- ಜಮೀನಲ್ಲಿ ಒಂದರ ಬದಲಿಗೆ ಮೂರ್ಮೂರು ಯಂತ್ರಗಳ ಮೊರೆಹೋದ ರೈತರು
- ಕಟಾವು ಭತ್ತ, ಹುಲ್ಲು ಸುರಕ್ಷಿತವಾಗಿ ಕಣಕ್ಕೆ ಸಾಗಿಸಲು ರೈತರ ಹರಸಾಹಸ
- - - ಎಚ್.ಎಂ. ಸದಾನಂದಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಮುಂಗಾರು ಪೂರ್ವದಲ್ಲಿ ಕಳೆದ ವಾರದಿಂದ ಸುರಿದ ಭಾರಿ ಮಳೆಯು ರೈತರನ್ನು ಎಡಬಿಡದೇ ಕಾಡುತ್ತಿದೆ. ಈ ಸಂದರ್ಭ ಭರ್ಜರಿಯಾಗಿ ನಡೆಯಬೇಕಾಗಿದ್ದ ಭತ್ತ ಕಟಾವು ಕಾರ್ಯವೂ ಅಸ್ತವ್ಯಸ್ತಗೊಂಡಿದೆ.
ಮಲೇಬೆನ್ನೂರು, ಬಾನುವಳ್ಳಿ, ಉಕ್ಕಡಗಾತ್ರಿ, ಎಳೆಹೊಳೆ, ಧುಳೆಹೊಳೆ, ಹರಳಹಳ್ಳಿ, ಹಾಲಿವಾಣ, ಕೊಕ್ಕನೂರು, ಹಳ್ಳಿಹಾಳ್, ಬೂದಿಹಾಳು, ಯಲವಟ್ಟಿ ಮತ್ತು ನಂದಿತಾವರೆ ಮತ್ತಿತರೆ ಭಾಗಗಳಲ್ಲಿ ಭತ್ತವು ಕೆಂಪು ಬಣ್ಣಕ್ಕೆ ತಿರುಗಿದ್ದು, ಇದು ಕಟಾವಿಗೆ ಉತ್ತಮ ಸಮಯವಾಗಿದೆ. ಬೆಳೆದ ಭತ್ತ ಹಾಗೇ ಬಿಟ್ಟರೆ ಮಳೆಗೆ ಭತ್ತದ ಉದುರಲಿದೆ. ಇತ್ತ ವರುಣನ ಕಾಟ, ಅತ್ತ ಮಳೆರಾಯನ ಕಾಟ. ಹತ್ತು ನಿಮಿಷ ಬಿಡುವು ಕೊಟ್ಟು ಮತ್ತೆ ಧಾರಾಕಾರ ಸುರಿಯುವ ಮಳೆಯ ನಾಟಕದಿಂದ ರೈತರು ಹೈರಾಣಾಗುತ್ತಿದ್ದಾರೆ. ರೈತರಿಗೆ ಆರ್ಎನ್ಆರ್ ಭತ್ತ ಹೆಚ್ಚು ಇಳುವರಿ ಇಲ್ಲದ ಸಿಟ್ಟು ಬೇರೆ. ಇಂಥ ಸಂದರ್ಭದಲ್ಲಿ ಭತ್ತ ಕಟಾವು ಮಾಡುವುದು, ಹುಲ್ಲನ್ನು ಕೊಳೆಯದಂತೆ ಸುರಕ್ಷಿತವಾಗಿ ಕಣಗಳಿಗೆ ಸಾಗಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ.
- - -
ಮಳೆಯಿಂದಾಗಿ ಭತ್ತ ಕೈಗೆ ಸಿಗುತ್ತಿಲ್ಲ, ದನಗಳಿಗೆ ಮೇವೂ ದೊರಕುತ್ತಿಲ್ಲ. ಮಳೆ ಕಾರಣ ಭತ್ತ ಕಟಾವು ಯಂತ್ರಗಳಿಗೆ ಡಿಮ್ಯಾಂಡ್ ಬಂದಿದೆ. ಎಕರೆಗೆ ₹೨೦೦೦ ಕ್ಕೂ ಅಧಿಕ ಬಾಡಿಗೆ ಹಣ ವಸೂಲು ಮಾಡುತ್ತಿದ್ದಾರೆ. ಎಕರೆಗೆ ೪೦ ಚೀಲ ಭತ್ತ ಬರಬೇಕಿದ್ದು, ಇಳುವರಿ ಕಡಿಮೆಯಾಗಿದೆ. ಇಂದು ರೈತನ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಕಟಾವಿಗೆ 2 ತಿಂಗಳ ಮುಂಚಿತವಾಗಿ ಭತ್ತಕ್ಕೆ ವೈಜ್ಞಾನಿಕ ಬೆಲೆ ಬಗ್ಗೆ ಆದೇಶ ಮಾಡಬೇಕು.
ಖಾಸತಿ ಭತ್ತ ಕಟಾವು ಯಂತ್ರಗಳ ಮಾಲೀಕರು ಸರ್ಕಾರ ಎಕರೆಗೆ ಇಂತಿಷ್ಟು ನಿಗದಿಪಡಿಸಿದ ದರವನ್ನು ಮಾತ್ರವೇ ರೈತರಿಂದ ಪಡೆಯಬೇಕು. ಇದನ್ನು ಹೊರತುಪಡಿಸಿ ಹೆಚ್ಚಿನ ಹಣ ವಸೂಲು ಮಾಡಿದರೆ ತಪ್ಪಾಗುತ್ತದೆ. ಒಂದುವೇಳೆ ಮಾಲೀಕರು ಹೆಚ್ಚಿನ ಹಣ ವಸೂಲು ಮಾಡುತ್ತಿದ್ದರೆ ತಕ್ಷಣ ರೈತರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ.
- - -
-ಚಿತ್ರ-೩: ಮಳೆರಾಯನ ಆರ್ಭಟದಿಂದಾಗಿ ನೀರು ನಿಂತಿರುವುದು.