ರಾ​ಜ್ಯ​ಶಾ​ಸ್ತ್ರ ಅ​ಧ್ಯ​ಯ​ನಕ್ಕೆ ಹೆ​ಚ್ಚಿನ ಪ್ರಾ​ಶಸ್ತ್ಯ ಅಗತ್ಯ: ಪ್ರೊ.​ಧ​ರ್ಮ

KannadaprabhaNewsNetwork |  
Published : Sep 24, 2024, 01:56 AM IST
ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಉ​ದ್ಘಾ​ಟನೆ ನೆರವೇರಿತು. | Kannada Prabha

ಸಾರಾಂಶ

ರಾ​ಜ್ಯ​ಶಾಸ್ತ್ರ ​ಅ​ಧ್ಯ​ಯ​ನ​ಕ್ಕೆ ಹೆ​ಚ್ಚಿನ ಪ್ರಾಶಸ್ತ್ಯ ನೀ​ಡುವ ಅಗತ್ಯವಿದೆ ಎಂದು ಮಂಗ​ಳೂರು ವಿವಿ ಕು​ಲ​ಪತಿ ಪ್ರೊ.​ಪಿ.​ಎ​ಲ್‌. ​ಧರ್ಮ ಹೇ​ಳಿದ್ದಾರೆ. ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಉ​ದ್ಘಾ​ಟನಾ ಸ​ಮಾ​ರಂಭದ ಅ​ಧ್ಯ​ಕ್ಷತೆ ವ​ಹಿಸಿ ಅ​ವರು ಮಾ​ತ​ನಾ​ಡಿ​ದರು.

ಕನ್ನಡಪ್ರಭ ವಾರ್ತೆ ಮಂಗ​ಳೂ​ರು

ರಾ​ಜ್ಯ​ಶಾಸ್ತ್ರ ​ಅ​ಧ್ಯ​ಯ​ನ​ಕ್ಕೆ ಹೆ​ಚ್ಚಿನ ಪ್ರಾಶಸ್ತ್ಯ ನೀ​ಡುವ ಅಗತ್ಯವಿದೆ ಎಂದು ಮಂಗ​ಳೂರು ವಿವಿ ಕು​ಲ​ಪತಿ ಪ್ರೊ.​ಪಿ.​ಎ​ಲ್‌. ​ಧರ್ಮ ಹೇ​ಳಿದ್ದಾರೆ.

ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಉ​ದ್ಘಾ​ಟನಾ ಸ​ಮಾ​ರಂಭದ ಅ​ಧ್ಯ​ಕ್ಷತೆ ವ​ಹಿಸಿ ಅ​ವರು ಮಾ​ತ​ನಾ​ಡಿ​ದರು.

ಮಂಗ​ಳೂರು ವಿಶ್ವವಿ​ದ್ಯಾ​ನಿಲಯ ವ್ಯಾ​ಪ್ತಿಯ ಕಾ​ಲೇ​ಜು​ಗ​ಳಲ್ಲಿ ರಾ​ಜ್ಯ​ಶಾ​ಸ್ತ್ರ ವಿ​ಭಾ​ಗ​ವನ್ನು ಬೆ​ಳೆ​ಸುವ ನಿ​ಟ್ಟಿ​ನಲ್ಲಿ ಎಲ್ಲ ರೀ​ತಿಯ ಸ​ಹ​ಕಾರ ನೀ​ಡ​ಲಾ​ಗು​ವುದು ಎಂದ ಅವರು, ವಿವಿಯಲ್ಲಿ ಅ​ನೇ​ಕ ಸ​ವಾ​ಲು​ಗ​ಳಿವೆ. ಆ​ಡ​ಳಿ​ತಾ​ತ್ಮ​ಕ​ವಾಗಿ ಸ​ರಿ​ಪ​ಡಿ​ಸ​ಬ​ಹು​ದಾದ ಎ​ಲ್ಲ ಸ​ಮ​ಸ್ಯೆ​ಗ​ಳಿಗೆ ಪ​ರಿ​ಹಾರ ಕಂಡು​ಕೊ​ಳ್ಳು​ವು​ದಕ್ಕೆ ಮೊ​ದಲ ಆದ್ಯ​ತೆ ನೀ​ಡು​ತ್ತೇನೆ. ಅ​ನೇಕ ಕಾ​ಲೇ​ಜು​ಗ​ಳಲ್ಲಿ ಮುಚ್ಚಿ ಹೋ​ಗಿ​ರುವ ಕಲಾ ವಿ​ಭಾ​ಗ​ವನ್ನು ಮರು ಆ​ರಂಭಿ​ಸಲು ಪ್ರ​ಯತ್ನಪ​ಡು​ತ್ತೇ​ನೆ ಎಂದು ಭರವಸೆ ನೀಡಿದರು.

1.80 ಲ​ಕ್ಷಕ್ಕೂ ಅ​ಧಿಕ ಮಂದಿ ವಿವಿ ವ್ಯಾಪ್ತಿಯ ಕಾ​ಲೇ​ಜು​ಗ​ಳಲ್ಲಿ ಅ​ಧ್ಯ​ಯನ ಮಾ​ಡು​ತ್ತಿದ್ದು, ಎ​ಲ್ಲರ ಹಿ​ತಾ​ಸ​ಕ್ತಿ​ಯನ್ನು ಗ​ಮ​ನ​ದ​ಲ್ಲಿ​ಟ್ಟು​ಕೊಂಡು, ಸ​ರ್ಕಾರ ಮ​ಟ್ಟ​ದಲ್ಲಿ ಆ​ಗ​ಬೇ​ಕಿ​ರುವ ಕೆ​ಲಸ ಕಾ​ರ್ಯ​ಗ​ಳಿಗೆ ಪ್ರ​ಯ​ತ್ನ​ಪಡುವುದಾಗಿ ತಿಳಿಸಿದರು.

ಮಂಗ​ಳೂರು ವಿ​ವಿ ರಾ​ಜ್ಯ​ಶಾಸ್ತ್ರ ವಿಭಾ​ಗದ ನಿ​ವೃತ್ತ ಪ್ರಾ​ಧ್ಯಾ​ಪಕ ಪ್ರೊ.ವ​ಲೇ​ರಿ​ಯನ್‌ ರೋ​ಡ್ರಿ​ಗಸ್‌ ನೂ​ತನ ಸಂಘ​ವನ್ನು ಉ​ದ್ಘಾ​ಟಿಸಿ, ರಾ​ಜ್ಯ​ಶಾಸ್ತ್ರ ವಿ​ಭಾ​ಗದಲ್ಲಿ ಅ​ಧ್ಯ​ಯನ ಮಾ​ಡಿದ ವಿ​ದ್ಯಾ​ರ್ಥಿ​ಗ​ಳಿಗೆ ಕೇ​ವಲ ಬೋ​ಧನಾ ವೃತ್ತಿ ಮಾ​ತ್ರ​ವ​ಲ್ಲದೆ, ಅ​ನೇಕ ಅ​ವ​ಕಾ​ಶ​ಗಳಿ​ವೆ. ಅ​ವು​ಗ​ಳನ್ನು ಸ​ಮ​ರ್ಪಕ ರೀ​ತಿ​ಯಲ್ಲಿ ಬ​ಳಕೆ ಮಾ​ಡಿ​ಕೊ​ಳ್ಳ​ಬೇಕು ಎಂದರು.

ನಿ​ವೃತ್ತ ಪ್ರಾ​ಧ್ಯಾ​ಪ​ಕ​ರಾದ ಪ್ರೊ.ಜೆ.​ಎ​ಸ್‌. ​ಸ​ದಾ​ನಂದ, ​ಪ್ರೊ. ರಾ​ಜಾ​ರಾಮ ತೋ​ಳ್ಪಾಡಿ, ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಮು​ಖ್ಯ​ಸ್ಥ​ ಪ್ರೊ. ​ಜ​ಯ​ರಾಮ್‌ ಅ​ಮೀನ್‌ ಮಾ​ತ​ನಾ​ಡಿ​ದರು. ಸಂಘದ ಖ​ಜಾಂಜಿ ಪ್ರ​ವೀಣ್‌ ಬಂಗೇರ ಇದ್ದರು.

ಕುಲಪತಿ ಪ್ರೊ.​ಪಿ.​ಎ​ಲ್‌. ​ಧ​ರ್ಮ, ರಾ​ಜ್ಯ​ಶಾಸ್ತ್ರ ವಿಭಾ​ಗದಲ್ಲಿ ಪ್ರಾ​ಧ್ಯಾ​ಪ​ಕ​ರಾಗಿ ಸೇವೆ ಸ​ಲ್ಲಿ​ಸಿ ನಿ​ವೃತ್ತರಾ​ದ ಪ್ರೊ.​ವ​ಲೇ​ರಿ​ಯನ್‌ ರೋ​ಡ್ರಿಗ​ಸ್‌, ಪ್ರೊ.ಜೆ.​ಎ​ಸ್‌.​ ಸ​ದಾ​ನಂದ, ​ಪ್ರೊ.ರಾ​ಜಾ​ರಾಮ ತೋ​ಳ್ಪಾಡಿ, ಹಳೆ ವಿ​ದ್ಯಾರ್ಥಿ ಸಂಘದ ಅ​ಧ್ಯಕ್ಷ ಝೇ​ವಿ​ಯರ್‌ ಡಿ​ಸೋ​ಜ, ವಿ​ಭಾ​ಗದ ಕ​ಚೇ​ರಿ​ಯಲ್ಲಿ ಕಾರ್ಯ ನಿರ್ವಹಿಸಿ ನಿ​ವೃ​ತ್ತ​ರಾದ ಮಂಜು​ನಾಥ ಹಾಗೂ ಚಂದ್ರ​ಶೇ​ಖರ್‌ ಅ​ವ​ರನ್ನು ಸ​ನ್ಮಾ​ನಿ​ಸ​ಲಾ​ಯಿ​ತು.

ಮಂಗ​ಳೂರು ವಿವಿ ರಾ​ಜ್ಯ​ಶಾಸ್ತ್ರ ವಿ​ಭಾ​ಗದ ಹಳೆ ವಿ​ದ್ಯಾರ್ಥಿ ಸಂಘದ ಅ​ಧ್ಯಕ್ಷ ಝೇ​ವಿ​ಯರ್‌ ಡಿ​ಸೋಜ ಪ್ರಾ​ಸ್ತಾ​ವಿ​ಕ​ವಾಗಿ ಮಾ​ತ​ನಾಡಿ, ಸ್ವಾ​ಗ​ತಿ​ಸಿ​ದರು. ಕಾ​ರ್ಯ​ದರ್ಶಿ ಪ್ರೊ. ​ದ​ಯಾ​ನಂದ್‌ ನಾಯ್ಕ್‌ ವಂದಿ​ಸಿ​ದರು. ಕಾ​ರ್ಯ​ಕಾರಿ ಸ​ಮಿತಿ ಸ​ದ​ಸ್ಯ​ರಾದ ಪ​ತ್ರ​ಕರ್ತ ಆ​ರ್‌.​ಸಿ.​ಭಟ್‌ ಹಾಗೂ ಡಾ.ರೋಸ್‌ ವೀರಾ ಡಿ​ಸೋಜ ನಿ​ರೂ​ಪಿ​ಸಿ​ದ​ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ