ಅಂಬೇಡ್ಕರ್ ಪುತ್ಥಳಿಗೆ ಅವಮಾನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jan 28, 2024, 01:18 AM ISTUpdated : Jan 28, 2024, 01:19 AM IST
ಚಿತ್ರ 25ಬಿಡಿಆರ್58 | Kannada Prabha

ಸಾರಾಂಶ

ಕಲಬುರಗಿಯಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಖಂಡಿಸಿ ಬಸವಕಲ್ಯಾಣದಲ್ಲಿ ದಲಿತ ಸಂಘಟನೆಗಳಿಂದ ಮೆರವಣಿಗೆ. ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹಿಸಿ ವಿವಿಧ ತಾಲೂಕು ದಲಿತ ಹೋರಾಟ ಕ್ರೀಯಾ ಸಮಿತಿಯಿಂದ ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಕಲಬುರಗಿಯಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಖಂಡಿಸಿ ವಿವಿಧ ತಾಲೂಕು ದಲಿತ ಹೋರಾಟ ಕ್ರೀಯಾ ಸಮಿತಿಯಿಂದ ಬಸವಕಲ್ಯಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಲಬುರಗಿ ಜಿಲ್ಲೆಯ ಕೊಟನೂರನಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್‌ ಪ್ರತಿಮೆಗೆ ಅವಮಾನ ಖಂಡಿಸಿ ತಾಲೂಕಿನ ವಿವಿಧ ತಾಲೂಕು ದಲಿತ ಸಂಘಟನೆಗಳ ಕ್ರೀಯಾ ಸಮೀತಿಯಿಂದ ನಗರದ ಕೋಟೆಯಿಂದ ತಮಟೆ ಭಾರಿಸುತ್ತ ಡಾ.ಅಂಬೇಡ್ಕರ್‌ ವೃತ್ತದವರೆಗೆ ಜಂಟಿಯಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಾ. ಅಂಬೇಡ್ಕರ್‌ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳಿಗೆ ದೇಶದ್ರೋಹ ಪಟ್ಟ ಕಟ್ಟಿ ಗಡಿಪಾರು ಮಾಡುವಂತೆ ಆಗ್ರಹಿಸಿ ಸಿಎಂಗೆ ಬರೆದ ಮನವಿಯನ್ನು ತಹಸೀಲ್ದಾರ್‌ ಮುಖಾಂತರ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಕ್ರೀಯಾ ಹೋರಾಟ ಸಮಿತಿ, ಮಾನವ ಬಂದುತ್ವ ವೇಧಿಕೆ, ಕರ್ನಾಟಕ ದಲಿತ ರಕ್ಷಣಾ ವೇಧಿಕೆ, ವಾಯಿಸ್ ಆಫ್ ಅಂಬೇಡ್ಕರ್‌, ರಾಜ್ಯ ದಲಿತ ಸಂಘರ್ಷ ಸಮಿತಿ, ಬ್ಲ್ಯೂ ಟೈಗರ್ ಸಮಿತಿ, ಡಿಎಸ್ಎಸ್, ಸಮತಾ ಸೈನಿಕ ದಳ, ಭೀಮ್ ಆರ್ಮಿ ಬಸವಕಲ್ಯಾಣ. ಗ್ರಾಮ ಕ್ರಾಂತಿ ಸೇನೆ, ದಲಿತ ಸಂಘಟನಾ ಸೇವೆ, ಬಿ.ಎಸ್ ಪಿ, ಆದಿ ಜಾಂಬವ ಮಾದಿಗ ದಂಡೋರ ಸಮಿತಿ ಹೀಗೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಮನೋಹರ್ ಮೈಸೆ, ಸಿಕಂದರ್ ಸಿಂಧೆ, ದೀಪಕ ಗಾಯಕವಾಡ, ದಿಲೀಪ್ ಸಿಂಧ್ಯೆ, ವಾಮನ ಮೈಸಲಗೆ, ಭೀಮಶಾ ಫುಲೆ, ಶ್ರೀಕಾಂತ ಕಾಂಬಳೆ ಮಂಠಾಳ, ಯುವರಾಜ ಭೇಂಡೆ, ಸಂದೀಫ ಭುಯ್ಯೆ, ಶೀತಲಕುಮಾರ ಸಿಂಧೆ, ರಾಮ ಜಾಧವ, ಬಾಲಾಜಿ ಕಾಂಬಳೆ, ವಿಜಯಕುಮಾರ ಡಾಂಗೆ, ಮಹಾದೇವ ಗಾಯಕವಾಡ, ದತ್ತಾತ್ರಿ ಸೂರ್ಯವಂಶಿ, ಚೇತನ ಕಾಡೆ, ಸಂದೀಪ ಮುಕಿಂದ್, ಶಂಕರ ಫುಲೆ ಕಿಟ್ಟಾ, ರಾಜು ಸೂರ್ಯಂಶಿ, ರಾಜು ಸೂರ್ಯಂಶಿ, ದತ್ತು ಭೇಂಢೆ, ಮಲ್ಲಿಕಾರ್ಜುನ ಮಾಲೆ, ಮುಂತಾದ ಮುಖಂಡರು ಪಾಲ್ಗೊಂಡಿದ್ದರು.

ತಹಸೀಲ್ದಾರ್‌ ಶಾಂತನಗೌಡ ಅವರು ಡಾ. ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ ದಲಿತ ಹೋರಾಟ ಕ್ರೀಯಾ ಸಮೀತಿಯಿಂದ ಮನವಿ ಪತ್ರ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಿಪಿಐ ಅಲಿಸಾಬ ಉಪಸ್ಥಿತರಿದ್ದರು.ಸಸ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!