ರಾಜ್ಯದ ೨೨೩ ಪ್ರದೇಶ ಬರಪೀಡಿತ
ಕನ್ನಡಪ್ರಭ ವಾರ್ತೆ ಹಾಸನಪಶುಸಂಗೋಪನೆ ಇಲಾಖೆಯವರು ಬರಗಾಲದ ತೀವ್ರತೆಯನ್ನು ಅರಿತು ಜಾನುವಾರು ಹಿತವನ್ನು ಕಾಪಾಡಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್.ನಾರಾಯಣಗೌಡ ಮನವಿ ಮಾಡಿದರು.
ಪಶುಸಂಗೋಪನೆ ಇಲಾಖೆಯವರು ಬರಗಾಲದ ತೀವ್ರತೆಯನ್ನು ಅರಿತು ಜಾನುವಾರು ಹಿತವನ್ನು ಕಾಪಾಡಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್.ನಾರಾಯಣಗೌಡ ಮನವಿ ಮಾಡಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಕರ್ನಾಟಕ ರಾಜ್ಯದಲ್ಲಿ ೨೦೨೩-೨೪ನೇ ಸಾಲಿನಲ್ಲಿ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯದ ೨೨೩ ಪ್ರದೇಶ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಬರಗಾಲದಿಂದ ರಾಜ್ಯದಲ್ಲಿರುವ ಅಂದಾಜು ೧ ಕೋಟಿ ೧೫ ಲಕ್ಷ ಇವೆ. ಇವುಗಳಿಗೆ ಮೇವಿನ ಕೊರತೆ, ಹಸಿರು ಮೇವು, ಕುಡಿಯಲು ನೀರು ಬಹಳ ಅವಶ್ಯಕತೆ ಇರುತ್ತದೆ. ಸರ್ಕಾರವು ಹಸಿರು ಮೇವು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಈ ಕಾರ್ಯಕ್ರಮವು ಸಮರ್ಪಕವಾಗಿ ಅನುಷ್ಠಾನಗೊಂಡಿರುವುದಿಲ್ಲ’ ಎಂದು ತಿಳಿಸಿದರು.
‘ಹಸಿರು ಮೇವನ್ನು ಬೆಳೆಯಲು ಆಯಾ ಗ್ರಾಮಗಳಲ್ಲಿರುವ ಗೋಮಾಳ, ಕೆರೆ ಮತ್ತು ನದಿ ಪಾತ್ರದಲ್ಲಿರುವ ಜಾಗವನ್ನು ಗುರುತಿಸಿ ಹಸಿರು ಮೇವನ್ನು ಬೆಳೆಯಲು ಇರುವ ಯೋಜನೆಯನ್ನು ಸರ್ಕಾರವು ಅನುಷ್ಠಾನಗೊಳಿಸಿರುವುದಿಲ್ಲ. ಮಿನಿಕಿಟ್ನಲ್ಲಿ ಮೇವಿನ ಬೀಜಗಳನ್ನು ವಿತರಿಸಬೇಕೆಂಬ ಮಾರ್ಗಸೂಚಿಯನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಪಾಲಿಸಲು ಸರ್ಕಾರ ವಿಫಲವಾಗಿದೆ. ಜಾನುವಾರಿಗೆ ಮೇವು ಆಹಾರ ನೀರು ವಸತಿಗಳ ಶಿಬಿರಗಳನ್ನು ಆರಂಭಿಸಬೇಕಿತ್ತು, ಸರ್ಕಾರ ಅದನ್ನು ಸಹ ಜಾರಿಗೊಳಿಸಿಲ್ಲ. ರಾಜ್ಯದ ೭೧೩ ಹೋಬಳಿಗಳಲ್ಲಿ ಮೇವು ಬ್ಯಾಂಕ್ಗಳನ್ನು ಪ್ರಾರಂಭಿಸಬೇಕಿತ್ತು, ಇದು ಸಹ ಕಾರ್ಯಗತವಾಗಿಲ್ಲ. ಜಾನುವಾರಿಗೆ ತಗುಲುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಚುಚ್ಚುಮದ್ದುಗಳನ್ನು ಸಹ ನೀಡುತ್ತಿಲ್ಲ. ಇದರಿಂದ ಹಾಲು ಉತ್ಪಾದನೆ ಹಾಗೂ ಜಾನುವಾರು ಸಂತತಿ ಕಡಿಮೆಯಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಜಿಲ್ಲಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರಿಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಲು ಸಹ ವಿಫಲರಾಗಿರುತ್ತಾರೆ. ಆದ್ದರಿಂದ ನಮ್ಮ ಜಿಲ್ಲೆಯ ಪಶುಸಂಗೋಪನೆ ಇಲಾಖೆಯವರು ಇದರ ತೀವ್ರತೆಯನ್ನು ಮನಗೊಂಡು ಜಾನುವಾರು ಹಿತವನ್ನು ಕಾಪಾಡಿ ಈ ಮೂಲಕ ರೈತರಿಗೆ ರಕ್ಷಣೆ ನೀಡಬೇಕು ಎಂದು ನಾವು ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾದ ಮಹೇಶ್, ಪಾಪಣ್ಣ, ನಟರಾಜು ಇತರರು ಇದ್ದರು.