ದೇವನಹಳ್ಳಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಪ್ರಯುಕ್ತ ದೇಶದೆಲ್ಲಡೆ ಕೃಷ್ಣ ಜಯಂತಿಯ ಸಂಭ್ರಮಾಚರಣೆ ಮಾಡುವುದರ ಜೊತೆಯಲ್ಲಿ ಅಧರ್ಮ ಹೆಚ್ಚಾದಾಗ ಧರ್ಮಸ್ಥಾಪನೆಗೆ ಜನಿಸಿದ ಕೃಷ್ಣನ ಆದರ್ಶಗುಣಗಳನ್ನು ನಮ್ಮೆಲ್ಲರ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ದೇವನಹಳ್ಳಿ ತಾಲುಕು ಯಾದವ ಸಂಘದ ಅಧ್ಯಕ್ಷ ಎನ್. ರಘು ಹೇಳಿದರು.
ಗ್ರೇಡ್ ೨ ತಹಶೀಲ್ದಾರ್ ಜಯಕುಮಾರ್ ಶ್ರೀಕೃಷ್ಣ ಜನ್ಮವೃತ್ತಾಂತ ಹಾಗು ಮಹಾಭಾರತದಲ್ಲಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದ ಬಗ್ಗೆ ಸವಿವರವಾಗಿ ಮಾತನಾಡಿದರು.
ಯಾದವ ಸಂಘದ ಖಜಾಂಚಿ ಶ್ರೀಧರ್ಮೂರ್ತಿ ಮಾತನಾಡಿ ತಾಲೂಕು ಆಡಳಿತ ಪರವಾಗಿ ಇಲ್ಲಿ ಸರಳವಾಗಿ ಆಚರಿಸುತ್ತಿದ್ದು , ದೇವನಹಳ್ಳಿಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಅಲಂಕಾರ ಸಂಜೆ ಯಾದವ ಸಮಾಜ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಿರುತೆರೆ ಕಲಾವಿದರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಶನಿವಾರ ಶ್ರೀ ವೇಣುಗೋಪಾಲಸ್ವಾಮಿಯನ್ನು ವಿವಿಧ ವಾದ್ಯಗಳ ಕಲಾತಂಡಗಳೊಂದಿಗೆ ಹೂವಿನ ಪಲ್ಲಕ್ಕಿಯ ಮೆರವಣಿಗೆ ಉತ್ಸವಗಳನ್ನು ನಡೆಸಲಾಗುವುದು ಎಂದರು.ಇದೇ ವೇಳೆ ಯಾದವ ಸಮಾಜದ ಶ್ರೀಕೃಷ್ಣ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು ಶ್ರೀ ಕೃಷ್ಣ ವೇಷ ಮತ್ತು ರಾಧೆಯ ವೇಷ ಧರಿಸಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆಲ್ಲಾ ಸಿಹಿ ಹಾಗು ನೆನಪಿನ ಕಾಣಿಕೆ ವಿತರಿಸಿದರು.
೦೪ ದೇವನಹಳ್ಳಿ ಚಿತ್ರಸುದ್ದಿ:೦೨ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೃಷ್ಣ ಜಯಂತಿಯಲ್ಲಿ ಭಾಗವಹಿಸಿದ್ದ ಗ್ರೇಡ್ ೨ ತಹಶಿಲ್ದಾರ್ ಜಯಕುಮಾರ್, ಶಿರಸ್ತೇದಾರ್ ಸಂತೋಷ್, ಯಾದವ ಸಂಘದ ಅಧ್ಯಕ್ಷ ಎನ್.ರಘು , ಖಜಾಂಚಿ ಶ್ರೀಧರಮೂರ್ತಿ ಬಿ.ಎಲ್, ಪ್ರ.ಕಾರ್ಯದರ್ಶಿ ಅಣ್ಣಪ್ಪ ಮತ್ತು ಮುಖಂಡರು.