ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎ.ಆರ್.ಬಾಬು ಮಾತನಾಡಿ, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಈ ರೈಲು ಹೊರಡುವ ಸಮಯವನ್ನು ಮಧ್ಯಾಹ್ನ 2.55ಕ್ಕೆ ನಿಗಧಿಪಡಿಸಲು ಮುಖ್ಯ ಕಾರಣವೇನೆಂದರೆ, ಎಚ್ಎಎಲ್, ಬಿಇಎಂಎಲ್ ಮುಂತಾದ ಕಾರ್ಖಾನೆಗಳಲ್ಲಿ ಮೊದಲ ಪಾಳಿಯಲ್ಲಿ ಕೆಲಸಕ್ಕಾಗಿ ಬೆಂಗಳೂರಿನ ಕಡೆಗೆ ಪ್ರಯಾಣಿಸುವ ಸಾವಿರಾರು ಜನರು ಕೆಲಸ ಮುಗಿಸಿ ಮಾರಿಕುಪ್ಪಂ ಕಡೆಗೆ ಹಿಂತಿರುಗುವಾಗ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ, ಕೃಷ್ಣರಾಜಪುರಂ, ವೈಟ್ಫೀಲ್ಡ್ನಲ್ಲಿ ಈ ರೈಲನ್ನು ಹತ್ತಲು ಸಾಧ್ಯವಾಗುವಂತೆ ಮಾಡುವುದು, ಈ ರೈಲಿನ ಪ್ರಾರಂಭದ ನಿಲ್ದಾಣವನ್ನು ವೈಟ್ಫೀಲ್ಡ್ಗೆ ಬದಲಾಯಿಸಲಾಯಿತು. ನಾವು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮೂಲ ಮತ್ತು ನಿರ್ಗಮನ ಸಮಯವನ್ನು ಪುನಃಸ್ಥಾಪಿಸಲಾಗುವುದು ಎಂದು ಅವರು ನಮಗೆ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ಈ ಭರವಸೆ ಈಡೇರಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟಿ.ಅಪ್ಪಯ್ಯಣ್ಣ, ಎಸ್.ಡಿ.ಆನಂದನ್, ಎ.ಪಿಚ್ಚಕಣ್ಣು, ಸಿ.ಆರ್.ಮೂರ್ತಿ, ತಿರುಪತಿ, ಪಿ.ಆನಂದ್ರಾಜ್, ನಿರೇಶ್ಬಾಬು, ವಿಜಯನ್, ಎ.ಸಿ.ವೇಲಾಯುದನ್, ಲಿಯೋರಾಜ, ಶಾಂತ್ಕುಮಾರ್, ನಿಕ್ಸನ್ ಇತರರು ಇದ್ದರು.