ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಪಾನ್ ಸುಪಾರಿ ಬಜಾರ್ನಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿರುವ ಉತ್ಖನನದ ವೇಳೆಯಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಮಡಿಕೆ ಚೂರುಗಳು ಪತ್ತೆಯಾಗಿವೆ.
ಹಂಪಿಯಲ್ಲಿ ಕಳೆದ ಕೆಲ ವರ್ಷಗಳಿಂದ ಉತ್ಖನನ ನಡೆಸಲಾಗಿಲ್ಲ. ಈಗ ಮತ್ತೆ ಪುರಾತತ್ವ ಇಲಾಖೆ ಪಾನ್ ಸುಪಾರಿ ಬಜಾರ್ನಲ್ಲಿ ಉತ್ಖನನ ಕಾರ್ಯ ಕೈಗೆತ್ತಿಕೊಂಡಿದೆ. ಈ ವೇಳೆ ಮಡಿಕೆ ಚೂರುಗಳು ದೊರೆತಿವೆ.
ಹಂಪಿಯಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಈಗ ದೊರೆತಿರುವ ಮಡಿಕೆ ಚೂರುಗಳ ಬಗ್ಗೆ ಅಧ್ಯಯನ ನಡೆಸಲು ಪುರಾತತ್ವ ಇಲಾಖೆಗೆ ಸೂಚಿಸಲಾಗುವುದು. ತಜ್ಞರು ಹಾಗೂ ಇತಿಹಾಸಕಾರರು ಅಧ್ಯಯನ ನಡೆಸಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇನ್ನಷ್ಟು ಕಟ್ಟಿಕೊಡಲು ಉತ್ಖನನ ಕಾರ್ಯ ಸಹಕಾರಿ ಆಗಲಿದೆ ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.