ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಂಗ್ರೆಸ್ ಸದಸ್ಯ ಅಯ್ಯೂಬ್ ತಬ್ಬುಖಾನ್ ಸಭಾಂಗಣದಲ್ಲೇ ಕುರ್ಚಿ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪೌರ ಕಾರ್ಮಿಕರ ಸೇವೆ ಕಾಯಂಮಾತಿ ವಿಚಾರದ ಚರ್ಚೆ ಸಭೆಯಲ್ಲಿ ನಡೆದಿರುವಾಗಲೇ ಈ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸಯ್ಯದ್ ಅಹ್ಮದ್ ಅವರು 967 ಪೌರ ಕಾರ್ಮಿಕರನ್ನು ನೇಮಕ ಮಾಡುವ ಚರ್ಚೆ ನಡೆಯುತ್ತಿದೆ. ಒಟ್ಟಾರೆ 1,041 ಕಾರ್ಮಿಕರು ಕೆಲಸ ಮಾಡುತ್ತಿದ್ದು ಎಲ್ಲರನ್ನೂ ಕಾಯಂ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೃಷ್ಣ ನಾಯ್ಕ್ ಇವರು, ದಲಿತರು, ಬಂಜಾರಾ ಸಮುದಾಯದ ಮಹಿಳೆಯರು ಕಸ ಗುಡಿಸುವುದನ್ನು ಕಂಡಿದ್ದೇವೆ. ಆದರೆ ಬುರ್ಖಾ ಹಾಕಿಕೊಂಡ ಮಹಿಳೆಯರು ಕಸ ಗುಡಿಸುವುದನ್ನು ನೋಡಿದ್ದೀರಾ? ಎಂದಾಗ ಕೆರಳಿದ ಕಾಂಗ್ರೆಸ್ನ ಅಯೂಬ್ ತಬ್ಬುಖಾನ್ ಕುರ್ಚಿ ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಮ್ಮ ಚೆಂಬರ್ನಲ್ಲಿ ಉಭಯ ಗುಂಪಿನ ಸದಸ್ಯರನ್ನು ಕರೆಯಿಸಿಕೊಂಡು ಸಭೆ ನಡೆಸಿದ ಮೇಯರ್ ವಿಶಾಲ್ ಧರ್ಗಿಯವರು ಕ್ಷಮೆ ಕೋರುವಂತೆ ಕೃಷ್ಣಾ ನಾಯಕ್ಗೆ ಸೂಚಿಸಿದರು. ಮೇಯರ್ ಸೂಚನೆಯಂತೆ ಕೃಷ್ಣ ನಾಯಕ್ ಸಭೆಯಲ್ಲಿ ಕ್ಷಮೆ ಕೋರಿದರು.