ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ದುದ್ದಹೊಬಳಿಯ ಹಾಡ್ಯ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಭೀಮ ಗೆಳೆಯರ ಬಳಗದಿಂದ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಕರವೇ ಸದಸ್ಯತ್ವ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡಭಾಷೆಯ ಮೇಲೆ ಅನ್ಯಭಾಷಿಗರ ದಾಳಿ, ದಬ್ಬಾಳಿಕೆ ಹೆಚ್ಚಾಗಿದೆ, ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗವಿಲ್ಲದಂತಾಗಿದೆ, ನೆರೆ ರಾಜ್ಯಗಳ ಕಂಪನಿಗಳು ನೆರೆರಾಜ್ಯದವರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಎಚ್ಚರಿಸಿದರು.ಕನ್ನಡಿಗರ ಹಿತಕಾಯುವ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಆಗೆ ಉಳಿದೆ, ಆಡಳಿತ ಮಾಡುವ ಸರ್ಕಾರಗಳಿಗೆ ಎಚ್ಚರಿಸುವ ಅತ್ಯಗತ್ಯವಿದೆ, ಇಂದಿನ ಯುವಕರ ಮತ್ತು ಮುಂದಿನ ತಲೆಮಾರಿನ ಕನ್ನಡಿಗರ ಹಿತಕಾಯುವ ಜವಾಬ್ದಾರಿ ಸಂಘಟನೆಗಳ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರವೇ ಮಂಡ್ಯ ತಾಲೂಕು ಅಧ್ಯಕ್ಷ ಎಸ್.ಎನ್. ತೇಜುಕುಮಾರ್, ಮಹಿಳಾ ತಾಲೂಕು ಅಧ್ಯಕ್ಷೆ ಶೋಭಾ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಉದಯ್ ಕುಮಾರ್, ಎನ್ ಮಂಜುನಾಥ್ ಮತ್ತು ಭೀಮ ಗೆಳೆಯರ ಬಳಗದ ಕಾರ್ತಿಕ್ ಗೌಡ, ಪ್ರಶಾಂತ್, ಗುರುಪ್ರಸಾದ್, ಕೀರ್ತಿ, ಅಭಿಜಿತ್, ಶ್ರೀನಿಧಿ, ಕೆಂಪರಾಜು, ಸಚಿನ್, ಚಂದನ್, ಮನೋಹರ್ ಮತ್ತು ಹಾಡ್ಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ಕಾರ್ಯಕ್ರಮವನ್ನು ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಚ್.ಎಂ.ಕಲಾಶ್ರೀ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಪಂಪನಿಂದ ಕುವೆಂಪು ಆದಿಯಾಗಿ ಹಲವರು ಕೃತಿ, ಮಹಾಕಾವ್ಯಗಳು, ವಿಮರ್ಶೆಗಳು, ನಾಟಕಗಳು ಹಾಗೂ ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ಎಂ.ಎಚ್.ಚನ್ನೇಗೌಡ ವಿದ್ಯಾನಿಲಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಇರಬೇಕಾದರೆ ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಂ.ಐ.ದರ್ಶನ್, ಎಚ್.ಕೆ.ವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಪಿ.ಕಿರಣ್, ಜಿ.ಸುರೇಂದ್ರ , ಗ್ರಂಥಪಾಲಕರಾದ ಆರ್.ಪಿ.ಚಂದನ, ಸಂದೀಪ್ ಆರ್.ಎಸ್., ಪ್ರದೀಪ್ ಎ.ವಿ, ಸ್ಮಿತಾ.ಸಿ, ಗಂಗಾಧರ್, ರಾಜೇಶ್, ಹರ್ಷ, ರೇಖಾ ಇದ್ದರು.