ನಾರಾಯಣ ಮಾಯಾಚಾರಿ
ಬಿಸಿಲು ಎಲ್ಲರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನ ಆರ್ಭಟ ಈಗ 40 ಡಿಗ್ರಿ ಸೆಲ್ಸಿಯಸ್ಗೆ ಬಂದು ನಿಂತಿದೆ. ಹೊರಗಡೆ ಕಾಲಿಟ್ಟರೆ ಉಷ್ಣಮಯ ವಾತಾವರಣ. ಹೀಗಾಗಿ ಮಕ್ಕಳು, ವೃದ್ಧರು, ವಯಸ್ಸಿನವರು ಕೂಡ ಹೊರಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ವಾತಾವರಣ ಇರುವುದರಿಂದ ಸಹಜವಾಗಿ ವ್ಯಾಪಾರ, ವಹಿವಾಟಿನ ಮೇಲೆಯೂ ಅಷ್ಟೇ ಪರಿಣಾಮ ಬೀರಿದೆ.
ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನರು ಕೂಡ ಹೆಚ್ಚಾಗಿ ಹೊರ ಬರಲು ಯೋಚಿಸುವಂತಾಗಿದೆ. ಕೇವಲ ಮುದ್ದೇಬಿಹಾಳ ಪಟ್ಟಣ ಮಾತ್ರವಲ್ಲ, ತಾಲೂಕಿನ ಬಹುತೇಕ ಗ್ರಾಮಗಳು ಮತ್ತು ಹೋಬಳಿಗಳಲ್ಲಿಯೂ ಇಷ್ಟೇ ಪ್ರಖರತೆಯ ವಾತಾವರಣ ನಿರ್ಮಾಣಗೊಂಡಿದೆ. ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಪಪೂ ಕಾಲೇಜುಗಳಿಗೆ ರಜೆ ಇರುವುದರಿಂದ ಸಹಜವಾಗಿ ಮಕ್ಕಳಿಗೆ ಬೇಸಿಗೆ ಝಳ ತಟ್ಟಿಲ್ಲ. ಆದರೆ, ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಿಸಿಲಿನ ಝಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.ಬಸ್ಸಿನಲ್ಲಿ ಪ್ರಯಾಣವೇ ದುಸ್ತರ:ವಿಜಯಪುರ, ತಾಳಿಕೋಟೆ, ಇತ್ತ ಬಾಗಲಕೋಟೆ, ಕಲಬುರ್ಗಿ, ಬೀದರ್, ಯಾದಗಿರಿ, ಬೆಳಗಾವಿ ಸೇರಿದಂತೆ ಬಹುತೇಕ ಭಾಗಗಳಿಂದ ಮುದ್ದೇಬಿಹಾಳಕ್ಕೆ ಪ್ರಯಾಣಿಸುವವರು ಸಂಖ್ಯೆ ಸಾಕಷ್ಟು ಜನರಿದ್ದಾರೆ. ಮಾತ್ರವಲ್ಲ, ಸುತ್ತಮುತ್ತಲ ಗ್ರಾಮಗಳ ಜನರು, ರೈತರು ತಮ್ಮ ವ್ಯಾಪಾರ ವಹಿವಾಟು, ಮಾರಾಟಕ್ಕೆ ಮುದ್ದೇಬಿಹಾಳದ ಪಟ್ಟಣವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಹೀಗಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಜನರಿಗೆ ಬಿಸಿಲ ಧಗೆ ಸಾಕಷ್ಟು ತೊಂದರೆ ಮಾಡಿಕೊಟ್ಟಿದೆ. ಬಸ್ಸಿನಲ್ಲಿ ಪ್ರಯಾಣ ಬೆಳೆಸುವವರಂತೂ ಹೈರಾಣಾಗಿ ಹೋಗಿದ್ದಾರೆ. ಬೇಸಿಗೆಯಲ್ಲಿ ಬಸ್ಸಿನಲ್ಲಿ ಪ್ರಯಾಣವೇ ದುಸ್ತರ ಎಂಬಂತೆ ಅವರಿಗೆ ಭಾಸವಾಗುತ್ತಿದೆ. ಹೀಗಾಗಿ ದೂರದ ಊರಿನಿಂದ ಬರುವುದು ಲೇಸು. ಆದರೆ, ಸುಡು ಬಿಸಿಲಿನಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವುದು ತೀವ್ರ ಕಷ್ಟಕರ ಎನ್ನುತ್ತಾರೆ ಪ್ರಯಾಣಿಕರು. ತಂಪು ಪಾನೀಯಗಳಿಗೆ ಮೊರೆ:
- ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಟೋಪಿ, ಕೊಡೆ, ಕಾಟನ್ ಬಟ್ಟೆ ಬಳಸಿ
- ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ಸೊಳ್ಳೆ ಉದ್ಭವವಾಗದಂತೆ ನೋಡಿಕೊಳ್ಳಿ.