ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಪೋಷಕರ ಆಕ್ರೋಶ; ಸಂಧಾನ

KannadaprabhaNewsNetwork |  
Published : Aug 25, 2025, 01:00 AM IST
ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಶಾಲಾ ಶಿಕ್ಷಕರ ಹೆಚ್ಚುವರಿ ಆದೇಶ ಪಟ್ಟಿ ಕಂಡು ಪೋಷಕರು ಎರಡು ದಿನಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸಮೀಪದ ನಂದಿಗುಡಿ ಗ್ರಾಮದಲ್ಲಿ ಜರುಗಿದೆ.

ಮಲೇಬೆನ್ನೂರು: ಶಾಲಾ ಶಿಕ್ಷಕರ ಹೆಚ್ಚುವರಿ ಆದೇಶ ಪಟ್ಟಿ ಕಂಡು ಪೋಷಕರು ಎರಡು ದಿನಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸಮೀಪದ ನಂದಿಗುಡಿ ಗ್ರಾಮದಲ್ಲಿ ಜರುಗಿದೆ.

ಸಮೀಪದ ನಂದಿಗುಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೪೬ ವಿದ್ಯಾರ್ಥಿಗಳಿದ್ದು ಇಬ್ಬರು ಶಿಕ್ಷಕರಿಗೆ ಮಾತ್ರ ಅವಕಾಶವಿದೆ. ಆದರೆ ಶಿಕ್ಷಣ ಇಲಾಖೆಯೇ ಈಚೆಗೆ ಮೂವರು ಶಿಕ್ಷಕರನ್ನು ಇಲ್ಲಿ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಿದ್ದು ಪ್ರಸ್ತುತ ಮೂವರು ಶಿಕ್ಷಕರಲ್ಲಿ ಪೀರ್ಯಾನಾಯ್ಕ ಎಂಬುವರನ್ನು ಹೆಚ್ಚುವರಿ ಪಟ್ಟಿಯಲ್ಲಿ ಹಾಕಿದ್ದು ಗ್ರಾಮದ ಪೋಷಕರನ್ನು ಕೆಂಡವಾಗಿಸಿತು.

ಶುಕ್ರವಾರ ಮತ್ತು ಶನಿವಾರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪರವರಲ್ಲಿ ವಾಗ್ವಾದ ನಡೆಸಿ ಶಿಕ್ಷಣ ಇಲಾಖೆಯ ನಿಯಮವನ್ನೇ ಗಾಳಿಗೆ ತೂರಿ ಮೂವರನ್ನು ಯಾಕೆ ನೇಮಕ ಮಾಡಿದ್ದೀರಿ, ಉಪನಿರ್ದೆಶಕರನ್ನು, ಜಿಲ್ಲಾಧಿಕಾರಿಯವರನ್ನು ಸ್ಥಳಕ್ಕೆ ಕರೆಸಿ ಅವರ ಜತೆ ಮಾತಾಡುತ್ತೇವೆ ಬರುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಪಟ್ಟು ಹಿಡಿದರು.

ದುರುಗಪ್ಪ ಮನವಿ ಮಾಡಿದರೂ ಸಹ ಪೋಷಕರು ಪ್ರತಿಭಟನೆ ಮುಂದುವರಿಸಿದ್ದರು.

ಶನಿವಾರ ವಿಷಯ ತಿಳಿದ ಶಾಸಕ ಬಿ ಪಿ ಹರೀಶ್ ನಂದಿಗುಡಿ ಶಾಲೆಗೆ ಭೇಟಿ ನೀಡಿ ಪೋಷಕರಿಗೆ ಮನವೊಲಿಸಿ ಶಿಕ್ಷಣ ಮಂತ್ರಿ ಮಧುಬಂಗಾರಪ್ಪನವರ ಜತೆ ಚರ್ಚಿಸಿ ಹೆಚ್ಚುವರಿ ಶಿಕ್ಷಕರು ವಗಾವಣೆಯಾಗಲಿ ನಂತರ ನಿಯೋಜನೆ ಮಾಡೋಣ ಎಂದಾಗ ಪೋಷಕರು ತಮ್ಮ ಪ್ರತಿಭಟನೆ ವಾಪಾಸ್ ಪಡೆದರು. ಮಕ್ಕಳು ಮಧ್ಯಾಹ್ನ ಶಾಲೆಗೆ ಆಗಮಿಸಿ ಬಿಸಿಯೂಟ ಸವಿದರು. ಗ್ರಾಮದ ಕೆಂಚವೀರಯ್ಯ, ಎಸ್‌ಡಿಎಂಸಿ ಪದಾಧಿಕಾರಿಗಳಾದ ಸುನೀತಾ, ಬಸವನಗೌಡ, ನಂದಿನಿ, ಉಷಾ, ಲೀಲಾವತಿ, ನೇತ್ರಾ, ಲತಾ, ಗ್ರಾಮಸ್ಥರು ಇದ್ದರು.ಚಿತ್ರ-೪: ಮಲೇಬೆನ್ನೂರಿನ ನಂದಿಗುಡಿ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ