ಮರ ಬೆಳೆಸಿ ಪ್ರಕೃತಿ ಸಮತೋಲನ ಕಾಪಾಡಿ

KannadaprabhaNewsNetwork |  
Published : Jun 08, 2026, 03:30 AM IST
ಪೋಟೊ7ಕೆಎಸಟಿ5: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಲೆಯ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ವಿಷಗಾಳಿ ನುಂಗಿ ಶುದ್ಧ ಗಾಳಿ ನೀಡುವ ಗಿಡ ಮರಗಳನ್ನು ನಾವು ಬೆಳೆಸದಿದ್ದರೆ ನಮಗೆ ಜೀವಿಸುವುದು ಕಷ್ಟ ಸಾಧ್ಯವಾಗಲಿದೆ.

ಕುಷ್ಟಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರ ನೆಟ್ಟು ಬೆಳೆಸುವ ಮೂಲಕ ಪ್ರಕೃತಿಯ ಸಮತೋಲನ ಕಾಪಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೋಟಿಹಾಳ ವಲಯ ಮೇಲ್ವಿಚಾರಕ ಎಸ್ ಶರಣಪ್ಪ ಹೇಳಿದರು.

ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಷಗಾಳಿ ನುಂಗಿ ಶುದ್ಧ ಗಾಳಿ ನೀಡುವ ಗಿಡ ಮರಗಳನ್ನು ನಾವು ಬೆಳೆಸದಿದ್ದರೆ ನಮಗೆ ಜೀವಿಸುವುದು ಕಷ್ಟ ಸಾಧ್ಯವಾಗಲಿದೆ. ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು, ಹಸಿರು ವಾತಾವರಣ ಸೃಷ್ಟಿ ಮಾಡಲು ನಾವೆಲ್ಲರೂ ಕಂಕಣಬದ್ಧರಾಗಿ, ಇದೊಂದು ಯುದ್ಧೋಪಾದಿಯಂತೆ ದೇಶ ಸೇವೆ ಎಂದು ಭಾವಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ಬಸವರಾಜ ಬಾಗಲಿ ಮಾತನಾಡಿ, ಪರಿಸರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಶಾಲೆ, ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ ನಿಡಶೇಸಿ ಮಾತನಾಡಿದರು.

ಸಂಸ್ಥೆಯಿಂದ ನೀಡಿದ ಸಸಿಗಳನ್ನು ಶಾಲಾ ಮೈದಾನದಲ್ಲಿ ನೆಟ್ಟು ಬೆಳೆಸಲು ಮಕ್ಕಳಿಗೆ ಉಸ್ತುವಾರಿ ನೀಡಿದರು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ್, ಶಶಿಧರ ಗೊರಬಾಳ, ಸಿದ್ದಪ್ಪ ಚಲವಾದಿ, ಸಾವಿತ್ರಿ ತಳವಗೇರಿ, ನರಸಿಂಹದಾಸ್ ತೋಟದ, ಶ್ರೀಧರ ವಂಕಲಕುಂಟಿ,ನಿರುಪಾದೆಪ್ಪ, ಶಿಕ್ಷಕ ಸಂತೋಷ ನಾಗಲೋಟಿ, ಹಂಪಯ್ಯ ಜಂಬಲದಿನ್ನಿ, ಕಳಕಮಲ್ಲೇಶ್ ಭೋಗಿ, ಗ್ರಂಥಪಾಲಕಿ ಅಕ್ಕಮಹಾದೇವಿ ತೋಟದ ಇದ್ದರು.

ಶಿಕ್ಷಕ ಪ್ರಸನ್ನ ಕುಮಾರ್ ನಿರ್ವಹಿಸಿದರು. ವಿಜಯಕುಮಾರ ಬಿರಾದಾರ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಸಲಕರಣೆಗಳ ಹಸ್ತಾಂತರ
ಘನತ್ಯಾಜ್ಯ 2026ರ ನಿಯಮ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ