ಕಾರ್ಮಿಕ ದ್ರೋಹವನ್ನು ಸಹಿಸಲಾಗದು: ಬಿ.ಎಂ. ಭಟ್‌

KannadaprabhaNewsNetwork |  
Published : Feb 14, 2026, 03:15 AM IST
ಪ್ರತಿಭಟನೆ | Kannada Prabha

ಸಾರಾಂಶ

ಎನ್ ಡಿಎ ಸರಕಾರದ ರೈತ ವಿರೋಧಿಯಾಗಿ, ಕಾರ್ಮಿಕ ಹಿತಕ್ಕ ಧಕ್ಕೆ ತರುವಂತಹ ಧೋರಣೆಯನ್ನು ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಜೆಸಿಟಿಯು ಹಾಗೂ ಸಂಯುಕ್ತ ರೈತ ಮೋರ್ಚಾ ನೇತೃತ್ವದಲ್ಲಿ ನಡೆಸುತ್ತಿರುವ ಅಖಿಲ ಭಾರತ ಮುಷ್ಕರದ ಭಾಗವಾಗಿ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ತಡೆ ಪ್ರತಿಭಟನಾ ಸಭೆ

ಬೆಳ್ತಂಗಡಿ: ಸಂವಿಧಾನ ಬದ್ದವಾದ ಕಾರ್ಮಿಕ ವರ್ಗದ, ರೈತ ವರ್ಗದ ಮೂಲಭೂತ ಹಕ್ಕುಗಳ ನಿರಾಕರಿಸುವಂತಹ, ಕಾರ್ಮಿಕರು ತ್ಯಾಗ ಬಲಿದಾನಗಳಿಂದ ಕಾನೂನು ರೂಪವಾಗಿ ಪಡೆದ ಹಕ್ಕು ಸವಲತ್ತುಗಳನ್ನು ರದ್ದುಪಡಿಸಿ ಕಾರ್ಪೋರೇಟರ್ ಕಂಪನಿಗಳ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕೇಂದ್ರದ ಮೋದಿ ಸರಕಾರ ಭಾರತೀಯರಿಗೆ ದ್ರೋಹ ಎಸಗಿದ ಕೇಂದ್ರ ಸರಕಾರದ ಕಾರ್ಮಿಕ ದ್ರೋಹವನ್ನು ಎಂದೂ ಸಹಿಸೆವು ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ನ್ಯಾಯವಾದಿ ಬಿ.ಎಂ. ಭಟ್ ಹೇಳಿದ್ದಾರೆ.

ಇಂದು ಕೇಂದ್ರದ ಎನ್ ಡಿಎ ಸರಕಾರದ ರೈತ ವಿರೋಧಿಯಾಗಿ, ಕಾರ್ಮಿಕ ಹಿತಕ್ಕ ಧಕ್ಕೆ ತರುವಂತಹ ಧೋರಣೆಯನ್ನು ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಜೆಸಿಟಿಯು ಹಾಗೂ ಸಂಯುಕ್ತ ರೈತ ಮೋರ್ಚಾ ನೇತೃತ್ವದಲ್ಲಿ ನಡೆಸುತ್ತಿರುವ ಅಖಿಲ ಭಾರತ ಮುಷ್ಕರದ ಭಾಗವಾಗಿ ಬೆಳ್ತಂಗಡಿಯಲ್ಲಿ ನಡೆದ ರಸ್ತೆ ತಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಭಾರತದ ಇತಿಹಾಸ ಹಸಿವು, ಅವಮಾನ, ಅಸಮಾನತೆ, ಜೀತಗಳ ವಿರುದ್ದ ಮಾನವೀಯ ಮೌಲ್ಯಗಳಿಗಾಗಿ ನಡೆದ ಹೋರಾಟದ ದೀರ್ಘ ಹಾದಿಯ ಕಥೆಯಾಗಿದೆ. ಕಾರ್ಮಿಕ ವಿರೋಧಿ, ರೈತ ವಿರೋದಿ ಮಾತ್ರವಲ್ಲ ಮನುಷ್ಯ ವಿರೋಧಿ ಸರಕಾರವಾಗಿದೆ. ಯುವ ಜನಾಂಗವನ್ನು ತನ್ನ ಭಕ್ತರನ್ನಾಗಿಸಿ ಕಿಡಿಗೇಡಿಗಳನ್ನಾಗಿಸಿ, ಕ್ರಿಮನಲ್ ಗಳನ್ನಾಗಿಸಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಾಲದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಲಿ
ಶಾಸಕ ಅಶೋಕ್ ರೈ ಮೇಲಿನ ಕೇಸಿಗೆ ಹೈಕೋರ್ಟು ತಡೆಯಾಜ್ಞೆ