್ರಭ ವಾರ್ತೆ ಹೊಸನಗರ
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಂಬುಜ ಕ್ಷೇತ್ರದಲ್ಲಿ ಜೈನ ಮಠದ ಸಹಯೋಗದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ-ಸಾಹಿತ್ಯ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯಪುಸ್ತಕ ತೂಕ ಕಡಿಮೆ ಮಾಡಲು ಹೋಗಿ ಹಳೆಗನ್ನಡ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಹಳೆಗನ್ನಡ ಸಾಹಿತ್ಯ ಒಂದು ಪುಟಕ್ಕೆ ಸೀಮಿತವಾಗಿದೆ. ಕನ್ನಡ ಸಾಹಿತ್ಯ ಪರಿಣಾಮ ಕಾರಿಯಾಗಿ ಬೋಧನೆ ಮಾಡಲು ಇಂತಹ ರಸಗ್ರಹಣ ಶಿಬಿರದ ಅಗತ್ಯ ಬಹಳವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಡಾ.ಎಸ್.ಪಿ.ಪದ್ಮಪ್ರಸಾದ್ ಅವರು ಮಾತನಾಡಿ, ಶಿಕ್ಷಕರು ಪಾಠದ ಸಾಹಿತ್ಯವನ್ನು ಚನ್ನಾಗಿ ಅರ್ಥ ಮಾಡಿಕೊಂಡು ಮಕ್ಕಳ ಮನಸ್ಸಿಗೆ ದಾಟಿಸಬೇಕು. ಅಲ್ಲಿ ನಿಮ್ಮ ಅನುಭವ, ಅಭಿರುಚಿ ಮುಖ್ಯ ವಾಗುತ್ತದೆ. ವಿದ್ಯಾರ್ಥಿಗೆ ಅರ್ಥವಾಗುವುದಕ್ಕಿಂತ ಅನುಭವ ಆಗುವಂತೆ ಬೋಧಿಸುವ ಕಲೆ ರೂಪಿಸಿಕೊಳ್ಳಲು ವಿವರಿಸಿದರು.
ಹೊಸನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಆರ್.ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಎಂ.ಜಯಶೀಲ, ಡಾ.ಶಾಂತಾರಾಮ್ ಪ್ರಭು, ಬಿ.ಚಂದ್ರೇಗೌಡ ವಿವಿಧ ವಿಚಾರವಾಗಿ ಮಾರ್ಗದರ್ಶನ ಮಾಡಿದರು.
ಹೊಸನಗರ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ.ಎನ್.ಡಿ.ಹೆಗಡೆ, ತೀರ್ಥಹಳ್ಳಿ ತಾಲ್ಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಎಸ್.ವಿರೇಶ್ ವೇದಿಕೆಯಲ್ಲಿದ್ದರು.