-ಟಿಯುಸಿಐ ನೇತೃತ್ವದಲ್ಲಿ ಕಾರ್ಮಿಕರು ಧರಣಿ । ಕಂಪನಿ ಅಧಿಕಾರಿಗಳು ನಡೆಸಿದ ಸಂಧಾನ ವಿಫಲ
-----ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಹೆಸರೂರು ಬಳಿ ಇರುವ ಪವನ ವಿದ್ಯುತ್ ಕಂಪನಿ ವಿರುದ್ಧ ಕಾರ್ಮಿಕರ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಧರಣಿನಿರತರೊಂದಿಗೆ ಕಂಪನಿ ಅಧಿಕಾರಿಗಳು ನಡೆಸಿದ ಸಂಧಾನ ವಿಫಲಗೊಂಡಿದೆ.ಪವನ್ ವಿದ್ಯುತ್ ಉತ್ಪಾದನೆ ಮಾಡುವ ಸ್ಥಳದಲ್ಲಿ ಧರಣಿ ನಡೆಸುತ್ತಿರುವ ಕಾರ್ಮಿಕರು ರಿನ್ಯಿಮ್ ಕಂಪನಿ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ವೇತನ, ಕೆಲಸದ ಭದ್ರತೆ ಸೇರಿದಂತೆ ಬೇಡಿಕೆಗಳ ಈಡೇರಿಕೆ ಸಾಧ್ಯವಿಲ್ಲ. ಕಂಪನಿಯ ಕಾನೂನುನಂತೆ ನೀವು ಕೆಲಸ ಮಾಡಬೇಕು ಎಂದು ಹೇಳಿ, ನೀವು ಧರಣಿ ನಡೆಸಿದರೆ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಿ ಬೇರೆಯವರನ್ನು ನೇಮಕ ಮಾಡುತ್ತೇವೆಂದು ಹೇಳಿದರು.
ಇದರಿಂದ ಕೆರಳಿದ ಧರಣಿ ನಿರತ ಕಾರ್ಮಿಕರು ನೀವು ಕೆಲಸದಿಂದ ತೆಗದು ಹಾಕುವ ಮೊದಲು ಜಮೀನುಗಳಲ್ಲಿ ಹಾಕಿರುವ ಫ್ಯಾನ್ಗಳ ಚಾಲನೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಧರಣಿ ನಿರತರು ಮತ್ತು ಪವನ ವಿದ್ಯುತ್ ಉತ್ಪಾದನಾ ಕಂಪನಿ ಅಧಿಕಾರಿಗಳೊಂದಿಗೆ ಮಾತಿಕ ಚಕಮಕಿ ನಡೆಯಿತು.ಕಾರ್ಮಿಕರು ಮತ್ತು ಕಂಪನಿ ಅಧಿಕಾರಿಗಳ ಮಾತಿನ ಚಕಮಕಿಯ ಮಧ್ಯ ಪೊಲೀಸರು ಮಧ್ಯೆ ಪ್ರವೇಶಿಸಿ ಪವನ್ ವಿದ್ಯುತ್ ಉತ್ಪಾದನಾ ಕಂಪನಿಯ ಆಡಳಿತ ಮಂಡಳಿ ಸಂಪನ್ಮೂಲ ಅಧಿಕಾರಿ, ಕಾನೂನು ಸಲಹೆಗಾರರು ಆಗಮಿಸಲಿದ್ದಾರೆ. ಅಂದು ಬೇಡಿಕೆಗಳ ಇತ್ಯರ್ಥದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳ ಬೇಕೆಂದು ಸಲಹೆ ನೀಡಿದರು.
ಧರಣಿಯಲ್ಲಿ ಟಿಯುಸಿಐನ ರಾಜ್ಯಾಧ್ಯಕ್ಷ ಎಂ.ಡಿ ಅಮೀರ ಅಲಿ, ಪವನ ವಿದ್ಯುತ್ ಕಂಪನಿ ಕಾರ್ಮಿಕ ಸಂಘದ ಅಧ್ಯಕ್ಷ ಶಿವನಗೌಡ, ಕಾರ್ಯದರ್ಶಿ ಚನ್ನಬಸವ, ಹೆಚ್. ಬಸವರಾಜ, ರಮೇಶ, ತಿಪ್ಪರಾಜು ಗೆಜ್ಜಲಗಟ್ಟಾ ಸೇರಿದಂತೆ ಕರ್ನಾಟಕ ರಾಜ್ಯ ಪವನ ಮತು ಸೋಲಾರ್ ವಿದ್ಯುತ್ ಗುತ್ತಿಗೆ ಹಾಗೂ ಸಿಬ್ಬಂದಿ ಕಾರ್ಮಿಕ ಸಂಘದವರು ಇದ್ದರು.