ನಗರ, ಗ್ರಾಮೀಣ ಸ್ನೇಹಿತರ ಕೂಟದಿಂದ ಕ್ರಿಕೆಟ್ ಆಯೋಜನೆ

KannadaprabhaNewsNetwork |  
Published : Jun 04, 2024, 12:30 AM IST
ಫೋಟೋ 2ಪಿವಿಡಿ3ಪಾವಗಡ,ತಾ,ಪಳವಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮೈಧಾನದಲ್ಲಿ ಹಮ್ಮಿಕೊಂಡಿದ್ದ ಪ್ರೆಂಡ್ಲಿ ಮ್ಯಾಚ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾವಗಡದ ತಂಡೋರ್‌ ರಾಕ್ಸ್‌ ತಂಡ ದ್ವಿತೀಯ ಸ್ಥಾನದೊಂದಿಗೆ ಕಫ್‌ ತನ್ನದಾಗಿಸಿಕೊಂಡಿದೆ.ತಂಡದ ಯುವಕರು ಹರ್ಷ ವ್ಯಕ್ತಪಡಿಸಿದ್ದಾರೆ. | Kannada Prabha

ಸಾರಾಂಶ

ನಗರ ಹಾಗೂ ಗ್ರಾಮೀಣ ಯುವಕರ ಸ್ನೇಹಿತರ ಕೂಟದಿಂದ ಪ್ರೆಂಡ್ಲಿ ಮ್ಯಾಚ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು.

ಪಾವಗಡ: ನಗರ ಹಾಗೂ ಗ್ರಾಮೀಣ ಸ್ನೇಹಿತರ ಕೂಟದ ವತಿಯಂದ ಭಾನುವಾರ ತಾಲೂಕಿನ ಪಳವಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಮೀಪದ ಮೈದಾನದಲ್ಲಿ ಒಂದು ದಿನದ ಕ್ರಿಕೆಟ್‌ ಪಂದ್ಯಾವಳಿಯ ಕ್ರೀಡಾಕೂಟ ಹಮ್ಮಿಕೊಂಡಿದ್ದು, ರೊದ್ದಂ ಗಲ್ಲಿಬಾಯ್ಸ್‌ ತಂಡ ಪ್ರಥಮ ಹಾಗೂ ನಗರದ ತಂಡೊರ್‌ ರಾಕ್ಸ್‌ ಯುವಕರ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ನಗರ ಹಾಗೂ ಗ್ರಾಮೀಣ ಯುವಕರ ಸ್ನೇಹಿತರ ಕೂಟದಿಂದ ಪ್ರೆಂಡ್ಲಿ ಮ್ಯಾಚ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ನಿಯಮಾನುಸಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ್ರಿಕೆಟ್‌ ಪಂದ್ಯಾವಳಿ ಸುಗಮವಾಗಿ ನಡೆದಿದ್ದು, ರೊದ್ದಂ ಗಲ್ಲಿಬಾಯ್ಸ್‌ ತಂಡ ಪ್ರಥಮ ಬಹುಮಾನದೊಂದಿಗೆ ಟ್ರೋಪಿ ಹಾಗೂ 3 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಪಾವಗಡದ ತಂಡೋರ್‌ ರಾಕ್ಸ್ ಯುವಕರ ತಂಡ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಟ್ರೋಪಿ ಹಾಗೂ 2 ಸಾವಿರ ನಗದು ಪಡೆದಿದೆ.

ಭಾಗವಹಿಸಿದ ಕ್ರಿಕೆಟ್‌ ತಂಡಗಳಿಗೆ ಸಮಾಧಾನಕರ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಗಿದೆ, ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ಅಚ್ಚುಕಟ್ಟಾಗಿ ಆಟವಾಡಿದ ಎಲ್ಲಾ ತಂಡಗಳಿಗೆ ಪಟ್ಟಣದ ತಂಡೋರ್‌ ರಾಕ್ಸ್‌ ಯುವಕ ತಂಡದ ದಿನೇಶ್‌ ,ಪಾವಗಡ ಮಂಜು,ಬನಶಂಕರಿ ಪಿ., ಮನ್ವಿತ್‌ ಭರತ್‌ ,ತಿಲಕ್‌ ,ಕಲ್ಯಾಣ್‌ ಸಂಜು,ಯಶ್ವಂತ್‌, ಗೋವಿಂದ, ನಾಗ ಮೂರ್ತಿ,ಗುರು, ಅಜಯ್‌, ಲಕ್ಕಿ ಹಾಗೂ ಯುವಕರು ಧನ್ಯವಾದ ಅರ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!