ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಹುಳಿಯಾರು ರಸ್ತೆಯನ್ನು ಸಮರ್ಪಕವಾಗಿ ಅಗಲೀಕರಣ ಮಾಡಬೇಕೆಂದು ಆಗ್ರಹಿಸಿ ನಗರಸಭೆ ಮುಂಭಾಗ ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಭಾರತೀಯ ದಲಿತ ಸಂಘರ್ಷ ಸಮಿತಿ ಮತ್ತು ಮಹಾನಾಯಕ ದಲಿತ ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನಾ ಕಾರರು ಮಂಗಳವಾರ ನಗರಸಭೆ ಮುಂಭಾಗ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.ಜಿಲ್ಲೆಯ ತಾಲೂಕುಗಳಾದ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ನಗರಗಳ ರಸ್ತೆಗಳು ಅಭಿವೃದ್ಧಿ ಹೊಂದಿ ಅಗಲೀಕರಣಗೊಳ್ಳುತ್ತಿದ್ದರೆ ಹಿರಿಯೂರು ನಗರದ ರಸ್ತೆಗಳು ಅದೇ ಹಳೆಯ ಮಾದರಿಯಲ್ಲಿಯೇ ಇವೆ. ದಶಕಗಳ ಕಾಲದಿಂದಲೂ ನಗರದ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯಿಂದ ಬಳಲಿ ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಹುಳಿಯಾರು ರಸ್ತೆ ಅಗಲೀಕರಣ ಮಾಡುವಾಗ ಈ ಹಿಂದೆ ನಗರಸಭೆಯವರು ನಂಜಯ್ಯನ ಕೊಟ್ಟಿಗೆ ಪಕ್ಕದಲ್ಲಿದ್ದ ಎಸ್ಸ್ಸಿ, ಎಸ್ಸ್ಟಿ ಜನಾಂಗದ ಬಡವರ ಮನೆಗಳನ್ನು ಒಡೆದು ರಸ್ತೆ ಅಗಲೀಕರಣ ಮಾಡಿದ್ದರು. ಈಗ ಮುಂದುವರೆದ ರಸ್ತೆ ಕಾಮಗಾರಿ ಹುಳಿಯಾರು ರಸ್ತೆಯ ಚಾನಲ್ನಿಂದ ಸಾಗರ್ ರೆಡ್ಡಿ ಹೋಟೆಲ್ವರೆಗೂ ಕಾಮಗಾರಿ ಮಾಡುತ್ತಿದ್ದು, ರಸ್ತೆ ಪಕ್ಕದ ವಿದ್ಯುತ್ ಕಂಬಗಳನ್ನು ತೆರವು ಮಾಡದೇ, ಚರಂಡಿ ಕಾಮಗಾರಿ ಮಾಡದೇ ಅಗಲೀಕರಣ ಕಾಮ ಗಾರಿಯ ಅಳತೆಯನ್ನೇ ಕಡಿಮೆ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಈ ರಸ್ತೆಯು ತುಂಬಾ ಕಿರಿದಾಗಿದ್ದು, ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಓಡಾಡಲಿಕ್ಕೆ ತುಂಬಾ ತೊಂದರೆಯಾಗುತ್ತಿದೆ. ವಾಹನ ದಟ್ಟಣೆಯಿಂದ ಪ್ರತಿದಿನವೂ ಟ್ರಾಫಿಕ್ ಜಾಮ್ ಆಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಈಗ ಕೈಗೆತ್ತಿ ಕೊಂಡಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ರಸ್ತೆ ಮಧ್ಯ ಭಾಗದಿಂದ 14.5 ಮೀ. ನಂತೆ ಒಟ್ಟು 29 ಮೀಟರ್ ರಸ್ತೆ ಅಗಲೀಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಭಾರತೀಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಬೀರಾವರ, ಮಹಾನಾಯಕ ದಲಿತಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೆರೆ, ವಂದೇ ಮಾತರಂ ಸಂಘಟನೆಯ ಯುವ ಘಟಕದ ಅಧ್ಯಕ್ಷ ಪಿ.ಕೃಷ್ಣಮೂರ್ತಿ, ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಅಜಯಕುಮಾರ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ದ್ದರು.ಈ ಸಂದರ್ಭದಲ್ಲಿ ಬಿಡಿಎಸ್ ಎಸ್ ರಾಜ್ಯ ಕಾರ್ಯಾಧ್ಯಕ್ಷ ಕೆ.ತಿಮ್ಮರಾಜು, ರಾಜ್ಯ ಉಪಾಧ್ಯಕ್ಷ ಚಂದ್ರಪ್ಪಘಾಟ್, ರಾಜ್ಯ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಅಧ್ಯಕ್ಷ ಚಿದಾನಂದ, ವಿಜಯ್ಕುಮಾರ್, ನಿಂಗರಾಜ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ರಾಮಚಂದ್ರ, ತಾಲೂಕು ಅಧ್ಯಕ್ಷ ರಾಘವೇಂದ್ರ, ಹಿರಿಯ ಉಪಾಧ್ಯಕ್ಷ ಕಣುಮೇಶ್, ಮಹಾ ನಾಯಕ ದಲಿತ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೊಳೆ ಯಪ್ಪ, ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಘಾಟ್, ಮಹoತೇಶ್, ಓಂಕಾರ್ ಮಟ್ಟಿ, ಕರ್ಣಕುಮಾರ್ ಮುಂತಾದವರು ಹಾಜರಿದ್ದರು.