ದೇವಿಯ ಆರಾಧನೆಯಿಂದ ಶಾಂತಿ: ದುರಗಣ್ಣವರ

KannadaprabhaNewsNetwork |  
Published : Oct 07, 2024, 01:42 AM IST
6ಜಿಡಿಜಿ8 | Kannada Prabha

ಸಾರಾಂಶ

ನಮ್ಮ ಪರಂಪರೆ, ಸಂಸ್ಕೃತಿ ಆಚರಣೆ ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ

ಲಕ್ಷ್ಮೇಶ್ವರ: ನವರಾತ್ರಿ ಉತ್ಸವದಲ್ಲಿ ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ದಸರಾ ಸಮಿತಿ ಹಮ್ಮಿಕೊಂಡಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದುರ್ಗಾದೇವಿಯನ್ನು ಆರಾಧಿಸುವುದರಿಂದ ಮಾನಸಿಕ ಕ್ಲೇಶ ಕಳೆದು ಶಾಂತಿ ನೆಮ್ಮದಿ ಮೂಡುತ್ತದೆ. ನಮ್ಮ ಪರಂಪರೆ, ಸಂಸ್ಕೃತಿ ಆಚರಣೆ ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದರು.

ದುರ್ಗಾ ದೌಡ್ ಕಾರ್ಯಕ್ರಮ ಭಾನುವಾರ ಬೆಳಗ್ಗೆ 5:30ಕ್ಕೆ ಕೆಮ್ಮಮ್ಮ ದೇವಿ ದೇವಸ್ಥಾನದಿಂದ ಪ್ರಾರಂಭಗೊಂಡು ಮ್ಯಾಗೇರಿ ಓಣಿಯ ದುರ್ಗಮ್ಮನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ಈ ವೇಳೆ ಗುರುನಾಥ ದಾನಪ್ಪನವರ, ವಿರುಪಾಕ್ಷಪ್ಪ ಪಡಗೇರಿ, ಸಿದ್ದಪ್ಪ ಪೂಜಾರ, ಸಿದ್ದಪ್ಪ ಬನ್ನಿ,ಶಂಕರ ಬಾಳಿಕಾಯಿ, ಮಹೇಶ ಲಿಂಬಯಸ್ವಾಮಿಮಠ, ನೀಲಪ್ಪ ಕರ್ಜಕ್ಕಣ್ಣವರ, ಸಿದ್ದಪ್ಪ ದುರಗಣ್ಣವರ, ಮಹೇಶ ಹೊಗೆಸೊಪ್ಪಿನ, ಗಂಗಾಧರ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ, ದಸರಾ ಸಮಿತಿ ಅಧ್ಯಕ್ಷ ದೇವಪ್ಪ ಗಡೆದ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ರಾಜು ಅರಳಿ, ರವಿ ಲಿಂಗಶೆಟ್ಟಿ, ಪ್ರಶಾಂತ ಪೋತದಾರ, ಕೊರದಾಳ, ರಾಜೇಶ್ವರಿ ದಾನಪ್ಪನವರ, ಪೋತುದಾರ, ನಾಗರತ್ನ ನಾಗಲೋಟಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ