- ಚದರ ಮೀಟರ್ಗೆ ₹20ರಂತೆ ದಂಡ ವಿಧಿಸಿ ವಸೂಲಿ- - - ಕನ್ನಡಪ್ರಭ ವಾತ್ರೆ ಹೊನ್ನಾಳಿ
ಖಾಲಿ ನಿವೇಶನ ಮತ್ತು ಬಡಾವಣೆಗಳಲ್ಲಿ ಕಳೆ ಗಿಡಗಳು, ಜಾಲಿ ಮರಗಳು ಅತಿ ಹೆಚ್ಚಾಗಿ ಬೆಳೆದಿವೆ. ಸೊಳ್ಳೆಗಳು ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ವಿವಿಧ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಅಕ್ಕಪಕ್ಕದ ಮನೆಗಳ ಮಾಲೀಕರು ಮತ್ತು ಸಾರ್ವಜನಿಕರು ಪದೇಪದೆ ದೂರು ನೀಡಿ, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ಸಂಬಂಧಿಸಿದ ನಿವೇಶನಗಳ ಮಾಲೀಕರು ತುರ್ತಾಗಿ ಖಾಲಿ ಜಾಗಗಳು, ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಈಗಾಗಲೇ ಈ ವಿಷಯವನ್ನು ಪುರಸಭೆ ವಾಹನ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಈ ಕಾರ್ಯ ಯಶಸ್ವಿಯಾಗಲು ಪುರಸಭೆಯೊಂದಿಗೆ ನಾಗರಿಕರು ಸಹಕರಿಸಬೇಕು. ಹೊನ್ನಾಳಿ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರ ಪಟ್ಟಣವನ್ನಾಗಿಸಲು ಕೈ ಜೋಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಎಚ್. ಮನವಿ ಮಾಡಿದ್ದಾರೆ.- - - -1ಎಚ್.ಎಲ್.ಐ3: ಎಚ್.ನಿರಂಜನಿ