ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು: ಮಾಕಾರು ಸತೀಶ್

KannadaprabhaNewsNetwork |  
Published : Dec 31, 2025, 01:30 AM IST
 ನರಸಿಂಹರಾಜಪುರ ತಾಲೂಕಿನ ನಾಗರಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಫೌಂಡೇಷನ್ ವತಿಯಿಂದ  23 ಶಾಲಾ ಮಕ್ಕಳಿಗೆ ನೋಟು ಬುಕ್ ವಿತರಿಸಲಾಯಿತು. ಅಮ್ಮ ಫೌಂಡೇಷನ್ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಶಿಕ್ಷಣ ವಿಭಾಗದ ಮುಖ್ಯಸ್ಥ ಮಾಕಾರು ಸತೀಶ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಪೋಷಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದು ಅಮ್ಮ ಫೌಂಡೇಷನ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಮಾಕಾರು ಸತೀಶ್ ಸಲಹೆ ನೀಡಿದರು.

ನರಸಿಂಹರಾಜಪುರ: ಪೋಷಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದು ಅಮ್ಮ ಫೌಂಡೇಷನ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಮಾಕಾರು ಸತೀಶ್ ಸಲಹೆ ನೀಡಿದರು.

ಮಂಗಳವಾರ ನಾಗರಮಕ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಫೌಂಡೇಷನ್‌ನಿಂದ ಮಕ್ಕಳಿಗೆ ನೋಟ್‌ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟರು ಕಳೆದ 15 ವರ್ಷದಿಂದಲೂ ಅಮ್ಮನ ನೆನಪಿಗಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ 6 ವರ್ಷದಿಂದ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅಮ್ಮ ಫೌಂಡೇಷನ್‌ನಿಂದ 30 ಆರೋಗ್ಯ ಶಿಬಿರ ನಡೆಸಲಾಗಿದೆ. ನೇತ್ರ ಶಿಬಿರಗಳನ್ನು ನಡೆಸಿ 230 ಜನರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. 5 ಸಾವಿರ ಜನರಿಗೆ ಕನ್ನಡಕ ವಿತರಿಸಲಾಗಿದೆ. 2 ರಿಂದ 3 ಬಾರಿ ಉದ್ಯೋಗ ಮೇಳ ನಡೆಸಲಾಗಿದೆ. ಕೊರೋನ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಅವರು 10 ರಿಂದ 12 ಸಾವಿರ ಜನರಿಗೆ ಹೆಲ್ತ್‌ಕಿಟ್ ನೀಡಿದ್ದಾರೆ. ಪ್ರತಿ ವರ್ಷ 50 ರಿಂದ 60 ಶಾಲೆಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತಿದೆ. ಅಗತ್ಯವಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಮುಖಂಡ ಬೆಮ್ಮನೆ ಸುಬೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮ್ಮ ಫೌಂಡೇಷನ್ ಮೂಲಕ ನಮಗೂ ಸಮಾಜ ಸೇವೆ ಮಾಡುವ ಭಾಗ್ಯ ದೊರಕಿದೆ. ಹಣ ಇದ್ದವರೆಲ್ಲಾ ದಾನ ಮಾಡುವುದಿಲ್ಲ. ಸುಧಾಕರ ಶೆಟ್ಟಿ ಅವರು ಜಾತಿ, ಧರ್ಮ ಭೇದವಿಲ್ಲದೆ ಸಮಾಜದ ಎಲ್ಲರಿಗೂ ದಾನ ಮಾಡುತ್ತಾರೆ. ಇಂತಹ ದಾನಿಗಳಿಗೆ ಜನರ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಅಮ್ಮ ಫೌಂಡೇಷನ್ ನ ಶೃಂಗೇರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಮಾತನಾಡಿ, ಅಮ್ಮ ಫೌಂಡೇಷನ್‌ನಿಂದ ಅಗತ್ಯವಿದ್ದ 65 ಜನರಿಗೆ ವ್ಹೀಲ್‌ಚೇರ್‌ ನೀಡಿದ್ದೇವೆ. ಅಮ್ಮ ಫೌಂಡೇಷನ್ ಸದಸ್ಯರ ಸಲಹೆ ಮೇರೆಗೆ ಆಯಾ ಭಾಗದಲ್ಲಿ ಅಗತ್ಯ ಇರುವ ಜನರಿಗೆ ಸಹಾಯ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸುಧಾಕರ್ ಶೆಟ್ಟಿ ಆಪ್ತ ಕಾರ್ಯದರ್ಶಿ ಪೂರ್ಣೇಶ್, ಅಮ್ಮ ಫೌಂಡೇಷನ್ ಸದಸ್ಯರಾದ ಕೆರೆಗದ್ದೆ ಮಂಜುಳಾ, ರಂಜಿತ, ನಾಗರಮಕ್ಕಿ ಶಾಲೆಯ ಎಸ್‌ಡಿಎಂಸಿ ಸದಸ್ಯ ಗಣಪತಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಇದ್ದರು. ಶಾಲೆಯ ಶಿಕ್ಷಕ ರಾಜಶೇಖರಯ್ಯ ಸ್ವಾಗತಿಸಿದರು. ಶಾಲೆಯ 23 ಮಕ್ಕಳಿಗೆ ನೋಟು ಬುಕ್ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಬಸ್‌ ನಿಲ್ದಾಣಕ್ಕೆ 100ಕೋಟಿ ನೀಡಲು ಮನವಿ
ಮಂಡ್ಯದಲ್ಲಿ ಪೌರ ಕಾರ್ಮಿಕರಿಂದ ಕೇಕ್‌ ಮೇಳ ಉದ್ಘಾಟನೆ