ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 109 ಮಕ್ಕಳು ಸಜ್ಜು । 1991ರಿಂದ 6000 ಮಕ್ಕಳಿಗೆ ಶಿಕ್ಷಣ ಒದಗಿಸಿದ ಶಾಲೆಕೃಷ್ಣ ಲಮಾಣಿ
ಶ್ರೀಕಾರ್ಮಾರ್ ವಿದ್ಯಾಪೀಠ ಸಂಸ್ಥೆಯಲ್ಲಿ ನಡೆಯುತ್ತಿರುವ ಪಾಪಿನಾಯಕನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಹೆಸರನ್ನು ಶಾಲಾ ಆಡಳಿತ ಮಂಡಳಿ ಕೋರಿಕೆ ಮೇರೆಗೆ "ಅಕ್ಷಯ ಸ್ಮಾರಕ ಪ್ರೌಢಶಾಲೆ " ಎಂದು ಹೆಸರು ಬದಲಾವಣೆ ಮಾಡಲು ವಿಜಯನಗರ ಜಿಲ್ಲಾ ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಆದೇಶ ನೀಡಿದ್ದಾರೆ.
1991ರಿಂದ ಪಾಪಿನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ಗ್ರಾಮಾಂತರ ಪ್ರೌಢಶಾಲೆ ಆ ಭಾಗದ ಹಳ್ಳಿಗಾಡಿನ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣಕ್ಕೆ ಅನುಕೂಲಕರವಾಗಿದೆ. ಒಂಬತ್ತನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಈ ಶಾಲೆಯಲ್ಲಿ 258 ಬಾಲಕ, ಬಾಲಕಿಯರು ಓದುತ್ತಿದ್ದಾರೆ.ಈ ಹಿಂದೆ ಎಂಟನೆ ತರಗತಿಯಿಂದ ಹತ್ತನೆ ತರಗತಿಯ ವರೆಗೆ ಈ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. ಈಗ ಸರ್ಕಾರ ಹೈಸ್ಕೂಲ್ ಶಿಕ್ಷಣವನ್ನು ಒಂಬತ್ತನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ನಿಗದಿಗೊಳಿಸಿದೆ. ಈ ಶಾಲೆಯಲ್ಲಿ ಇದುವರೆಗೆ 6000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.
ಕಳೆದ ವರ್ಷ ಅಪಘಾತದಲ್ಲಿ ಅವರ ಪುತ್ರ ಅಕ್ಷಯ ಅಕಾಲಿಕ ನಿಧನ ಹೊಂದಿದ ಹಿನ್ನೆಲೆ ಈ ಶಾಲೆಗೆ ಈಗ ಅಕ್ಷಯ ಸ್ಮಾರಕ ಪ್ರೌಢಶಾಲೆ ಎಂದು ಮರು ನಾಮಕರಣ ಮಾಡಲಾಗಿದೆ. ಅಕ್ಷಯ ಕೂಡ ತಾನು ಎಂಟೆಕ್ ಶಿಕ್ಷಣ ಪೂರೈಸಿದ ಬಳಿಕ ಹಾಗೂ ಎಂಜಿನಿಯರಿಂಗ್ ಓದುತ್ತಿದ್ದಾಗ ಬಿಡುವಾದಾಗಲೆಲ್ಲ; ಶಾಲೆಗೆ ತೆರಳಿ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ವಿಷಯ ಹೇಳಿಕೊಡುತ್ತಿದ್ದರು. ಈ ಶಾಲೆಯನ್ನು ಹೆಮ್ಮರವಾಗಿ ಬೆಳೆಸಬೇಕೆಂಬ ಮಹದಾಶಯ ಹೊಂದಿದ್ದರು.
1991ರಲ್ಲಿ ಆರಂಭಗೊಂಡ ಗ್ರಾಮಾಂತರ ಪ್ರೌಢಶಾಲೆಯನ್ನು ಅಕ್ಷಯ ಸ್ಮಾರಕ ಪ್ರೌಢಶಾಲೆ ಎಂದು ಹೆಸರು ಬದಲಾವಣೆ ಮಾಡಿ ಡಿಡಿಪಿಐ ಆದೇಶ ನೀಡಿದ್ದಾರೆ. ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ನಮ್ಮ ಆಡಳಿತ ಮಂಡಳಿ ಅಭಾರಿಯಾಗಿದೆ ಎಂದು