ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಶಿವನಸಮುದ್ರ (ಬ್ಲಫ್)ನಲ್ಲಿ ಕರ್ನಾಟ ಪ್ರಾಂತ ರೈತ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಸಾಮೂಹಿಕ ಸದಸ್ಯತ್ವವೇ ಸಂಘಟನೆಯ ಜೀವಾಳವಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ರೈತರನ್ನು ಸಂಘಟಿಸಲು ಸಾಮೂಹಿಕ ಸದಸ್ಯತ್ವದ ವಿಧಾನ ಉತ್ತಮವಾಗಿದೆ ಎಂದರು.
ಬಡ ರೈತರು ಮತ್ತು ಕೃಷಿ ಕೂಲಿಕಾರರ ಒಗ್ಗಟ್ಟಿನ ಆಧಾರದ ಮೇಲೆ ಇಡೀ ರೈತ ಸಮೂಹ ನಿಂತಿದೆ. ಆ ಮೂಲಕ ರೈತ ಚಳವಳಿಯ ಗುರಿ ಮುಟ್ಟಲು ಸಾಧ್ಯ. ಕೆಲವೇ ಕೆಲವು ಆಸಕ್ತ ವ್ಯಕ್ತಿಗಳಿಗೆ ಸಂಘಟನೆಯನ್ನು ಸೀಮಿತಗೊಳಿಸದೇ ವಿಶಾಲಗೊಳಿಸಬೇಕು ಎಂದು ಕರೆ ನೀಡಿದರು.ನಮ್ಮನ್ನು ಆಳುವ ವರ್ಗಗಳು ರೈತ ಸಮುದಾಯವನ್ನು ತನ್ನ ಶೋಷಣೆಯ ಉದ್ದೇಶಕ್ಕಾಗಿ ಮೌಢ್ಯಕ್ಕೆ ತಳ್ಳುವ ಪದ್ಧತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಸಮಸ್ಯೆಗಳಿಗೆ ಹಣೆಬರಹ ಮತ್ತು ಕರ್ಮ, ಸಿದ್ಧಾಂತಗಳೆ ಕಾರಣ ಎಂದುಕೊಂಡಿರುವ ರೈತ ಸಮುದಾಯವನ್ನು ಜಾಗೃತಗೊಳಿಸಬೇಕು. ರೈತರ ಸಂಕಷ್ಟಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಪ್ರಬಲವಾಗಿ ಚಳವಳಿಯನ್ನು ಸಂಘಟಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸಮಿತಿಗೆ ಆಯ್ಕೆ:
ಸಂಘದ ಸಹ ಸಂಚಾಲಕರಾಗಿ ಎನ್.ಲಿಂಗರಾಜಮೂರ್ತಿ, ಎಂ.ಇ.ಮಹದೇವು, ಎಸ್.ವಿಶ್ವನಾಥ್, ಟಿ.ಆರ್.ಸಿದ್ದೇಗೌಡ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಪ್ರಮೀಳಾ, ಗುರುಸ್ವಾಮಿ, ರಾಮಣ್ಣ, ಸತೀಶ್ ಅವರನ್ನು ಆಯ್ಕೆಯಾಗಿದ್ದಾರೆ ಎಂದರು.