ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಸೋಂಪುರ ಹೋಬಳಿಯ ಬರಗೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024- 25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘವು ತಾಲೂಕಿನಲ್ಲೇ ಸುಸಜ್ಜಿತ ಕಟ್ಟಡ ಹೊಂದಿದ್ದು, ಶಾಸಕರು 10 ಲಕ್ಷ ರು. ಅನುದಾನ ನೀಡಿದ್ದಾರೆ. ಸಂಸದವರು ಅನುದಾನ ನೀಡಲಿದ್ದು, ಸಂಘಕ್ಕೆ ಆದಾಯದ ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕದಾದ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಸದಸ್ಯರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದರು.ಸಿಇಒ ರೂಪಾ ಮಾತನಾಡಿ, ನಮ್ಮ ಸಂಘದಲ್ಲಿ 2931 ಸದಸ್ಯರಿದ್ದು, 12 ಕೋಟಿ ರು. ವ್ಯವಹಾರ ನಡೆಸಿದೆ, 5.56 ಲಕ್ಷ ರು. ಲಾಭಾಂಶ ಪಡೆದಿದ್ದು, 3.14 ಕೋಟಿ ರು. ಬೆಳೆಸಾಲ ನೀಡಿದ್ದೇವೆ, ಸ್ವಂತ ಬಂಡವಾಳದಿಂದ 6.6 ಕೋಟಿ ರು. ಸಾಲ ನೀಡಿದ್ದೇವೆ. ಮುಂದಿನ ವರ್ಷದಿಂದ ಯೂರಿಯಾವನ್ನು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಸಮಸ್ಯೆಗಳ ಸುರಿಮಳೆ:
ನಂತರ ನಿತೀನ್ ಮಾತನಾಡಿ, ಕುಡಿಯುವ ನೀರಿನ ಘಟಕದಲ್ಲಿ ನೀರಿನ ವೆಚ್ಚವನ್ನು 4 ರುಪಾಯಿಗೆ ಇಳಿಸಬೇಕು ಎಂದು ಕೇಳಿದಾಗ ಭಾರೀ ಗದ್ದಲ ಉಂಟಾಯಿತು. ಮಾತಿಗೆ ಮಾತು ಬೆಳೆದು, ಇಡೀ ಸಭೆ ಗೊಂದಲದ ಗೂಡಾಯಿತು.
ಸಂಘದ ಉಪಾಧ್ಯಕ್ಷೆ ರತ್ನಮ್ಮ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮಾಚನಹಳ್ಳಿ ಪಟ್ಟಾಭಿರಾಮಯ್ಯ(ಜಯಣ್ಣ), ಮಾಜಿ ಅಧ್ಯಕ್ಷರಾದ ಶಿವರಾಮಯ್ಯ, ಪುಟ್ಟಗಂಗಯ್ಯ, ನಿರ್ದೇಶಕರಾದ ಗಂಗರಾಜಯ್ಯ, ತಿಮ್ಮಪ್ಪ, ನಾರಾಯಣಸ್ವಾಮಿ, ಶಿವಣ್ಣ, ರವಿಕುಮಾರ್, ಭದ್ರಮ್ಮ, ಶಿವಮ್ಮ, ಸಿಇಒ ರೂಪಾ.ಕೆ.ಆರ್., ನಗದು ಲೆಕ್ಕಿಗ ಶ್ರೀನಿವಾಸಮೂರ್ತಿ, ಕಂಪ್ಯೂಟರ್ ಆಪರೇಟರ್ ರಮೇಶ್, ಸಿಬ್ಬಂದಿ , ಷೇರುದಾರರು, ಗ್ರಾಮಸ್ಥರು ಹಾಜರಿದ್ದರು.