ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ತೋಟದಲ್ಲಿ ಮಳವಳ್ಳಿ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3191 ಮತ್ತು 3192 ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾವಯವ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿ, ಕಳೆದ 6 ವರ್ಷಗಳಿಂದ ವಿಷಮುಕ್ತ ಭೂಮಿ - ಆಹಾರ ಎಂಬ ಸಂಕಲ್ಪದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕುಟುಂಬದ ಸಹಕಾರದಿಂದ ನನಗೆ ಸಾಧಕ ರೈತ ಎಂಬ ಫಲ ಕೊಟ್ಟಿದೆ ಎಂದರು.
ಭೂಮಿಗೆ ಅತಿಯಾದ ರಸಗೊಬ್ಬರಗಳನ್ನು ಹಾಕಿದ್ದರಿಂದ ಇಂದು ಭೂಮಿ ಸತ್ವ ಕಳೆದುಕೊಂಡಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಫಲವತ್ತತೆ ಹೆಚ್ಚಿಸಬೇಕಿದೆ. ಇದು ಫಲ ಕೊಡಲು ಸುಮಾರು ಮೂರರಿಂದ ನಾಲ್ಕು ವರ್ಷ ಕಾಲ ಬೇಕಾಗುತ್ತದೆ. ಆ ಸಮಯದಲ್ಲಿ ಇಳುವರಿ ಸ್ವಲ್ಪ ಕಡಿಮೆ ಬರುವುದು ಸಹಜ ಎಂದು ತಿಳಿಸಿದರು.ಈಗಿನ ರೈತರು ಸಾವಯವ ಕೃಷಿಯಿಂದ ಇಳುವರಿ ಕಡಿಮೆ, ಲಾಭ ಕಡಿಮೆ ಎನ್ನುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿದರೆ 3 ವರ್ಷಗಳ ನಂತರ ಒಳ್ಳೆಯ ಇಳುವರಿ, ಲಾಭ ಪಡೆಯಬಹುದು. ರಾಸಾಯನಿಕ ಸಿಂಪಡಣೆ ಮಾಡಿದ ತರಕಾರಿಗಳಿಗೂ, ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ತರಕಾರಿಗಳಿಗೂ ತುಂಬಾ ವ್ಯತ್ಯಾಸವಿದೆ. ಸಾವಯವದಿಂದ ಬೆಳೆದ ತರಕಾರಿಗಳು ತುಂಬಾ ರುಚಿಕರವಾಗಿರುತ್ತವೆ ಎಂದು ಹೇಳಿದರು.
ಮತ್ತೋರ್ವ ಸಾವಯವ ಕೃಷಿ ಸಾಧಕ ವಿಶಾಲ್ ಮಾತನಾಡಿ, ಯುವ ಪೀಳಿಗೆಗೆ ಪೋಷಕರು ಈಗಿನಿಂದಲೇ ಕೃಷಿ ಬಗ್ಗೆ ತಿಳಿವಳಿಕೆ ನೀಡಬೇಕು. ಉತ್ತಮ ಪರಿಸರಕ್ಕಾಗಿ ಗಿಡ- ಮರಗಳನ್ನು ಹೆಚ್ಚು ನೆಡಬೇಕು. ಸಾವಯವ ಗೊಬ್ಬರದಿಂದ ತಯಾರಿಸಿದ ಆಹಾರ ಪಾದಾರ್ಥಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಮಳವಳ್ಳಿ ತಾಲೂಕಿನಲ್ಲಿ ಮುಕ್ಕಾಲು ಭಾಗ ರೈತರು ರೇಷ್ಮೆ ಬೆಳೆ ಅವಲಂಬಿತರಾಗಿದ್ದಾರೆ. ಅವರೆಲ್ಲರೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.