ಕನ್ನಡಪ್ರಭವಾರ್ತೆ, ತರೀಕೆರೆ
ವಿಕಸನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಕಸನ ಸಂಸ್ಥೆ ಮಾನವ ಸಂಪನ್ಮೂಲ ಕೇಂದ್ರದಲ್ಲಿ ನಮ್ಮ ಭೂಮಿ ನಮ್ಮ ರಕ್ಷಣೆ ಎಂಬ ಶೀರ್ಷಿಕೆಯೊಂದಿಗೆ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಗಿಡಬೆಳೆಸುವಂತಾಗಬೇಕು. ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡಬೇಕು. ಗಿಡ-ಮರ ಬೆಳೆಸಿ ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನದ ಬಗ್ಗೆ ಮಕ್ಕಳಿಗೆ ಕಲಿಸಬೇಕಾಗಿರುವುದು ಪೋಷಕರ ಜವಾಬ್ಧಾರಿಯಾಗಿದೆ ಎಂದ ಅವರು, ಈವರೆಗೆ ವಿಕಸನ ಸಂಸ್ಥೆಯಿಂದ ಪ್ರತಿವರ್ಷ ಪರಿಸರ ದಿನಾಚರಣೆ ಹಾಗೂ ವರ್ಷಪೂರ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಹಾಗೂ ರೈತರಿಗೆ ಬೇಕಾದ ಮಾವು, ಬೇವು, ಹಲಸು, ನೇರಳೆ, ನುಗ್ಗೆ, ಸಪೋಟ, ನಿಂಬೆ, ದಾಳಿಂಬೆ ಇನ್ನಿತರ ಔಷಧಿ ಸಸ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.ಜನರು ತಮ್ಮ ಜೀವನ ನಿರ್ವಹಣೆ ಮಾಡುತ್ತಿರುವ ವಿಷಯವನ್ನು ಅವರು ವಿವರಿಸಿದರು ಮತ್ತು ಮರ ಕಡಿಯುವುದರಿಂದ ಆಗುವ ಹಾನಿ, ಮಳೆ ಬಾರದಿರುವುದು, ಜಾಗತಿಕ ತಾಪಮಾನ ಏರಿಕೆ, ಮನುಷ್ಯರಿಗೆ ಬರುವ ರೋಗರುಜಿನ ಕುರಿತು ವಿವರವಾಗಿ ತಿಳಿಸಿದರು.
ತರೀಕೆರೆ ವಾಲ್ಮೀಕಿ ಸಂಘದ ಪಧಾಧಿಕಾರಿಗಳಾದ ರಾಮಪ್ಪ ಮಾತನಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆ ಜಗತ್ತಿಗೆ ನೀಡಬೇಕೆಂದು ಅವರು ತಿಳಿಸಿದರು.
ಪರಮೇಶ್ವರಪ್ಪ, ಮಂಜುನಾಥ್, ರಾಮಚಂದ್ರಪ್ಪ, ಅಂತೋಣಿಕಾಂತ, ಶಿವಪ್ಪ, ಚಂದ್ರಪ್ಪ, ಶ್ರೀನಿವಾಸ್, ಲಿಲ್ಲಿ ವರ್ಗಿಸ್, ಅನ್ಸಿಲಾ ಗ್ರಗೋರಿ, ಕ್ರಿಸ್ತ ದಯಾ ಕಮಾರ್, ವಿಭಾ ವರ್ಗೀಸ್ ಹಾಗೂ ಮಕ್ಕಳ ಪೋಷಕರು, ಸಾರ್ವಜನಿಕರು, ವಿಕಸನ ಸಂಸ್ಥೆ ಸಂಯೋಜಕರು, ಕಚೇರಿ ಸಿಬ್ಬಂದಿ, ವಿಕಸನ ಸಂಸ್ಥೆ ಚಟ್ಟನಹಳ್ಳಿ ಹಾಗೂ ದುಗ್ಲಾಪುರ ವಸತಿಶಾಲೆಯ ಮಕ್ಕಳು ಹಾಗೂ ಪೋಷಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.