ತಣ್ಣಗಾದ ಕೃಷ್ಣೆ, ನೆರೆ ಭಯದಿಂದ ಜನತೆ ಪಾರು

KannadaprabhaNewsNetwork |  
Published : Aug 29, 2025, 01:00 AM IST
ಹಿಪ್ಪರಗಿ ಜಲಾಶಯದಲ್ಲಿ ಗುರುವಾರದಂದು ೬೭೫೮೦ ಕ್ಯುಸೆಕ್‌ನಷ್ಟು ನೀರಿನ ಹರಿವಿನ ಪ್ರಮಾಣವಿದ್ದು, ನೀರಿನ ಹರಿವಿನ ಪ್ರಮಾಣ ನಿಯಂತ್ರಣದಲ್ಲಿದೆ. | Kannada Prabha

ಸಾರಾಂಶ

ಮಹಾರಾಷ್ಟ್ರದಿಂದ ಬಿಡುಗಡೆಯಾಗುತ್ತಿರುವ ನೀರು ಹಾಗು ಮಳೆರಾಯನ ಅಬ್ಬರದಿಂದ ೨.೨ ಲಕ್ಷ ಕ್ಯುಸೆಕ್ ಹರಿವು ತಲುಪಿದ್ದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ೬೭,೫೮೦ ಕ್ಯುಸೆಕ್ ಒಳಹರಿವಿದ್ದು, ಜಲಾಶಯದಿಂದ ೬೬,೮೩೦ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಹಾರಾಷ್ಟçದಿಂದ ಬಿಡುಗಡೆಯಾಗುತ್ತಿರುವ ನೀರು ಹಾಗು ಮಳೆರಾಯನ ಅಬ್ಬರದಿಂದ ೨.೨ ಲಕ್ಷ ಕ್ಯುಸೆಕ್ ಹರಿವು ತಲುಪಿದ್ದ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ೬೭,೫೮೦ ಕ್ಯುಸೆಕ್ ಒಳಹರಿವಿದ್ದು, ಜಲಾಶಯದಿಂದ ೬೬,೮೩೦ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ. ಕೃಷ್ಣೆಯ ನೆರೆ ಭೀತಿಯಿಂದ ಭಯದಿಂದಿದ್ದ ಜನತೆ ನಿರಾಳಗೊಂಡಿದ್ದಾರೆ. ಇದರಿಂದ ನದಿ ಸುತ್ತಲಿನ ರಬಕವಿ ನಾಗರಿಕರು ಸೇರಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಈಗಾಗಲೇ ಘಟಪ್ರಭಾ ನದಿಯು ಇಳಿಮುಖ ಕಂಡಿದೆ. ಘಟಪ್ರಭಾ ನದಿ ನೀರಿನ ಮಟ್ಟವೂ ಗಣನೀಯವಾಗಿ ಇಳಿಕೆಯಾಗಿದ್ದು, ಘಟಪ್ರಭಾ ನದಿ ಸಂಪರ್ಕದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌