ಪಿಎಲ್ ಡಿ ಬ್ಯಾಂಕ್ ಚುನಾವಣೆ: 14 ಕ್ಷೇತ್ರಗಳಿಗೆ 49 ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Feb 01, 2025, 12:02 AM IST
31ಕೆಎಂಎನ್ ಡಿ11 | Kannada Prabha

ಸಾರಾಂಶ

ಪಿಎಲ್‌ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.8ರಂದು ಚುನಾವಣೆ ನಿಗದಿಯಾಗಿದೆ. ಬ್ಯಾಂಕ್ ನಲ್ಲಿ 14 ಕ್ಷೇತ್ರಗಳ ಪೈಕಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ-1 , ಪರಿಶಿಷ್ಟ ಪಂಗಡ-1 , ಮಹಿಳಾ ಕ್ಷೇತ್ರ-2 , ಹಿಂದುಳಿದ ವರ್ಗ ಎ -1, ಹಿಂದುಳಿದ ವರ್ಗ ಬಿ- 1, ಮೀಸಲು ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್ ಡಿ)ಬ್ಯಾಂಕ್ ನ ಆಡಳಿತ ಮಂಡಳಿಯ 14 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಒಟ್ಟು 49 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಿಎಲ್‌ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.8ರಂದು ಚುನಾವಣೆ ನಿಗದಿಯಾಗಿದೆ. ಬ್ಯಾಂಕ್ ನಲ್ಲಿ 14 ಕ್ಷೇತ್ರಗಳ ಪೈಕಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ-1 , ಪರಿಶಿಷ್ಟ ಪಂಗಡ-1 , ಮಹಿಳಾ ಕ್ಷೇತ್ರ-2 , ಹಿಂದುಳಿದ ವರ್ಗ ಎ -1, ಹಿಂದುಳಿದ ವರ್ಗ ಬಿ- 1, ಮೀಸಲು ನಿಗದಿಯಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆ ದಿನವಾದ ಹಿನ್ನೆಲೆಯಲ್ಲಿ ಆಕಾಂಕ್ಷಿತ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು

ಸಾಲಗಾರ ಸಾಮಾನ್ಯ ಕ್ಷೇತ್ರಗಳಾದ ಜಕ್ಕನಹಳ್ಳಿ ಕ್ಷೇತ್ರದಿಂದ; ಕೆ.ಎನ್.ಕೃಷ್ಣೇಗೌಡ, ಕೆ.ಆರ್.ಸುರೇಶ್, ಸಿಂಗೇಗೌಡ, ಅಶ್ವತ್ಥ್ ಕುಮಾರೇಗೌಡ, ಕೆ.ಎನ್.ದಿನೇಶ್, ಕೆ.ಎಚ್.ಪುಟ್ಟಸ್ವಾಮೀಗೌಡ, ಗುರುರಾಜು ಕೆ.ಎಂ., ಹಳೇಬೀಡು ಕ್ಷೇತ್ರದಿಂದ: ಎಚ್.ಎನ್.ದಯಾನಂದ, ಎಚ್.ಕೆ.ಕುಳ್ಳೇಗೌಡ, ಚಿಕ್ಕಾಡೆ ಕ್ಷೇತ್ರ: ಎನ್.ಮುರುಳಿ, ಟಿ.ಎನ್.ಧರ್ಮ, ಕೆ.ಬೆಟ್ಟಹಳ್ಳಿ ಕ್ಷೇತ್ರ: ಬಿ.ನರೇಂದ್ರ ಬಾಬು, ಕೆ.ಎಂ.ನಾಗರಾಜು, ದಿನೇಶ್, ಬನ್ನಂಗಾಡಿ ಕ್ಷೇತ್ರ: ಡಿ.ಎನ್.ಸೋಮಶೇಖರ್, ಗಂಗಾಧರ್ ಬಿ., ನಂಜೇಗೌಡ.ಜಿ.ಡಿ., ಜಗದೀಶ್ ಡಿ.ಸಿ., ಚಿನಕುರಳಿ ಕ್ಷೇತ್ರ: ಸಿ.ಪ್ರಕಾಶ್, ಸಿ.ಎಂ.ಚಂದ್ರಶೇಖರ್, ನಾರಾಯಣಪುರ ಕ್ಷೇತ್ರ: ಕೆ.ಕುಮಾರ್, ವೆಂಕಟೇಶ್, ನಾಗೇಗೌಡ, ಹಿಂದುಳಿದ ವರ್ಗ ಎ ಮಾಣಿಕ್ಯಹಳ್ಳಿ ಕ್ಷೇತ್ರ: ಗಿರೀಶ್.ಟಿ., ನಾಗಶೆಟ್ಟಿ, ಮಹಿಳಾ ಮೀಸಲು ಮಹದೇಶ್ವರಪುರ ಕ್ಷೇತ್ರ: ಗೌರಮ್ಮ, ಎಸ್.ಯೋಗಲಕ್ಷ್ಮೀ , ಹಿಂದುಳಿದ ವರ್ಗ ಬಿ ಹಿರೇಮರಳಿ ಕ್ಷೇತ್ರ: ಚಲುವೇಗೌಡ(ಬಕೋಡಿ), ಸುನೀಲ್ ಕುಮಾರ್ ಬಿ., ಮಧು ಎಚ್.ಇ.,ಮಹಿಳಾ ಮೀಸಲು ಪಾಂಡವಪುರ ಕ್ಷೇತ್ರ: ಎಚ್.ಎಂ.ಆಶಾಲತ, ರತ್ನಮ್ಮ., ಪರಿಶಿಷ್ಟ ಪಂಗಡ ಮೀಸಲು ಹರವು ಕ್ಷೇತ್ರ: ಸುನಂದ, ಚಂದ್ರ, ಪರಿಶಿಷ್ಟ ಜಾತಿ ಮೀಸಲು ಸುಂಕಾತೊಣ್ಣೂರು ಕ್ಷೇತ್ರ: ನೀಲಯ್ಯ ಬಿ.ಎಸ್., ಚಿಕ್ಕಬೋರಯ್ಯ, ಶಂಕರಯ್ಯ, ಶಿವಣ್ಣ,

ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ: ಯಶವಂತ್ ಕುಮಾರ್, ಜಗದೀಶ್, ಅವಿನಾಶ್ ಡಿ.ಎಸ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಲೋಕೇಶಮೂರ್ತಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!