ಕನ್ನಡಪ್ರಭ ವಾರ್ತೆ ಮಾಲೂರು
ತಿರುಕನ ಕನಸು ಕಾಣಬೇಡಿ
ನ್ಯಾಯಾಲಯದ ಆದೇಶದ ಮೇಲೆ ಗೌರವವಿದೆ, ಉಚ್ಚ ನ್ಯಾಯಾಲಯ ನ್ಯಾಯಾಧೀಶರು ಆದೇಶ ನೀಡಿ ಮೇಲ್ಮನವಿಗೆ ಅವಕಾಶ ಕಲ್ಪಿಸಿದ್ದಾರೆ, ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದ ಶಾಸಕರು ತಾಲೂಕಿನ ಅಭಿವೃದ್ಧಿಗೆ ನ್ಯಾಯಾಲಯದ ಆದೇಶವನ್ನು ತಳುಕು ಹಾಕುವುದು ಬೇಡ ತಿರುಕನ ಕನಸು ಕಾಣುವುದು ಬೇಡ ಮರುಮತ ಎಣಿಕೆಯಾದರೆ ಮೂರನೇ ಬಾರಿಗೆ ಗೆಲುವು ನಮ್ಮದೆ ಇದೆ ಎಂದರು.ತೀರ್ಫು ತಮ್ಮ ವಿರುದ್ಧ ಬರಲಿದೆ ಎಂದು ಗೋತ್ತಾಗಿ ಬಸ್ ನಿಲ್ದಾಣವನ್ನು ತುರ್ತಾಗಿ ತೆರವು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಸಿದ ಶಾಸಕರು, ನಾನು ಆ ಭ್ರಮೆಯಲ್ಲಿಲ್ಲ. ಮಂಜುನಾಥ ಗೌಡ ಆಕಸ್ಮಿಕವಾಗಿ ಹೊಸಕೋಟೆ ತಾಲೂಕಿನಿಂದ ಮಾಲೂರು ತಾಲೂಕಿನ ರಾಜಕಾರಣಕ್ಕೆ ಬಂದಿದ್ದಾರೆ, ನಾನು ಹಾಗೆ ಬಂದಿಲ್ಲ ಕೆಳ ಹಂತದಿಂದ ನನ್ನ ತಾಲೂಕಿನ ಜನತೆ ನನ್ನನ್ನು ರಾಜಕೀಯವಾಗಿ ಆಶೀರ್ವಾದ ಮಾಡಿದ್ದಾರೆ, ಅಭಿವೃದ್ಧಿಗಾಗಿ ಏನು ಮಾಡಬೇಕು ಅದನ್ನೇ ಮಾಡುತ್ತೇನೆ ಎಂದರು.
ಬಸ್ ನಿಲ್ದಾಣ ನಿರ್ಮಾಣ ನಿನ್ನೆ ಮೊನ್ನೆ ಕೈಗೊಂಡ ತೀರ್ಮಾನವಲ್ಲ. ನಗರಸಭೆಯಲ್ಲಿ ಒಂದು ವರ್ಷದಿಂದ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರ. ಹಣ ಎಲ್ಲಿಂದ ತರಬೇಕು, ಅಂಗಡಿಗಳ ತೆರವಿಗೆ ಯಾವ ಕ್ರಮ ವಹಿಸಬೇಕು, ಬಸ್ ನಿಲ್ದಾಣವನ್ನು ೨೧.೫ ಕೋಟಿ ರು.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಹಳೆಯ ಬಸ್ ನಿಲ್ದಾಣ ಕಟ್ಟಡಗಳು ತೆರವುಗೊಳಿಸಲಾಗುತ್ತಿದೆ. ಅಂಗಡಿಗಳ ವ್ಯಾಪಾರಸ್ಥರು ಸಹಕಾರ ನೀಡಿ ತೆರವು ಮಾಡಿದ್ದಾರೆ, ಬಸ್ ನಿಲ್ದಾಣದ ಜೊತೆಗೆ ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್ ವ್ಯವಸ್ಥೆಗೂ ಸಹ ಯೋಜನೆ ಸಿದ್ಧವಾಗಿದೆ ಎಂದರು.ಅಕ್ಟೋಬರ್ ೩೧ ರಂದು ಮುಖ್ಯಮಂತ್ರಿಗಳು ತಾಲೂಕಿಗೆ ಆಗಮಿಸಲಿದ್ದು ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಂದುಡುವುದು ಬೇಡ ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ, ಸುಮಾರು ೨೫೦೦ ಕೋಟಿ ರೂಗಳ ವೆಚ್ಚದ ಮೇಲ್ಸೇತುವೆ ನಾಲ್ಕು ಪಥದ ರಸ್ತೆ ಬಸ್ ನಿಲ್ದಾಣ, ಕೆರೆ ಅಭಿವೃದ್ಧಿ, ವಾಲ್ಮೀಕಿ ಭವನ, ವಿದ್ಯಾರ್ಥಿ ನಿಲಯ, ಅಂಬೇಡ್ಕರ್ ವಸತಿ ಶಾಲೆ, ಸೇರಿದಂತೆ ಹಲವು ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದರು.ಗ್ರಾಮೀಣರಿಗೆ ನಿವೇಶನ:
.