ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮುಸ್ಲಿಂ, ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಹಾಗು ಇತರೆ 20 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬಹುಜನ ಸಮಾಜ ಪಕ್ಷ ಮತ್ತು ದಲಿತ ಪರ ಸಂಘಟನೆಗಳು ಬುಧವಾರ ನಗರದಲ್ಲಿ ಬೃಹತ್ ಮೆರವಣಿಗೆ ಮತ್ತು ಧರಣಿ ನಡೆಸಿದವು.ನಗರದ ಜೈ ಭೀಮ್ ಹಾಸ್ಟೆಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮೊದಲು ಡಾ.ಬಿ.ಆರ್.ಅಂಭೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಮೂಲಕ ಎಂಜಿ ರಸ್ತೆ, ಅಬೇಡ್ಕರ್ ವೃತ್ತ ನಂತರ ನಗರ ಹೊರವಲಯದ ಜಿಲ್ಲಾ ಪ್ರಜಾಸೌಧದ ಮುಂಭಾದಲ್ಲಿ ಧರಣಿ ನಡೆಸಿದರು.
ದಲಿತ ಸಿಎಂ ಮಾಡುವ ಗುರಿಈ ವೇಳೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ ಆಗಿದ್ದಾರೆ. ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಸೋಲಿಸಿ ದಲಿತ ಪರ ಹುಟ್ಟಿಕೊಳ್ಳುವ ಪರ್ಯಾಯ ಪಕ್ಷವನ್ನು ಈ ಬಾರಿ ಗೆಲ್ಲಿಸಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡುವುದೆ ತಮ್ಮ ಗುರಿಯಾಗಿದ್ದು, ಅದಕ್ಕಾಗಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತಿದ್ದೇನೆ ಎಂದು ಹೇಳಿದರು.
ದಲಿತ ವಿರೋಧಿ ಸಚಿವಚಿಂತಾಮಣಿಯಲ್ಲಿ ಮೂರು ತಲೆಮಾರಿನ ರಾಜಕೀಯದ ನಂಟಿರುವ ಮನೆ ಈಗಿನ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರ ತಾತ ಆಂಜನೇಯರೆಡ್ಡಿ, ಅವರ ತಂದೆ ಚೌಡರೆಡ್ಡಿ ಕಾಲದಿಂದಲೂ ರಾಜಕೀಯ ಮಾಡಿಕೊಂಡು ಬಂದಿರುವ ತಾವು ಅವರ ರಾಜಕೀಯ ಚೆನ್ನಾಗಿ ಅರಿತಿದ್ದೇನೆ ಸುಧಾಕರ್ ದಲಿತ ವಿರೋಧಿ ದೋರಣೆ ತೋರುತ್ತಿರುವುದು ಗೊತ್ತು. ಅವರ ಮಾತು ಕೇಳಿಕೊಂಡು ಡಿಸಿ ರವೀಂದ್ರ ಚಿಂತಾಮಣಿ ನಗರದಲ್ಲಿನ ಅಂಬೇಡ್ಕರ್ ಪ್ರತಿಮೆ ತೆರವು ಮಾಡಿಸಿದ್ದಾರೆ ಎಂದು ಆರೋಪಿಸಿದರು.
. ಅಂಬೇಡ್ಕರ್ ಬುದ್ದ ಬಸವ ಹುಟ್ಟಿದ ನಾಡಿನಲ್ಲಿ ಇಬ್ಬರು ದಲಿತ ಸಚಿವರ ರಾಜೀನಾಮೆ ಪಡೆದಿದ್ದಾರೆ. ಮೊದಲು ನಾಗೇಂದ್ರ ಈಗ ರಾಜಣ್ಣ ರಾಜೀನಾಮೆ. ಮುಂದಿನ ಚುನಾವಣೆ ಕಾಂಗ್ರೆಸ್ ಸೋಲುವುದು ಖಚಿತ ಎಂದರು..2028ಕ್ಕೆ ಹೊಸ ಪಕ್ಷ ಅಧಿಕಾರಕ್ಕೆ
ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್ ಮಾತನಾಡಿ, ಚಿಂತಾಮಣಿ ನಗರದಲ್ಲಿ ಯಾರಿಂದ ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿದ್ದೀರೋ ಅದೆ ಒಕ್ಕಲಿಗರಿಂದಲೇ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸುತ್ತೇವೆ. 2028ರಲ್ಲಿ ನಡೆಯುವ ಚುನಾವಣೆಯಲ್ಲಿ ದಲಿತ, ಹಿಂದುಳಿದ. ರೈತಪರ ರಾಜಕೀಯ ಪಕ್ಷವನ್ನ ಅಧಿಕಾರಕ್ಕೆ ತರೋಣ ಎಂದರು.ಮನವಿ ಸ್ವೀಕರಿಸಲು ಪ್ರತಿಭಟನಾ ವೇದಿಕೆಗೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರನ್ನು ಸ್ವಾಗತಿಸಿದ ಸಿಎಂ ಇಬ್ರಾಹಿಂ, ಇವರು ಕುರುಬ ಸಮುದಾಯದವರು, ಸಿಎಂ ಸಿದ್ದರಾಮಯ್ಯಗೆ ಆಪ್ತರು ಎಂದು ಪರಿಚಯಿಸಿ, ನೀವು ನಿವೃತ್ತಿಯಾಗುತಿದ್ದಂತೆ ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ಆಹ್ವಾನ ನೀಡುತಿದ್ದಂತೆ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.
ಪ್ರತಿಭಟನೆಯಲ್ಲಿ ಬಿಎಸ್ ಪಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ,ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ್,ಮೂರ್ತಿ,ಭಕ್ತರಹಳ್ಳಿ ಬೈರೇಗೌಡ,ಬಾಲಕುಂಟಹಳ್ಳಿ ಗಂಗಾಧರ್,ವಿಜಯ ನರಸಿಂಹ, ನಾಗಪ್ಪ, ನಾರಾಯಣಸ್ವಾಮಿ, ಮುನಿಕೃಷ್ಣ, ಮತ್ತಿತರರು ಇದ್ದರು.