ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಬದ್ಧ: ಸರ್ವೋತ್ತಮ ಜಾರಕಿಹೊಳಿ

KannadaprabhaNewsNetwork | Published : Aug 4, 2024 1:15 AM

ಸಾರಾಂಶ

ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭರವಸೆ ನೀಡಿದರು.ಮೂಡಲಗಿ

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭರವಸೆ ನೀಡಿದರು.

ತಾಲೂಕಿನ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ತರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ನಂತರ ಸುಣಧೋಳಿ, ಪಿ.ವೈ. ಹುಣಶ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಕಾಳಜಿ ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ಹೊದಿಕೆ ವಿತರಿಸಿದ ಅವರು ಮಾತನಾಡಿದರು. ಬಹುತೇಕ ಕಡೆಗಳಲ್ಲಿ ನದಿ ತೀರದ ಸಂತ್ರಸ್ತರು ಸೂರು ಸಮಸ್ಯೆ ಬಗ್ಗೆ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುವುದಾಗಿ ಹೇಳಿದ ಅವರು, ನಿಮ್ಮ ನೋವುಗಳಿಗೆ ನಮ್ಮ ಕುಟುಂಬ ಸದಾ ಸ್ಪಂದಿಸುತ್ತದೆ. ನದಿ ನೀರಿನ ಮಟ್ಟ ಮತ್ತೆ ಏರಿಕೆಯಾಗುತ್ತಿದ್ದು, ಸಂತ್ರಸ್ತ ಕುಟುಂಬಗಳು ಸುರಕ್ಷಿತವಾಗಿ ಕಾಳಜಿ ಕೇಂದ್ರಗಳಲ್ಲಿ ವಾಸ ಮಾಡುವಂತೆ ಮನವಿ ಮಾಡಿದರು.

ಇದೇ ವೇಳೆ ಶಿಥಿಲಗೊಂಡಿರುವ ತಿಗಡಿ ಸೇತುವೆಯ ರಸ್ತೆ ಪರಿಶೀಲಿಸಿದರು.ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಊಟೋಪಚಾರ ಪರಿಶೀಲಿಸಿದರು. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಜಿಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ಮುಖಂಡರಾದ ಎ.ಟಿ. ಗಿರಡ್ಡಿ, ಎಂ.ಎಂ. ಪಾಟೀಲ, ವೈ.ಆರ್. ಪಾಟೀಲ, ಹಣಮಂತ ಅಂಬಿ, ಗುರುರಾಜ ಪಾಟೀಲ, ಸುಭಾಸ ಕಮತಿ, ಪ್ರಕಾಶ ಪಾಟೀಲ, ಗೋಪಾಲ ಬಿಳ್ಳೂರ, ಬಸಪ್ಪ ಗಿರಡ್ಡಿ, ಅರ್ಜುನ ಜಿಡ್ಡಿಮನಿ, ಬಸು ಸಾರಾಪೂರ, ಹಣಮಂತ ರಡ್ಡೇರಟ್ಟಿ, ಬಸು ಖಿಲಾರಿ, ಜಿ.ಆರ್. ಗಿರಡ್ಡಿ, ರಂಗಪ್ಪ ಕಳ್ಳಿಗುದ್ದಿ, ರಾಜು ಉಪ್ಪಾರ, ನರೇಂದ್ರ ನಾಡಗೌಡ, ದುಂಡಪ್ಪ ಪಾಟೀಲ, ಅಲ್ಲಪ್ಪ ಖಾನಪ್ಪನವರ, ಬಸಪ್ಪ ಬಾರಕಿ, ಸಿ.ಎಲ್. ನಾಯಿಕ, ಹಣಮಂತಗೌಡ ಪಾಟೀಲ, ಹಣಮಂತ ನಾಯಿಕ, ತಿಗಡಿ ಗ್ರಾಪಂ ಅಧ್ಯಕ್ಷೆ ಮುತ್ತೆವ್ವ ಲಗಳಿ, ಸುಣಧೋಳಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ದೇವರಮನಿ, ಹುಣಶ್ಯಾಳ ಪಿವೈ ಗ್ರಾಪಂ ಅಧ್ಯಕ್ಷ ಜಗದೀಶ ಡೊಳ್ಳಿ, ರಾಮಪ್ಪ ಪೂಜೇರಿ, ಶಿವಕುಮಾರ ಅಂಗಡಿ, ನೀಲಪ್ಪ ಕೇವಟಿ, ಬಸು ಕುರಿಬಾಗಿ, ರಫೀಕ್‌ ಲಾಡಖಾನ್‌, ಗ್ರಾಪಂ ಉಸ್ತುವಾರಿ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಪಂ ಸದಸ್ಯರು, ಪ್ರಮುಖರು, ಉಪಸ್ಥಿತರಿದ್ದರು.

Share this article