ಹಲಗೂರು:
ಅಧ್ಯಕ್ಷ ಗುಣೇಶ್ ಮಾತನಾಡಿ, ಕ್ಲಬ್ ಕಳೆದ 40 ವರ್ಷಗಳಿಂದ ಹಸಿವು ನಿವಾರಣೆ, ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು, ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣೆ ಸೇರಿದಂತೆ ಪ್ರತಿ ವರ್ಷ ನೂರಾರು ಜನಪರ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಈ ಎಲ್ಲ ಸಾಮಾಜಿಕ ಸೇವೆಗಳು ಜನಮಾನಸಕ್ಕೆ ತಲುಪುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಗೌರವಿಸುವ ಉದ್ದೇಶದಿಂದ ಪತ್ರಿಕಾ ದಿನ ಆಚರಿಸುತ್ತಿದ್ದೇವೆ ಎಂದರು.ಇದೇ ವೇಳೆ ಪತ್ರಕರ್ತರಾದ ಎಚ್.ಎನ್.ಪ್ರಸಾದ್, ಎಚ್.ಎಂ.ಯೋಗೇಶ್, ಎ.ಬಿ.ಚೇತನ್ ಕುಮಾರ್, ಎಸ್.ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ನಾಗೇಶ್, ಡಾ.ಶಂಷುದ್ದೀನ್, ಎ.ಎಸ್.ದೇವರಾಜು, ಪದ್ಮನಾಭ್, ಎನ್.ಕೆ.ಕುಮಾರ್, ಆನಂದಕುಮಾರ್, ಎ.ಟಿ.ಶ್ರೀನಿವಾಸ, ಮುನಿರಾಜು, ಶಿವರಾಜು, ಸ್ವಾಮಿ, ಮನೋಹರ್, ಎನ್.ಯೋಗೇಶ್, ಡಿ ವೈ ನಾಗರಾಜು (ಬಾಬು), ಎಚ್.ವಿ.ರಾಜು, ಗುರುಸಿದ್ದು, ಸಿದ್ದಲಿಂಗ ಸ್ವಾಮಿ, ಸಿ.ಪ್ರವೀಣ, ಡಿ.ಎಲ್ . ಮಾದೇಗೌಡ ಸೇರಿದಂತೆ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಚಿಕ್ಕಬ್ಯಾಡರಹಳ್ಳಿ-ತಿರುಮಲಾಪುರ ಗ್ರಾಮದಲ್ಲಿ ನಡೆದ ಪ್ರಥಮ ವರ್ಷದ ಟಿಪಿ ಕಪ್ ಸೀಜನ್-1 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ಯುವ ಮುಖಂಡ ಸಿ.ಪಿ.ಶಿವರಾಜು ಚಾಲನೆ ನೀಡಿದರು.