ಮಹಾಮಾರಿ ರೋಗಗಳಿಗೆ ಮುಂಜಾಗ್ರತೆ ಮದ್ದು: ಡಾ ಸಂಗೀತಾ

KannadaprabhaNewsNetwork |  
Published : Jul 19, 2024, 12:54 AM IST
ಚಿತ್ರ ಶೀರ್ಷಿಕೆ - ಆಳಂದ1ಆಳಂದ: ಪಟ್ಟಣದ ಹೊಸ ಬಾಳನಗಲ್ಲಿಯಲ್ಲಿ ಆಯೋಜಿಸಿದ್ದ ಡೆಂಘಿ ತಡೆ, ಮಲೇರಿಯಾ ಮಾಸಾಚರಣೆ ಜಾಗೃತಿ ಕರಪತ್ರ ಡಾ. ಸಂಗೀತ ಪಾಟೀಲ ಬಿಡೆಗಡೆಗೊಳಿಸಿ ಮಾತನಾಡಿದರು. ಶಫಿರ ಪಟೇಲ್, ಸಂಜೀವಕುಮಾರ ಇದ್ದರು. | Kannada Prabha

ಸಾರಾಂಶ

ಡೆಂಘೀಯ ಹಾವಳಿಯಿಂದ ತೊಲಗಿಸಲು, ತೊಟ್ಟಿಗಳಲ್ಲಿ ಮತ್ತು ಪಾತ್ರೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೀತೆನಹುಳಿ ತಡೆಯುವ ಏಜೆಂಟ್‍ಗಳನ್ನು ಉಪಯೋಗಿಸಬೇಕು. ಮನೆಯೊಳಗೆ ಮತ್ತು ಹೊರಗೆ ತೊಲೆತಿಂಟೋಲ್ ಅಥವಾ ಮುಲಾಮುಗಳನ್ನು ಬಳಸಿ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಾನಿಯಿಂದ ಮುಕ್ತವಾಗಿಡಲು ಶ್ರಮಿಸಬೇಕೆಂದರು.

ಕನ್ನಡಪ್ರಭ ವಾರ್ತೆ ಆಳಂದ

ನೆರೆ ಹೊರೆಯಲ್ಲಿನ ಅಸ್ವಚ್ಛತೆ ಮತ್ತು ಕಾಲಕಾಲಕ್ಕೆ ಹವಾಮಾನದಲ್ಲಾಗುವ ಬದಲಾವಣೆ, ಸೇವಿಸುವ ನೀರು ಆಹಾರದಲ್ಲಿನ ಕಲಬೇರಕೆ ದುಷ್ಪರಿಣಾಮದಿಂದ ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಮುಂಜಾಗೃತೆ ಮದ್ದಾಗಿದ್ದು ಈ ಕ್ರಮವನ್ನು ಅನುಸರಿಸಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಹೆಬಳಿ ರಸ್ತೆಯಲ್ಲಿನ ಹೊಸ ಬಾಳನಗಲ್ಲಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಮಲೇರಿಯಾ ವಿರೊಧಿ ಮಾಸಾಚರಣೆ ಅಂಗವಾಗಿ ಡೆಂಘೀ ಸೇರಿ ವಿವಿಧ ರೋಗಗಳ ತಡೆ ಜಾಗೃತೆ ಕಾರ್ಯಕ್ರಮದಲ್ಲಿ ಇಲಾಖೆಯ ಜಾಗೃತಿ ಕರಪತ್ರವನ್ನು ಬಿಡುಗಡೆ ಕೈಗೊಂಡು ಅವರು ಮಾತನಾಡಿದರು.

ಡೆಂಘೀಯ ಹಾವಳಿಯಿಂದ ತೊಲಗಿಸಲು, ತೊಟ್ಟಿಗಳಲ್ಲಿ ಮತ್ತು ಪಾತ್ರೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೀತೆನಹುಳಿ ತಡೆಯುವ ಏಜೆಂಟ್‍ಗಳನ್ನು ಉಪಯೋಗಿಸಬೇಕು. ಮನೆಯೊಳಗೆ ಮತ್ತು ಹೊರಗೆ ತೊಲೆತಿಂಟೋಲ್ ಅಥವಾ ಮುಲಾಮುಗಳನ್ನು ಬಳಸಿ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಾನಿಯಿಂದ ಮುಕ್ತವಾಗಿಡಲು ಶ್ರಮಿಸಬೇಕೆಂದರು.

ಮಲೇರಿಯಾ ಜಿಲ್ಲಾ ಮೇಲ್ವಿಚಾರಕ ಶಫಿರ ಪಟೇಲ್, ತಾಲೂಕು ಮೇಲ್ವಿಚಾರಕ ಸಂಜೀವಕುಮಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಶಿವಮ್ಮ ಪಾಟೀಲ, ಮಂಜುಳಾ, ಇಂದಿರಾ, ಉಮಾ, ಸೌಭಾಗ್ಯ, ಅರ್ಚನಾ, ವಂದನಾ, ರೇಣುಕಾ, ನಿರೀಕ್ಷಣಾಧಿಕಾರಿ ಕರಬಸಪ್ಪ ಮತ್ತು ಅರ್ಚನ, ಗ್ರೂಪ್ ಡಿ. ಶ್ರೀಶೈಲ, ಔಷಧಿ ವಿತರಣಾಕಾರ ಅವಿನಾಶ ಸಿಂಧೆ, ಸ್ಟಾಪ್‍ನರ್ಸ್ ಇಂದುಮತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ