ಕನ್ನಡಪ್ರಭ ವಾರ್ತೆ ಉಡುಪಿ
ಆದ್ಯ ಗಣಪತಿಯಾಗ, ಪಂಚವೀಂಶತಿ ಕಲಾಶಾರಾಧನೆ, ಪ್ರತಿಷ್ಠಾ ಪ್ರಧಾನ ಹೋಮಗಳೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು. ಗತಕಾಲದಲ್ಲಿ ಕ್ಷೇತ್ರ ರಚನೆಗೆ ಕಾರಣೀಭೂತರಾಗಿ ತಪಸ್ಸನ್ನು ಆಚರಿಸಿದ ಶ್ರೀ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಕಾಮಧೇನುವಿಗೆ ವಿಶೇಷ ಪೂಜೆಗಳು ವೇದಮೂರ್ತಿ ಹೇರೂರು ಆನಂದ ಭಟ್ ಅವರು ನೆರವೇರಿಸಿದರು.
ವೇ.ಮೂ. ವಾಮನ ಭಟ್ ಅವರ ಪ್ರಧಾನತ್ವದಲ್ಲಿ ನೆರವೇರಿದ ಮಹಾ ಚಂಡಿಕಾಯಾಗದಲ್ಲಿ ಶ್ರೀಯುತ ವೇ.ಮೂ. ಪೆರಡೂರು ದಿನೇಶ್ ಅಡಿಗ, ವೇದಮೂರ್ತಿ ಸೀತಾರಾಮ ಭಟ್, ಹೆರ್ಗ ಗಣೇಶ್ ಭಟ್, ನಾಗಶಯನ, ಸ್ವಸ್ತಿಕಾಚಾರ್ಯ ಸಹಕರಿಸಿದರು.ಮಹಾಚಂಡಿಕಾಯಿಯಾಗದಲ್ಲಿ ಬ್ರಾಹ್ಮಣ ಸುವಾಸಿನಿಯರು ಅಧಿಕ ಸಂಖ್ಯೆಯಲ್ಲಿ ಆರಾಧನೆ ಸ್ವೀಕರಿಸಿದರು. ವಿಶೇಷವಾದ ಶೃಂಗಾರವಾದ್ಯ, ನಾದಸ್ವರ ವಾದ್ಯ, ಕೊಂಬು ಕಹಳೆ, ಚಂಡೆ ವಾದನದೊಂದಿಗೆ ಶ್ರೀ ಪ್ರಸನ್ನಾಕ್ಷಿಯ ಪ್ರತಿಷ್ಠಾಪನೆ ನೆರವೇರಿತು.
ಕ್ಷೇತ್ರದಲ್ಲಿ ದುರ್ಗಾ ಆದಿಶಕ್ತಿಯನ್ನು ವಿಶೇಷವಾಗಿ ಶ್ರೀ ಆನಂದ್ ಬಾಯಿರಿ ಅಲಂಕರಿಸಿದರು ಅನಿಶಾಚಾರ್ಯ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ನೆರವೇರಿದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ