ಇಂದಿನಿಂದ ಅಧಿಕೃತ ಲೈಸೆನ್ಸ ಪಡೆದ ದಸ್ತಾವೇಜು ಬರಹಗಾರರಿಂದ ಪ್ರತಿಭಟನೆ

KannadaprabhaNewsNetwork |  
Published : Dec 10, 2025, 01:15 AM IST
ಮ | Kannada Prabha

ಸಾರಾಂಶ

ಅಧಿಕೃತ ಲೈಸೆನ್ಸ್ ಪಡೆದಿರುವ ದಸ್ತಾವೇಜು (ಪತ್ರ) ಬರಹಗಾರ (ಬಾಂಡ್ ರೈಟರ್‌ಗಳಿಗೆ) ರಿಗೆ ಪ್ರತ್ಯೇಕ ಲಾಗಿನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ದಸ್ತಾವೇಜು ಬರಹಗಾರರ ಸಂಘದ ಸದಸ್ಯರು ಪಟ್ಟಣದ ಉಪನೋಂದಾಣಿಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಬ್ಯಾಡಗಿ: ಅಧಿಕೃತ ಲೈಸೆನ್ಸ್ ಪಡೆದಿರುವ ದಸ್ತಾವೇಜು (ಪತ್ರ) ಬರಹಗಾರ (ಬಾಂಡ್ ರೈಟರ್‌ಗಳಿಗೆ) ರಿಗೆ ಪ್ರತ್ಯೇಕ ಲಾಗಿನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ದಸ್ತಾವೇಜು ಬರಹಗಾರರ ಸಂಘದ ಸದಸ್ಯರು ಪಟ್ಟಣದ ಉಪನೋಂದಾಣಿಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಉಮೇಶ ಚೌಧರಿ, ಸ್ವಾತಂತ್ರ್ಯ ಪೂರ್ವದಿಂದಲೂ ದಸ್ತಾವೇಜು ಬರಹಗಾರರೇ ಬರೆದುಕೊಟ್ಟು ದಸ್ತೂರ ಹಾಕಿದ ಪತ್ರಗಳಷ್ಟೇ ನೋಂದಣಿ ಆಗುತ್ತಿದ್ದವು, ಅಷ್ಟಕ್ಕೂ ನಾವು ಅಂದಿನ ದಿನಗಳಲ್ಲಿ ಬಾಂಡಗಳನ್ನು ಮಾರಾಟ ಮಾಡಿ ಬದುಕನ್ನು ಕಟ್ಟಿಕೊಂಡಿದ್ದೇವು ಆದರೆ 2002 -03 ರಲ್ಲಿ ಇದನ್ನು ನಮ್ಮಿಂದ ಕಸಿದುಕೊಂಡ ಸರ್ಕಾರ ಬೀದಿಗೆ ಬಂದು ನಿಲ್ಲುವಂತೆ ಮಾಡಿದೆ, ಇತ್ತೀಚೆಗೆ ಕಾವೇರಿ-2 ತಂತ್ರಾಂಶವನ್ನು ಬಳಸುವಂತೆ ಸೂಚನೆ ನೀಡಿದ್ದು ಸಾರ್ವಜನಿಕರಿಗೂ (ಸಿಟಿಜನ್ ಲಾಗಿನ್) ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿದ್ದು, ದಸ್ತಾವೇಜು ಬರಹಗಾರರು ಸಂಕಷ್ಟ ಎದುರಿಸುವಂತಾಗಿದ ಎಂದರು.

ಕಾವೇರಿ-3 ರಲ್ಲಿ ಲೋಪದೋಷ: ಕಚೇರಿ ಕೆಲಸಗಳಿಗೆ ವೇಗ ನೀಡುವ ದೃಷ್ಟಿಯಿಂದ ಕಾವೇರಿ-3 ನ್ನು ಪ್ರಚುರಪಡಿಸಲಾಗಿದೆ. ಇದರಲ್ಲಿಯೂ ಸಾಕಷ್ಟು ಲೋಪದೋಷಗಳಿದ್ದು ಇಲ್ಲಿಯೂ ಸಹ ದಸ್ತಾವೇಜುಗಳ ನೊಂದಣಿ ಸುಲಭವಾಗಿಲ್ಲ. ಹೀಗಾಗಿ ಇವೆಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ ಹಡಗಲಿ, ಕೆ.ಕೆ.ಪಾಟೀಲ, ಪರುಶರಾಮ ಹಡಗಲಿ, ವಿ.ಎಸ್.ಕಲ್ಯಾಣಮಠ ಸೇರಿದಂತೆ ಇನ್ನಿತರರಿದ್ದರು,.

ಡಿ.10 ರಿಂದ ಅನಿರ್ದಿಷ್ಟಾವಧಿ ಮುಷ್ಕರ: ತಮ್ಮೆಲ್ಲಾ ಬೇಡಿಕೆಗಳು ಈಡೇರುವವರೆಗೂ ಯಾವುದೇ ದಸ್ತಾವೇಜುಗಳನ್ನು ನೋಂದಣಿ ಮಾಡಲಾಗುವುದಿಲ್ಲ ಹೀಗಾಗಿ ಡಿ.10ರಿಂದ ಉಪನೋಂದಣಿ ಕಚೇರಿಯೆದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ದಸ್ತಾವೇಜು ಬರಹಗಾರರ ಸಂಘದವರು ಹೇಳಿದರು.

ಕೋರ್ಟ ಮೊರೆಗೂ ಹಿಂಜರಿಯುವುದಿಲ್ಲ: ದಸ್ತಾವೇಜು ಬರಹಗಾರರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೇ ಹೈಕೋರ್ಟ ಮೊರೆ ಹೋಗಲು ಹಿಂಜರಿಯುವುದಿಲ್ಲ. ಕಾರಣ ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಸವರಾಜ ಹಡಗಲಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ