ಕನ್ನಡಪ್ರಭ ವಾರ್ತೆ ಹೊನ್ನಾಳಿ
ಚುನಾವಣೆ ಪ್ರಚಾರ, ಸಭೆ ಸಮಾರಂಭ ಹಾಗೂ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಇನ್ಸ್ಪೆಕ್ಟರ್ ಮುದ್ದುರಾಜು ತಿಳಿಸಿದರು.
ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ, ಕುಳಗಟ್ಟೆ, ಹೊಳೆ ಹರಳಹಳ್ಳಿಯಲ್ಲಿ ಚೆಕ್ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆ ರಸ್ತೆಗಳಲ್ಲಿ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಚೆಕ್ಪೋಸ್ಟ್ ತಪ್ಪಿಸಿ, ವಾಮಮಾರ್ಗದಲ್ಲಿ ಹಣ ಅಥವಾ ಮದ್ಯವನ್ನು ಸಾಗಿಸುವವರ ಬಗ್ಗೆಯೂ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ಅನಗತ್ಯವಾಗಿ ಸಾರ್ವಜನಿಕ ಶಾಂತಿಭಂಗ ಮಾಡುವವರ ಬಗ್ಗೆಯೂ ಪಟ್ಟಿ ಮಾಡಿ, ಅವರನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.
ಪಿಎಸ್ಐಗಳಾದ ನವೀನ್, ಶಾಂತಮ್ಮ, ನಿರ್ಮಲ, ಪೊಲಿಸ್ ಸಿಬ್ಬಂದಿ ಜಗದೀಶ್, ಬಸವರಾಜು, ಮಲ್ಲೇಶ್, ಸುನಿಲ್ ಹಾಗೂ ಇತರರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.- - - -23ಎಚ್ಎಲ್ಐ1:
ಲೋಕಸಭಾ ಚುನಾವಣೆ ಹಿನ್ನೆಲೆ ಹೊನ್ನಾಳಿ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲಾಯಿತು.