ಆನಂದ ಭಮ್ಮನ್ನವರ
ಪಟ್ಟಣದ ವಾರ್ಡ್ ನಂ.18 ರಲ್ಲಿನ ಅದರಲ್ಲೂ ಅನಂತ ವಿದ್ಯಾನಗರದಲ್ಲಿ ಪುರಸಭೆಯ ಸದಸ್ಯರ ಮನೆಯ ಅಕ್ಕ ಪಕ್ಕದಲ್ಲಿನ ನಿವಾಸಿಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೇ ನೀರಿಗಾಗಿ ಕೊಡ ಹಿಡಿದು ನೀರಿಗಾಗಿ ಅಲೆಯುವಂತಾಗಿದೆ.
ಹಿಡಕಲ್ಲ ಜಲಾಶಯದಿಂದ ಸಂಕೇಶ್ವರಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ, ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆಗೆ ಗ್ರಹಣ ಹಿಡಿದಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಸರಿಯಾಗಿ ಪಟ್ಟಣದ ಜನರಿಗೆ ನೀರು ಸರಬರಾಜು ಮಾಡದೆ ಇರುವುದು ಜನರು ನೀರಿಗಾಗಿ ಪರದಾಡುವಂತಾಗಿದೆ.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೆಗೆ ತದ್ವಿರುದ್ಧವೆಬಂತೆ ಸಂಕೇಶ್ವರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪುರಸಭೆ ಅಧಿಕಾರಿಗಳು ವಿಫಲವಾಗಿದ್ದಾರೆ.
----------
ಪಟ್ಟಣದಲ್ಲಿ 24/7 ನೀರಿನ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದ್ದು, ಪ್ರತಿ ತಿಂಗಳು ನೀರಿನ ಕರ ಪಾವತಿಸಬೇಕು. ಆದರೆ, ಸರಿಯಾಗಿ ನೀರು ಪೂರೈಕೆ ಮಾತ್ರ ಮಾಡುವುದಿಲ್ಲ ಎಂದು ಇಲ್ಲಿನ ಪುರಸಭೆ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಇಲ್ಲಿನ ಜನರು ಬೇಸರ ವ್ಯಕ್ತ ಪಡೆಸುತ್ತಿದ್ದಾರೆ.--------------
- ವಿನೋದ ನಾಯಿಕ, ಪುರಸಭೆ ಸದಸ್ಯರು.