ಜೇಸಿ ಸಂಸ್ಥೆ ಸದಸ್ಯರಾದರೆ ಯುವಕರಲ್ಲಿ ವೈಯ್ಯಕ್ತಿಕ ಬೆಳವಣಿಗೆ

KannadaprabhaNewsNetwork |  
Published : Sep 25, 2024, 12:55 AM IST
ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಆಶಾ ಕಾರ್ಯಕರ್ತೆಯರಾದ ಸರೋಜ,ಸುಜಿ, ಆಶಾ ಮೇಲ್ವೀಚಾರಕಿ ಪೂರ್ಣಾವತಿ, ಸರ್ಕಾರಿ ಆಸ್ಪತ್ರೆಯಯ ಕೆ.ನಾಗರಾಜ ಅವರ ಪ್ರಾಮಾಣಿಕ ಸೇವೆ ಗುರುತಿಸಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜೇಸಿ ಸಂಸ್ಥೆ ಸದಸ್ಯರಾದರೆ ಯುವಕರಲ್ಲಿ ವೈಯ್ಯಕ್ತಿಕ ಬೆಳವಣಿಗೆ, ನಾಯಕತ್ವ ಗುಣ ಬೆಳೆಯಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಜೇಸಿ ಸಂಸ್ಥೆ ಸದಸ್ಯರಾದರೆ ಯುವಕರಲ್ಲಿ ವೈಯ್ಯಕ್ತಿಕ ಬೆಳವಣಿಗೆ, ನಾಯಕತ್ವ ಗುಣ ಬೆಳೆಯಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ತಿಳಿಸಿದರು.

ಸೋಮವಾರ ಕೃಷಿ ಭವನದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ 35 ನೇ ಜೇಸಿ ಸಪ್ತಾಹ - 2024 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. 1ವಾರದ ಜೇಸಿ ಸಪ್ತಾಹದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳು ವಂತೆ ಆಟೋಟ ಸ್ಪರ್ಧೆ ನಡೆಯುತ್ತಿದೆ. ಶಾಲಾ, ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ಜೇಸಿ ಸಂಸ್ಥೆ ಪದಾಧಿಕಾರಿಗಳ ಸಂಬಂಧ ವೃದ್ಧಿಸಲಿದೆ ಎಂದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಎಚ್‌.ಆರ್.ದಿನೇಶ್‌ ಉದ್ಘಾಟನೆ ನೆರವೇರಿಸಿ ಮಾತನಾಡಿ, ಜೇಸಿ ಸಪ್ತಾಹ ಎಂದರೆ ಹಬ್ಬದ ವಾತಾವರಣ ಸೃಷ್ಠಿಯಾಗುತ್ತದೆ. ಸೆಪ್ಟಂಬರ್‌ ತಿಂಗಳಲ್ಲಿ ದೇಶದ ಎಲ್ಲಾ ಕಡೆ ಜೇಸಿ ಸಪ್ತಾಹ ನಡೆಯಲಿದೆ. 18 ವರ್ಷ ತುಂಬಿದ ಯುವಕರು ಜೇಸಿ ಸಂಸ್ಥೆ ಸದಸ್ಯರಾಗಬಹುದು. ಜೇಸಿ ಸೇರಿದ ಯುವಕರಲ್ಲಿ ವ್ಯಕ್ತಿತ್ವ ವಿಕಸನ ಆಗಲಿದೆ. ಜೇಸಿಯಿಂದ ಕಲಿಯುವುದು ಬಹಳ ಇದೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಮುಂದಿನ 1 ವಾರದಲ್ಲಿ ವಿಭಿನ್ನ ರೀತಿ ಕಾರ್ಯಕ್ರಮಗಳು ನಡೆಯಲಿದೆ. ಬಿಸಿಲು,ಮಳೆಯಲ್ಲೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರನ್ನು ಇಂದು ಸನ್ಮಾನಿಸಿದ್ದೇವೆ. 7 ದಿನಗಳ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅತಿಥಿಯಾಗಿದ್ದ ಜೇಸಿ ವಲಯ ಅಧಿಕಾರಿ ಚರಣರಾಜ್‌ ಮಾತನಾಡಿ, ನರಸಿಂಹರಾಜಪುರ ಜೇಸಿ ಸಂಸ್ಥೆಗೆ 35 ವರ್ಷ ತುಂಬಿದೆ. ಎಚ್‌.ಆರ್‌.ದಿನೇಶ್‌ ಸ್ಥಾಪಕ ಅಧ್ಯಕ್ಷರಾಗಿದ್ದರು. ಜೇಸಿ ಸಂಸ್ಥೆ ನೀಡುವ ತರಬೇತಿಯಿಂದ ನಮ್ಮ ಬದುಕೇ ಬದಲಾಗಲಿದೆ. ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡುವ ಆಶಾ ಕಾರ್ಯಕರ್ತೆಯರು, ಪೊಲೀಸರು, ರೈತರನ್ನು ಗುರುತಿಸ ಬೇಕಾಗಿದೆ ಎಂದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಕೆ. ಗಂಗಾಧರ್‌ ಮಾತನಾಡಿ, ಜೇಸಿ ಪೂರ್ವಾಧ್ಯಕ್ಷರ ಸಹಕಾರದಿಂದ ಜೇಸಿ ಸಂಸ್ಥೆ ಬೆಳವಣಿಗೆ ಹೊಂದಿದೆ. ಜೇಸಿ ಸಂಸ್ಥೆ ಒಂದು ಕುಟುಂಬ ಇದ್ದಂತೆ. ಜೇಸಿ ಅಧ್ಯಕ್ಷರಾದವರು ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ರೂಪಿಸುತ್ತಾರೆ ಎಂದರು.

ಜೇಸಿ ಸಪ್ತಾಹದ ಪ್ರಧಾನ ನಿರ್ದೇಶಕ ಮಿಥುನ್‌ ಗೌಡ 7 ದಿನಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜೇಸಿ ಕಾರ್ಯದರ್ಶಿ ಕೆ.ಎಂ.ವಿನುತ್‌ ಇದ್ದರು. ಇದೇ ಸಂದರ್ಭದಲ್ಲಿ ಜೇಸಿ ಸಂಸ್ಥೆಯಿಂದ ಕೆ.ಕಣಬೂರು ಆಶಾ ಕಾರ್ಯಕರ್ತೆ ಸರೋಜ, ಮುತ್ತಿನಕೊಪ್ಪ ಆಶಾ ಕಾರ್ಯಕರ್ತೆ ಸುಜಿ, ಆಶಾ ಮೇಲ್ವಿಚಾರಕಿ ಪೂರ್ಣಾವತಿ, ಸರ್ಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸೆ ವಿಭಾಗದ ಕೊಠಡಿ ಸಹಾಯಕ ಕೆ.ನಾಗರಾಜ್‌ರನ್ನು ಸನ್ಮಾನಿಸಲಾಯಿತು. ಪವನಕರ್ ಜೇಸಿ ವಾಣಿ ವಾಚಿಸಿದರು. ನಂತರ ಆಶಾ ಕಾರ್ಯಕರ್ತೆಯರಿಗೆ ವಿವಿಧ ಸ್ಫರ್ಧೆ ನಡೆಯಿತು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ