ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಸಲ್ಲದು: ಹರೀಶ್ ಪೂಂಜ

KannadaprabhaNewsNetwork |  
Published : Oct 20, 2025, 01:04 AM IST
ಬಳಂಜ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ | Kannada Prabha

ಸಾರಾಂಶ

ಬಳಂಜ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಅನಿಲ್ ನಾಯ್ಗ ಸ್ಮರಣಾರ್ಥವಾಗಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಸ್ವಾಗತ ಗೋಪುರ ನವೀಕರಣ, ನೆಲಹಾಸು ಅಳವಡಿಕೆ ಕಾಮಗಾರಿಗಳನ್ನು ಶಾಸಕ ಹರಿಶ್‌ ಪೂಂಜ ಉದ್ಘಾಟಿಸಿದರು.

ಬಳಂಜ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಸಿಗಬೇಕು ಮತ್ತು ಬಳಂಜ ಶಾಲೆಯನ್ನು ಬೆಳಗಿಸಬೇಕು ಎಂಬ ಬಳಂಜ ಶಾಲಾ ಹಳೆವಿದ್ಯಾರ್ಥಿಗಳ, ಊರವರ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಬರಬಾರದು ಅದಕ್ಕೆ ನಾನು ವಿರೋಧವಿದ್ದೇನೆ. ಸರ್ಕಾರದ ಅನುದಾನಕ್ಕೆ ಕಾಯುವುದಕ್ಕಿಂತ ಹಳೆವಿದ್ಯಾರ್ಥಿಗಳು, ಊರವರರು ಶಾಲೆಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಶಾಲೆ ಬೆಳಗಲು ಸಾಧ್ಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಭಾನುವಾರ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಅನಿಲ್ ನಾಯ್ಗ ಸ್ಮರಣಾರ್ಥವಾಗಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಸ್ವಾಗತ ಗೋಪುರ ನವೀಕರಣ, ನೆಲಹಾಸು ಅಳವಡಿಕೆ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.ಶಾಲೆಯ ಹೈಸ್ಕೂಲ್ ಕಟ್ಟಡಕ್ಕೆ ಅನುದಾನ ನೀಡಲಾಗುವುದಲ್ಲದೆ ಮೊದಲನೆಯ ಹಂತವಾಗಿ 10 ಲಕ್ಷ ರು. ವೆಚ್ಚದಲ್ಲಿ ಮಕ್ಕಳ ತಂಗುದಾಣ ಮತ್ತು ಶಾಲಾ ಮುಂಭಾಗದ ಇಂಟರ್ ಲಾಕ್ ಅಳವಡಿಸಿಕೊಡಲಾಗುವುದು. ಶಾಲಾ ಹಳೆವಿದ್ಯಾರ್ಥಿ ಅಶ್ವಥ್ ಹೆಗ್ಡೆಯವರು ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಶಾಲಾ ನವೀಕರಣ ಮಾಡಿಸಿದ್ದು, ಇವರ ಶಾಲೆಯ ಮೇಲಿನ ಪ್ರೀತಿ ಇತರರಿಗೆ ಮಾದರಿ ಎಂದರು.

ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಎ. ಕುಮಾರ್ ಹೆಗ್ಡೆ ಮಾತನಾಡಿದರು.

ಅಶ್ವಥ್ ಹೆಗ್ಡೆ ಫೌಂಡೇಶನ್ ಅಧ್ಯಕ್ಷ ಅಶ್ವಥ್ ಹೆಗ್ಡೆ ಕುಳೆಂಜಿರೋಡಿ ಗುತ್ತು ಅಧ್ಯಕ್ಷತೆ ವಹಿಸಿ, ಶಾಲೆಯ ಅಮೃತ ಮಹೋತ್ಸವವನ್ನು ಮಾದರಿ ಕಾರ್ಯಕ್ರಮವಾಗಿ ಮಾಡೋಣ ಎಂದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅಶ್ವಥ್ ಹೆಗ್ಡೆಯವರ ಸೇವೆಯೊಂದಿಗೆ ನಾನು ಕೈಜೋಡಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ್, ಯುವ ಉದ್ಯಮಿ ಪ್ರಶಾಂತ್ ಬೆಳ್ತಂಗಡಿ, ಪತ್ರಕರ್ತ ತುಕರಾಮ್, ಶಶಿಕಿರಣ್ ಅನಿಲ್ ನಾಯ್ಗ, ಅಮೃತ ಮಹೋತ್ಸವದ ಗೌರವ ಮಾರ್ಗದರ್ಶಕ ವಸಂತ ಸಾಲ್ಯಾನ್, ಅರುಣ್ ಹೆಗ್ಡೆ ಕುಳೆಂಜಿರೋಡಿ ಗುತ್ತು, ಅಮೃತ ಮಹೋತ್ಸವದ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಅಧ್ಯಕ್ಷ ಚಂದ್ರಶೇಖರ ಪಿ.ಕೆ., ಕಾರ್ಯಾಧ್ಯಕ್ಷ ಮನೋಹರ್ ಬಳಂಜ, ಉಪಾಧ್ಯಕ್ಷ ವಿನು ಬಳಂಜ, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರ ಶೀತಲ್ ಪಡಿವಾಳ್, ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಹರೀಶ್ ವೈ., ಉಮಾಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಸುಕೇಶ್ ಪೂಜಾರಿ ಹಾನಿಂಜ, ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷೆ ಚೇತನಾ ಜೈನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಉಪಸ್ಥಿತರಿದ್ದರು.

ಹರೀಶ್ ವೈ. ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ನಾದಮಣಿನಾಲ್ಕೂರು ಮತ್ತು ಅಕ್ಷತಾ ಕುಡ್ಲ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಳೆವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ