ಚನ್ನಪಟ್ಟಣ: ತಾಲೂಕಿನ ರೈತರಿಗೆ ಉಪಟಳ ನೀಡುತ್ತಿರುವ ಎರಡು ಪುಂಡಾನೆಗಳ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಡಿ.20ರಂದು ಶುಕ್ರವಾರ ಬೆಳಗ್ಗೆ ಚಾಲನೆ ನೀಡಲಿದ್ದಾರೆ.
ಚನ್ನಪಟ್ಟಣ ವಲಯದಲ್ಲಿ ಉಪದ್ರವ ಕೊಡುತ್ತಿದ್ದ ೬ ಆನೆಗಳಲ್ಲಿ 4 ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ರಾಮನಗರ ವಲಯ ಅರಣ್ಯಾಧಿಕಾರಿಗಳು ಮನವಿ ಸಲ್ಲಿಸಿದ್ದರು. ಇದರಲ್ಲಿ ಎರಡು ಆನೆ ಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಶುಕ್ರವಾರದಿಂದಲೇ ಕಾರ್ಯಾಚರಣೆ ಆರಂಭಗೊಳ್ಳಲಿದೆ.ಪುಂಡಾನೆಗಳನ್ನು ಸೆರೆ ಹಿಡಿಯಲು ನಾಗರಹೊಳೆ, ದುಬಾರೆ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಪಳಗಿದ ಆನೆಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಗುರುವಾರ ಮಧ್ಯಾಹ್ನವೇ ಪಳಗಿದ ಆನೆ ಮಹೇಂದ್ರ ಆಗಮಿಸಿದ್ದು, ಇನ್ನುಳಿದ ಆನೆಗಳು ರಾತ್ರಿ ವೇಳೆಗೆ ಆಗಮಿಸಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಂಡಾನೆಗಳ ಸೆರೆ ಕಾರ್ಯಾಚರಣೆ ಈ ಬಾರಿ ೬ ಪಳಗಿದ ಆನೆಗಳನ್ನು ಬಳಸಲಾಗುತ್ತಿದೆ. ಮಹೇಂದ್ರ ಆನೆ ಮುಂದಾಳತ್ವದಲ್ಲಿ ಭೀಮಾ, ಪ್ರಶಾಂತ, ಸುಗ್ರೀವ, ಧನಂಜಯ, ಹರ್ಷ ಆನೆಗಳ ತಂಡ ಸಿದ್ದಗೊಂಡಿದೆ.ಟ್ರೀ ಪಾರ್ಕ್ ಬಳಿ ಕ್ಯಾಂಪ್: ಪಳಗಿದ ಆನೆಗಳ ವಾಸ್ತವ್ಯಕ್ಕೆ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಬಳಿ ಇರುವ ಅರಣ್ಯ ಇಲಾಖೆಯ ಟ್ರೀ ಪಾರ್ಕ್ ತಾತ್ಕಾಲಿಕ ಕ್ಯಾಂಪ್ ನಿರ್ಮಿಸಲಾಗಿದೆ. ಮೊದಲಿಗೆ ಚಿಕ್ಕಮಣ್ಣುಗಡ್ಡೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಆರಂಭಗೊಳ್ಳಿದ್ದು, ದಿನಾಂತ್ಯಕ್ಕೆ ಪುನಃ ಆನೆ ಕ್ಯಾಂಪ್ಗೆ ಹಿಂದಿರುಗಿ ಮರುದಿನ ಮುಂದಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆನೆಗಳೊಂದಿಗೆ ಸಿಬ್ಬಂದಿ ಸಹ ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
೬ ಆನೆ, ೮೦ ಸಿಬ್ಬಂದಿ ಭಾಗಿ:ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ೬ ಪಳಗಿದ ಆನೆಗಳೊಂದಿಗೆ ಮಾವುತರು, ಕಾವಾಡಿಗರು ಇರಲಿದ್ದು, ಇವರ ಜತೆಗೆ ಪಶು ವೈದ್ಯರು, ಅರವಳಿಕೆ ತಜ್ಞರು, ಶೂಟರ್, ಆರ್ಎಫ್ಒ, ಡಿಎಫ್ಒ, ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು 80 ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದೆ.
ಜಿಲ್ಲೆಯಲಿವೆ ೪೨ ಆನೆಗಳು:ಕಾವೇರಿ ವನ್ಯಜೀವಿಧಾಮ ವ್ಯಾಪ್ತಿ ಸೇರಿದಂತೆ ರಾಮನಗರ ವಿಭಾಗದಲ್ಲಿ ಸುಮಾರು ೪೦ ರಿಂದ ೪೨ ಆನೆಗಳು ಇವೆ. ಇದರಲ್ಲಿ ಚನ್ನಪಟ್ಟಣ, ಸಾತನೂರು ಅರಣ್ಯ ವ್ಯಾಪ್ತಿಯಲ್ಲಿ ೨೫ಕ್ಕೂ ಹೆಚ್ಚು ಆನೆಗಳಿವೆ. ಈ ಹಿಂದೆ ಇವುಗಳಲ್ಲಿ ಸುಮಾರು ೨೭ ಆನೆಗಳನ್ನು ಕಾವೇರಿ ವನ್ಯಜೀವಿ ವಿಭಾಗಕ್ಕೆ ಹಿಮ್ಮೆಟ್ಟಲಾಗಿದೆ. ಆದರೆ, ಕೆಲವು ಆನೆಗಳು ಆಹಾರ ಹುಡುಕುತ್ತ ಆಗಾಗ ಗಡಿಭಾಗದ ಗ್ರಾಮಗಳಿಗೆ ನುಗ್ಗಿ ರೈತರ ಜಮೀನ ಮೇಲೆ ದಾಂಗುಡಿ ಇಡುತ್ತವೆ.
ಪುಂಡಾನೆಗಳ ಸೆರೆ ಕಾರ್ಯಾಚರಣೆ ಹೊಸದೇನು ಅಲ್ಲ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಬಾರಿ ಆನೆ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಚನ್ನಪಟ್ಟಣ ಹಾಗೂ ಸಾತನೂರು ಭಾಗದಲ್ಲಿ ಎರಡು ಪುಂಡಾನೆಗಳ ಸೆರೆಗೆ ೨೦೧೭ರಲ್ಲಿಯೂ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲಾಗಿತ್ತು.ಇನ್ನು ೨೦೨೨ ಹಾಗೂ ೨೦೨೩ರಲ್ಲಿಯೂ ತಾಲೂಕಿನಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ಮಖ್ನಾ, ಟಸ್ಕರ್ ಹಾಗೂ ಇನ್ನೊಂದು ಪುಂಡಾನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಲಾಗಿತ್ತು. ಅದರಲ್ಲಿ ಮಖ್ನಾ ಆನೆ ಹಾಗೂ ಟಸ್ಕರ್ ಮರಳಿ ಚನ್ನಪಟ್ಟಣ ವಲಯಕ್ಕೆ ಬಂದು ಉಪಟಳ ಮುಂದುವರಿಸಿವೆ.
ಬಾಕ್ಸ್ ......................ಪುಂಡಾನೆ ಸೆರೆ ಕಾರ್ಯಾಚರಣೆ ಸುಲಭವಲ್ಲ
ಪುಂಡಾನೆಗಳ ಸೆರೆ ಕಾರ್ಯಾಚರಣೆ ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಅಪಾರ ಶ್ರಮದ ಜತೆಗೆ ಅಪಾರ ಪ್ರಮಾಣದ ಹಣವೂ ವೆಚ್ಚವಾಗುತ್ತದೆ. ಮೊದಲಿಗೆ ಪುಂಡಾನೆಯನ್ನು ನಿರ್ಧಿಷ್ಟವಾಗಿ ಗುರುತಿಸಬೇಕಾಗುತ್ತದೆ. ಆನಂತರ ಆನೆ ಎಲ್ಲಿ ಬೀಡು ಬಿಟ್ಟಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗುತ್ತದೆ.ಪುಂಡಾನೆ ಬೀಡುಬಿಟ್ಟಿರುವ ಸ್ಥಳ ಕಾರ್ಯಾಚರಣೆಗೆ ಸೂಕ್ತವಾಗಿ ಇಲ್ಲದಿದ್ದಲ್ಲಿ ಪಳಗಿದ ಆನೆಗಳ ಸಹಾಯದಿಂದ ಪುಂಡಾನೆಯನ್ನು ಸಮತಟ್ಟಾದ ಪ್ರದೇಶಕ್ಕೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿ ಅರವಳಿಕೆ ಮದ್ದು ನೀಡಿ ಆನೆಗೆ ಪ್ರಜ್ಞೆ ತಪ್ಪುವಂತೆ ಮಾಡಲಾಗುತ್ತದೆ. ಆನಂತರ ಆನೆಯನ್ನು ಸರಪಳಿ ಹಾಗೂ ಹಗ್ಗದಿಂದ ಕಟ್ಟಿ, ಆನೆ ಮೇಲೆ ನೀರು ಸುರಿದು ಪ್ರಜ್ಞೆ ಬರಿಸಿದ ನಂತರ ಲಾರಿಗೆ ಸಾಗಿಸಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ.
ಬಾಕ್ಸ್........................ಮೊದಲಿಗೆ ಟಸ್ಕರ್ ಭೇಟೆ!
ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಟಸ್ಕರ್ ಓಡಾಡುತ್ತಿರುವುದನ್ನು ಅರಣ್ಯ ಇಲಾಖೆ ವಾಚರ್ಗಳು ಪತ್ತೆ ಹೆಚ್ಚಿದ್ದು, ಮೊದಲಿಗೆ ಟಸ್ಕರ್ ಆನೆಯನ್ನೇ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲಾಗುವುದು. ಈ ಹಿಂದೆ ಟಸ್ಕರ್ ಸೆರೆ ಹಿಡಿದ ವೇಳೆ ಅದಕ್ಕೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ರೆಡಿಯೋ ಕಾಲರ್ ಸಹಾಯದಿಂದ ಟಸ್ಕರ್ ಇರುವಿಕೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಅದನ್ನೇ ಮೊದಲು ಸೆರೆಹಿಡಿದು ಸ್ಥಳಾಂತರಿಸುವ ಯೋಜನೆ ಹಾಕಿಕೊಂಡಿದ್ದಾರೆ.ಬಾಕ್ಸ್.................
ಕಾರ್ಯಾಚರಣೆಗೆ ಇಂದು ಸಿಪಿವೈ ಚಾಲನೆಪುಂಡಾನೆ ಸೆರೆ ಕಾರ್ಯಾಚರಣೆಗೆ ಶುಕ್ರವಾರ ಬೆಳಗ್ಗೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಲಿದ್ದಾರೆ.
ಶುಕ್ರವಾರ ಬೆಳಗ್ಗೆ ೯ಗಂಟೆಗೆ ತಾಲೂಕಿನ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಆನೆಗಳಿಗೆ ಪೂಜೆ ಸಲ್ಲಿಸಿ ಪುಂಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಲಿದ್ದಾರೆ.ಕೋಟ್:
ಉಪಟಳ ನೀಡುವ ೨ ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದಾಳತ್ವ ವಹಿಸುವ ಮಹೇಂದ್ರ ಆನೆ ಈಗಾಗಲೇ ಆನೆ ಕ್ಯಾಂಪ್ಗೆ ಆಗಮಿಸಿದ್ದು, ಇನ್ನುಳಿದ ಆನೆಗಳು ರಾತ್ರಿ ವೇಳೆ ಆಗಮಿಸಲಿದೆ. ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಳ್ಳಲಿದೆ.- ಮಲ್ಲೇಶ್, ಆರ್ಎಫ್ಒ, ಚನ್ನಪಟ್ಟಣ
ಪೋಟೋ೧೯ಸಿಪಿಟಿ೧:ಆನೆ ಕ್ಯಾಂಪ್ಗೆ ಆಗಮಿಸಿರುವ ಮಹೇಂದ್ರ ಆನೆ.